AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಅನಾಥ ಶವದ ಅಂತಿಮ ಸಂಸ್ಕಾರ*ಮೃತದೇಹದ ಪರೀಕ್ಷೆಯನ್ನು ನಡೆಸಿ ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಕಾರ್ಯ #avintvcom

1 min read

ಅನಾಥ ಶವದ ಅಂತಿಮ ಸಂಸ್ಕಾರ

5/4/2021/ ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರ ತತ್ಕೊಳ ರಸ್ತೆಯ ಬದಿಯಲ್ಲಿ ಅನಾಥ ಮೃತದೇಹವು ಪತ್ತೆಯಾಗಿತ್ತು.
ಈ ಮೃತದೇಹವನ್ನು ಆವತ್ತೇ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಆದರೂ ಇವರೆಗೆ
ಅಂದರೆ 8/4/2021/ ವರೆಗೆ ವಾರಿಸುದಾರರು ಯಾರು ಪತ್ತೆಯಾಗದ ಕಾರಣ ಈ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಹೋಗಿ ಅಲ್ಲಿಂದ ತಂದು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಮೃತದೇಹದ ಪರೀಕ್ಷೆಯನ್ನು ನಡೆಸಿ ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮೂಡಿಗೆರೆಯ ಪೊಲೀಸ್ ಠಾಣಾ ಸಿಬ್ಬಂದಿ ವರ್ಗದವರು ಹಾಗೂ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಪಿಶ್ ಮೊಣು.
ಅಬ್ದುಲ್ ರಹಿಮಾನ್ .
ಅಸೇನಾರ್ ಬಿಳುಗುಳ.
ಅಂಬುಲೆನ್ಸ್ ಡ್ರೈವರ್ ಶಿವಪ್ಪ.
ಮುನಿಸಿಪಾಲಿಟಿ ಪೌರಕಾರ್ಮಿಕರು ಎಲ್ಲರೂ ಸೇರಿ ಮೃತದೇಹವನ್ನು ಅಂತಿಮ ಸಂಸ್ಕಾರ ಮಾಡಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author