#ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತ ಮತ್ತು ಜನ ಸಾಮಾನ್ಯರ ಕುರಿತು ಮನವಿavintvcom
1 min read
ರೈತ ಮತ್ತು ಜನ ಸಾಮಾನ್ಯರ ಕುರಿತು ಮನವಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಚಿಕ್ಕೋಡಿ ತಾಲೂಕಿನ ತಸಿಲ್ದಾರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಚಿಕ್ಕೋಡಿ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷರು ಮಂಜುನಾಥ್ ಬಾಳು ಪರಗೌಡರು ಕೇರಳ ಸರ್ಕಾರ 2014. ರಿಂದ 2017ರ ಒಳಗಿನ ಕೆಸಗಳನ್ನು ಕರ್ನಾಟಕದ ಎಲ್ಲೋ ಬೋರ್ಡ್ ವಾಹನಗಳಿಗೆ2020/21ರಲ್ಲಿ ದಂಡ ವಿಧಿಸುತ್ತಿದ್ದಾರೆ. RTO ಅಧಿಕಾರಿಗಳ ನಿರ್ಲಕ್ಷತನದಿಂದ ಈಗ ಹಳೆಯ ವಾಹನಗಳನ್ನು ತೆಗೆದುಕೊಂಡಿರುವ ಮಾಲೀಕರುಗಳಿಗೆ ಆ ದಂಡವನ್ನು ತುಂಬಿಸಲು ವಾಹನ ನಂಬರನ್ನು ಆನ್ಲೈನ್ನಲ್ಲಿ ಬ್ಲಾಕ್ ಲಿಸ್ಟನಲ್ಲಿ ಹಾಕುತ್ತಿದ್ದಾರೆ. ಕಾರಣ ಆ ಟೈಮನ ಮಾಲೀಕರುಗಳಿಗೆ ಟ್ಯಾಕ್ಸ್ ಸಂಬಂಧಪಟ್ಟದ್ದು ಆಗಿರುತ್ತದೆ. ಸರ್ಕಾರದ ಕಾನೂನಿನ ಪ್ರಕಾರ ಒಂದು ವರ್ಷ ಮಾತ್ರ ದೇಪುಟೇಶನ್ ಮೇಲೆ ಕಾರ್ಯನಿರ್ವಹಿಸಬೇಕೆಂದು ಕಾನೂನು ಇದೆ .ಈಗ ಸದ್ಯ ಅಥಣಿ ತಾಲೂಕಿನ ಹುಲಗಬಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದ್ದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಸುಮಾರು 9ರಿಂದ 10 ವರ್ಷಗಳಿಂದ ಜಗದೀಶ್ ಬಡಿಗೆರ ಎಂಬ ಅಧಿಕಾರಿಯು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಸದುಪಯೋಗ ಕ್ಕಿಂತ ದುರುಪಯೋಗ ಜಾಸ್ತಿಯಾಗುತ್ತಿದೆ. ಮತ್ತು ಕುಮಾರಸ್ವಾಮಿಯವರು ಮಾಡಿದ ರೈತರ ಸಾಲಮನ್ನಾ ಇದುವರೆಗೆ ಆಗಿಲ್ಲ ಮತ್ತು ರೈತ ವಿರೋಧಿ ಕಾಯ್ದೆಗಳು ಎಪಿಎಂಸಿ ಕಾಯ್ದೆ ಭೂ ಸುಧಾರಣೆ ಕಾಯ್ದೆ ವಿದ್ಯುತ್ ಖಾಸಗೀಕರಣಗಳನ್ನು ಪಡೆಯುವಂತೆ ಪೆಟ್ರೋಲ್ ಡೀಸೆಲ್ ದಿನಬಳಕೆ ವಸ್ತುಗಳು ಬೆಲೆಗಳು ಹೆಚ್ಚಾಗುತ್ತಿದ್ದು ಕೂಲಿ ಕಾರ್ಮಿಕರ ಪರಸ್ಥಿತಿ ಹದಗೆಡುತ್ತಿದೆ. ಮತ್ತು ನೆರೆ ಸಂತ್ರಸ್ತರ ಪರಿಹಾರ. ಮರು ಸರ್ವೇಗಳು ಆಗಬೇಕು. ರಾಯಬಾಗ್ ನಿಂದ ನನದಿ ವಾಡಿಗೆ ಹಾದುಹೋಗಿರುವ ಜಿ ಎಲ್ ಬಿ ಸಿ ಕಾಲುವೆ 15 ವರ್ಷದಿಂದ ನೀರು ಹರಿಸುತ್ತಿಲ್ಲಾ ಈ ಕಾಲುವೆಯಿಂದ ಸುಮಾರು ಹತ್ತಾರು ಹಳ್ಳಿಗಳ ರೈತರು ಬೆಳೆಗಳನ್ನು ಬೆಳೆಯುತ್ತಾರೆ. ಮತ್ತು ಲಾಕ ಡೌನ್ ಟೈಮಲ್ಲಿ ಮಾರುಕಟ್ಟೆಗಳು ಬಂದ ಈದ್ದು ರೈತ ಬೆಳೆದ ಟೊಮೆಟೊ ಬದನೆ ಇನ್ನಿತರ ತರಕಾರಿಗಳು ಹೊಲದಲ್ಲೇ ಕೊಳೆತುಹೋಗಿವೆ ಅದರ ಪರಿಹಾರ ಸರಕಾರ ಇಲ್ಲಿಯವರೆಗೆ ಮುಟ್ಟಿಸಿರುವುದಿ ಲ್ಲಾ. ಮತ್ತು ಕೆರೂರ್ ಕೆಂಪಟ್ಟಿ ರೋಡ್ 15 ವರ್ಷದಿಂದ ರಸ್ತೆ ನಿರ್ಮಾಣ ಮಾಡಿರುವುದಿಲ್ಲ ಈ ಹಿಂದೆ ಬಹಳಷ್ಟು ಅಪಘಾತಗಳು ನಡೆದಿವೆ.ಇದರಿಂದ ರೈತ ಕೂಲಿ ಕಾರ್ಮಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಚಿಕ್ಕೋಡಿ ತಾಲೂಕಿನ ಹಸಿರು ಸೇನೆ ಅಧ್ಯಕ್ಷರು ಆರೋಪ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ ಇಲ್ಲವಾದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.