AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎನ್ ಆರ್ ಪುರ ತಾಲ್ಲೂಕಿನ ದಾವಣ ಗ್ರಾಮದಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮ ನಡೆಯಿತು.#avintvcom

1 min read
Featured Video Play Icon

ಸಾಂಸ್ರುತಿಕ ಸಂಜೆ.

ದಿನಾಂಕ-11-03-2021ನೇ ಗುರುವಾರ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲ್ಲೂಕಿನ ದಾವಣ ಗ್ರಾಮದಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ನೆರವೇರಿಸಿ ಮಾತನಾಡಿ-ಗ್ರಾಮದಲ್ಲಿನ ಅಭಿರುದ್ದಿ ಆಗಬೇಕಾದ್ರೆ ಈ ರೀತಿಯ ಕ್ರಿಯಾತ್ಮಕ ಸಂಘಗಳ ಅವಶ್ಯಕತೆ ಇದೆ.
ಹಾಗಾಗಿ ಎಲ್ಲರ ಸಹಕಾರ ಗ್ರಾಮದ ಅಭಿರುದ್ದಿಯ ಮೂಲ ಮಂತ್ರ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು ಪ್ರಮುಖ ಭಾಷಣಕಾರರು ಆದ ರಮೇಶ್ ಪೂಜಾರಿ ಮಾತನಾಡಿ- ಶಿವರಾತ್ರಿ ಕಾರ್ಯಕ್ರಮದ ಮೂಲಕ ಕಲೆ,ಕಲಾವಿದರ ಬೆಸೆಯುವ ಒಂದು ವೇದಿಕೆ ಆಗಬೇಕು..
ಆ ಮುಖೇನ ನಾವೆಲ್ಲ ಅಧ್ಯಾತ್ಮ ಚಿಂತನೆ ಮೈ ಗೂಡಿಸಿಕೊಳ್ಳ ಬೇಕು.
ಒಂದು ಗ್ರಾಮ ಶ್ರೀಮಂತ ಎಂದು ಕರೆಸಿಕೊಳ್ಳಲು ಅಲ್ಲಿ ಈ ರೀತಿಯ ಸಾಂಸ್ಕೃತಿಕ ಕ್ರಾಂತಿ ಆಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷ್ಣಮೂರ್ತಿ ಮಾತನಾಡಿ-ಗ್ರಾಮದಲ್ಲಿ ಇಂತಹ ಸುಂದರ ಕಾರ್ಯಕ್ರಮ ನಡೆಯಲು ನಮ್ಮ ಗ್ರಾಮದ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ.
ಇದೇ ರೀತಿಯ ಹಲವು ಕಾರ್ಯಕ್ರಮವನ್ನು ಗ್ರಾಮದ ಯುವ ಮನಸ್ಸುಗಳು ಆಯೋಜಿಸಬೇಕು ಎಂದರು..
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವನ್ನು ಪವನ್ ಕುಮಾರ್ ರವರಿಗೆ ನೀಡಿ ಗೌರವಿಸಲಾಯಿತು..ಇದರ ದಾನಿಗಳು ಅಭಿಜ್ಞಾ, ಅಪೂರ್ವ
ಇದೆ ಸಂದರ್ಭದಲ್ಲಿ ರಾಜಪ್ಪ ರಿಗೆ ಸನ್ಮಾನ ಮಾಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ನಾಗರತ್ನ, ಸವಿತಾ,ಸುಮಲತಾ,ವಿಜಯಕುಮಾರ್,ವಿಶಾಂತ್ ಡಿ ಸೌಜ,ಶಿವಮೂರ್ತಿ,ಮನೋಹರ,ನಯನ ,
ಮೂಡಿಗೆರೆ ಮಿತ್ರ ಜನಪದ ಕಲಾ ಸಂಘ ದ ಅಧ್ಯಕ್ಷ ಎಂ ಎಸ್ ಆನಂದ್ ಭಾಗವಿಸಿದ್ದರು
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶೋಭಾರಮೇಶ್ ಮಾಡಿದರು,ನಿರೂಪಣೆ ಜಿ ಸಿ ಪ್ರೀತಿ ಹಾಗೂ ಸ್ವಾಗತ ಮತ್ತು ವಂದನಾರ್ಪಣೆಯನ್ನು ಕೆ ಡಿ ಪಿ ಸದಸ್ಯ ಗ್ರಾಮದ ಮುಖಂಡ ಉಮೇಶ್ ನೆರವೇರಿಸಿದರು.
ನಂತರ ಗ್ರಾಮದ ಕಲಾವಿದರು ಹಾಗೂ ಜಿಲ್ಲೆಯ ನಾಡಿನ ಹೆಸರಾಂತ ಕಲಾ ತಂಡ ಮೂಡಿಗೆರೆ ಮಿತ್ರ ಜಾನಪದ ಕಲಾ ಸಂಘ ಇವರಿಂದ ಬೆಳಗ್ಗೆ 6ರ ವರೆಗೂ ಸಾಂಸ್ಕೃತಿಕ ಕಲರವ ನಡೆದು ಜನರನ್ನು ರಂಜಿಸಿತು.
ಕಲಾವಿದರು ಎಂ ಎಸ್ ಆನಂದ್,
ಬಕ್ಕಿ ಮಂಜುನಾಥ್,
ರವೀಂದ್ರ,
ಜಯಪಾಲ್,
ಮಾಲೆನಹಳ್ಳಿ ಮಹೇಶ್,
ಅಭಿ,ಸಂದೇಶ್,ಶಶಿ, ಶಿಕ್ಷಕರಾದ ಸುರೇಶ್,ಕೃಷ್ಣ, ಯಶೋಧ,
ರೇಖಾ,ನಯನ,ಪವಿತ್ರ,
ಪಲ್ಲವಿ,
ಕುಮಾರಿ ಕಲಾವಿದರಾಗಿ ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author