*ಅನಾಥ ಶವದ ಅಂತಿಮ ಸಂಸ್ಕಾರ*ಮೃತದೇಹದ ಪರೀಕ್ಷೆಯನ್ನು ನಡೆಸಿ ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಕಾರ್ಯ #avintvcom
1 min readಅನಾಥ ಶವದ ಅಂತಿಮ ಸಂಸ್ಕಾರ
5/4/2021/ ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರ ತತ್ಕೊಳ ರಸ್ತೆಯ ಬದಿಯಲ್ಲಿ ಅನಾಥ ಮೃತದೇಹವು ಪತ್ತೆಯಾಗಿತ್ತು.
ಈ ಮೃತದೇಹವನ್ನು ಆವತ್ತೇ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಆದರೂ ಇವರೆಗೆ
ಅಂದರೆ 8/4/2021/ ವರೆಗೆ ವಾರಿಸುದಾರರು ಯಾರು ಪತ್ತೆಯಾಗದ ಕಾರಣ ಈ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಹೋಗಿ ಅಲ್ಲಿಂದ ತಂದು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಮೃತದೇಹದ ಪರೀಕ್ಷೆಯನ್ನು ನಡೆಸಿ ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮೂಡಿಗೆರೆಯ ಪೊಲೀಸ್ ಠಾಣಾ ಸಿಬ್ಬಂದಿ ವರ್ಗದವರು ಹಾಗೂ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಪಿಶ್ ಮೊಣು.
ಅಬ್ದುಲ್ ರಹಿಮಾನ್ .
ಅಸೇನಾರ್ ಬಿಳುಗುಳ.
ಅಂಬುಲೆನ್ಸ್ ಡ್ರೈವರ್ ಶಿವಪ್ಪ.
ಮುನಿಸಿಪಾಲಿಟಿ ಪೌರಕಾರ್ಮಿಕರು ಎಲ್ಲರೂ ಸೇರಿ ಮೃತದೇಹವನ್ನು ಅಂತಿಮ ಸಂಸ್ಕಾರ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.