ಮೂಡಿಗೆರೆ ಜೆಸಿ ವತಿಯಿಂದ ಜೆಸಿ ಸದಸ್ಯರುಗಳಿಗೆ *ಪರಿಣಾಮ ಭಾಷಣ ಕಲೆ* ತರಬೇತಿಯನ್ನು ನೀಡಿದರು#avintvcom
1 min read
ಮೂಡಿಗೆರೆ ಜೆಸಿ ವತಿಯಿಂದ ಜೆಸಿ ಸದಸ್ಯರುಗಳಿಗೆ 04-04-2021 ರಂದು ಭಾನುವಾರ ಸಂಜೆ 6:00 ಗಂಟೆಗೆ ಪರಿಣಾಮ ಭಾಷಣ ಕಲೆ ರಾಷ್ಟ್ರೀಯ ತರಬೇತುದಾರರಾದ ಜೇಸಿ ವಿಜಯ್ ಕುಮಾರ್ ಶೃಂಗೇರಿ ಇವರು,ತರಬೇತಿಯನ್ನು ನೀಡಿದರು. ನಂತರ 8-30 ಕ್ಕೆ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ಅವರು ವಹಿಸಿದ್ದರು ಸ್ವಾಗತವನ್ನು ನಿಕಟಪೂರ್ವ ಅಧ್ಯಕ್ಷರಾದ ಜೇಸಿ ರವಿಕುಮಾರ್ ಅವರು ಸ್ವಾಗತಿಸಿದರು, ಜೇಸಿ ಕಾರ್ಯದರ್ಶಿ ಶ್ರೇಷ್ಠಿ ವಂದಿಸಿದರು. ಮುಖ್ಯ ಅತಿಥಿಗಳಾಗಿ ಜೆಸಿ ರಾಷ್ಟ್ರೀಯ ತರಬೇತುದಾರರಾದ ಜೆಸಿ ವಿಜಯಕುಮಾರ್ ಅವರು ವಹಿಸಿದ್ದರು.ಜೆಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ,ಜೆಸಿರೇಟ್ ಕಾರ್ಯದರ್ಶಿ ಕೃತಿಪ್ರದೀಪ್, ಇದ್ದರು.ಈ ಸಭೆಯಲ್ಲಿ ಸೆಲ್ಯೂಟ ದ ಸೈಲೆಂಟ್ ವರ್ಕರ್ ಅಡಿಯಲ್ಲಿ ಮೂಡಿಗೆರೆ ತಾಲ್ಲೂಕ್ ಕುನ್ನಹಳ್ಳಿ ಗ್ರಾಮದ ನಿವೃತ್ತ ಯೋಧರಾದ ಕೆ.ಎಸ್ ಲಕ್ಷ್ಮಣಗೌಡ ಮತ್ತು ಅವರ ಧರ್ಮಪತ್ನಿಯವರಾದ ಶ್ರೀಮತಿ ಕಮಲಾಕ್ಷಮ್ಮ ಅವರನ್ನು ಜೇಸಿ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಮಾರ್ಚ್ ತಿಂಗಳ ಜೆಸಿ ಸದಸ್ಯರುಗಳ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಭೆಯಲ್ಲಿ ಮೂಡಿಗೆರೆಯ ಜೆಸಿ ಗೌರವಾನ್ವಿತ ಜೇಸಿ ಜೇಸಿರೇಟ್ ಪೂರ್ವಾಧ್ಯಕ್ಷರುಗಳು, ಜೇಸಿ ಸದಸ್ಯರುಗಳು ವಲಯ 14 ರ ಜೆಜೆಸಿ ಕೊ-ಆಡಿನೇಟರ್ ಪ್ರಸಾದ್ , ಪಾಲ್ಗೊಂಡಿದ್ದರು . ಹಾಗೂ ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕರು, ಹಾಲಿ ಸದಸ್ಯರಾದ ಕುನ್ನಹಳ್ಳಿ ಕೆ.ಆರ್ ಶಿವಾನಂದ ಭಾಗವಹಿಸಿದ್ದರು.
ವರದಿ
ಮಗ್ಗಲಮಕ್ಕಿ ಗಣೇಶ್
ಬ್ಯೂರೊ ನ್ಯೂಸ್
ಮೂಡಿಗೆರೆ