ಮೂಡಿಗೆರೆ ಜೆಸಿ ಭವನದಲ್ಲಿ ರಕ್ತದಾನ ಶಿಬಿರದಲ್ಲಿ 38 ರಕ್ತದಾನಿಗಳು ರಕ್ತ ನೀಡಿದರು.#avintvcom
1 min read
….ರಕ್ತದಾನ ಶಿಬಿರ……..
ಜೆಸಿಐ ಮೂಡಿಗೆರೆ
ಹಾಗೂ ಸಾಮಾಜಿಕ ಸೇವಾ ಸಂಸ್ಥೆ
ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಮೂಡಿಗೆರೆ.
ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಮೂಡಿಗೆರೆ ಜೆಸಿ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದ್ದರು.
ಸ್ವಾಗತವನ್ನು ನಿಕಟಪೂರ್ವ ಅಧ್ಯಕ್ಷರಾದ ರವಿ ಕುಮಾರ್ ಮಾಡಿದರು.
ವಂದನಾರ್ಪಣೆಯನ್ನು ಸಹಕಾರ್ಯದರ್ಶಿ ಜೆಸಿ ನಾಜಿಮ್ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಪೀಸ್ ಅವರ್ನೆಸ್ ಪದಾಧಿಕಾರಿಗಳಾದ ವೆಂಕಟೇಶ್ , ಭಾಷಿರ್ , ಮುಭಾರಕ್, ಅವರ್ನೆಸ್ ನ ಸಂಸ್ಥಾಪಕರಾದ ಅಲ್ತಾಫ್ , ಜೇಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಜೆಸಿರೆಟ್ ಕಾರ್ಯದರ್ಶಿ ಕೃತಿಪ್ರದೀಪ್ ,ಜೆಸಿ ಹಮೀದ್ ಇದ್ದರು ಚಿಕ್ಕಮಗಳೂರು ಹೋಲಿ ಕ್ರಾಸ್ ಆಸ್ಪತ್ರೆಯ ಸಿಬ್ಬಂದಿಯವರಾದ ಸಂತೋಷ ,ಸಿಬ್ಬಂದಿಗಳು ಇದ್ದರು.
ರಕ್ತದಾನ ಶಿಬಿರದಲ್ಲಿ 38 ರಕ್ತದಾನಿಗಳು ರಕ್ತ ನೀಡಿದರು.
ಕಾರ್ಯಕ್ರಮದಲ್ಲಿ ತಾ:ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಾಂತ್ ಕುಮಾರ್.ಸಂಚಾಲಕ ಪ್ರಕಾಶ್ ಅವರು ಇದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್