AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಸಿ. ಚಂದ್ರಶೇಖರ್ ರವರ ಆರೋಗ್ಯ ದ ಸುಧಾರಣೆಗೆ ಅಗತ್ಯಹಣವನ್ನು ನೀಡಿ ಮಾನವೀಯತೆಯನ್ನು ಮೆರೆದಿರುತ್ತದೆ.#avintvcom

1 min read
Featured Video Play Icon

ಮಾನವಿಯತೆಗೆ ಸಂದ ಗೌರವ

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ತಮ್ಮ ಸ್ವಗ್ರಾಮವಾದ ಕಲ್ಲುಗುಡ್ಡ ಗ್ರಾಮಕ್ಕೆ ಬಂದಿರುವ ಕೆ.ಸಿ. ಚಂದ್ರಶೇಖರ್ ರವರ ವಿಷಯವನ್ನು ತಿಳಿದ ಮ್ಯಾನ್ ಕೈಂಡ್ ಕ್ಲಬ್ ಬಣಕಲ್ ಸಂಸ್ಥೆಯ ಸದಸ್ಯರು ಇಂದು ಕೆ.ಸಿ.ಚಂದ್ರಶೇಖರ್ ರವರನ್ನು ಭೇಟಿಮಾಡಿ ಶ್ರೀಯುತರ ಆರೋಗ್ಯವನ್ನು ವಿಚಾರಿಸಿ ಸಂಸ್ಥೆಯು ಗೌರವಾನ್ವಿತರಿಗೆ ಶುಭಕೋರಿ ಹಾರೈಸಿತು.

ಬಂಧುಗಳೇ ನಿಮಗೆಲ್ಲರಿಗೂ ತಿಳಿದಿರುವಂತೆ ತೀವ್ರಉಸಿರಾಟದ ಸಮಸ್ಯೆಯಿಂದ ಬಳಲಿ ಸಾವು -ಬದುಕಿನ ಹೋರಾಟವನ್ನು ಮಾಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಾದ ಮಲ್ಲಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕೆತ್ಸೆಯನ್ನು ಪಡೆಯಲು ಹಣದ ಸಮಸ್ಯೆಯನ್ನು ಎದುರಿಸಿದ ಮೂಡಿಗೆರೆಯ ವಕೀಲರಾದ ಕೆ.ಸಿ.ಚಂದ್ರಶೇಖರ ರವರ ನೆರವಿಗೆ ಸಾರ್ವಜನಿಕರು ನೆರವಾಗಬೇಕೆಂದು ಬಣಕಲ್ ನ ಮ್ಯಾನ್ ಕೈಂಡ್ ಕ್ಲಬ್ ಸಂಸ್ಥೆಯು ದಿನಪತ್ರಿಕೆ,
ಅವಿನ್ ಟಿವಿ
ಸಾಮಾಜಿಕ ಜಾಲತಾಣಗಳಲ್ಲಿ ಜನರಲ್ಲಿ ಸಮಸ್ಯೆಯ ಕುರಿತು ಮನವಿಯನ್ನು ಮಾಡಿಕೊಂಡಿತ್ತು.

ನಮ್ಮ ಮನವಿಯನ್ನು ಪರಿಗಣಿಸಿ ಸಮಾಜವು ಕೆ.ಸಿ. ಚಂದ್ರಶೇಖರ್ ರವರ ಆರೋಗ್ಯ ದ ಸುಧಾರಣೆಗೆ ಅಗತ್ಯವಿದ್ದ ಹಣವನ್ನು ನೀಡಿ ಮಾನವೀಯತೆಯನ್ನು ಮೆರೆದಿರುತ್ತದೆ.

ಈ ಸಮಾಜದ ಅಮೂಲ್ಯವಾದ ಆಸ್ತಿಯಾದ ಚಂದ್ರಶೇಖರ್ ರವರ ಜೀವವನ್ನು ಉಳಿಸಿಕೊಟ್ಟ ಸಹೃದಯ ಮಾನವೀಯ ಮನಸುಗಳಿಗೆ ಹಾಗೂ ಈ ಗಂಭೀರ ಸುದ್ದಿಯನ್ನು ಪ್ರಚಾರ ಮಾಡಿದ ಎಲ್ಲಾ ಮಾಧ್ಯಮ ಸ್ನೇಹಿತರಿಗೆ, ಎಲ್ಲಾಗ್ರಾಮದ ಜನರಿಗೆ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳಿಗೆ,ಸ್ನೇಹಿತರಿಗೆ, ಬಂಧುಮಿತ್ರರಿಗೆ ಸಂಘ ಸಂಸ್ಥೆಗಳಿಗೆ ಮ್ಯಾನ್ ಕೈಂಡ್ ಕ್ಲಬ್ ಬಣಕಲ್ ಸಂಸ್ಥೆಯು ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

#ನಮ್ಮ ಸಂಸ್ಥೆಯು ಮಾಡಿಕೊಂಡ ಮನವಿಯನ್ನು ಪರಿಗಣಿಸಿ ಒಟ್ಟು ರೂ 4 ಲಕ್ಷದ 40ಸಾವಿರ ರೂಗಳು ಚಿಕೆತ್ಸೆಗೆ ಸಹಾಯವಾಗಿ ಬಂದಿರುತ್ತದೆ ಎಂದು ಬಿ.ಎಂ.ಕುಮಾರ್ ಮತ್ತು ಕೆ.ಸಿ. ಚಂದ್ರಶೇಖರ್ ರವರು ಮ್ಯಾನ್ ಕೈಂಡ್ ಕ್ಲಬ್ ಬಣಕಲ್ ಸಂಸ್ಥೆಯ ಗಮನಕ್ಕೆ ತಂದಿರುತ್ತಾರೆ.

“ಮನುಷ್ಯತ್ವವೆ ನಮ್ಮ ಧ್ಯೇಯ ”

ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author