SSLC ಮಕ್ಕಳಿಗೆ ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ,ಗಣಿತ ಹಾಗೂ ವಿಜ್ಞಾನ ವಿಷಯದ ಬಗ್ಗೆ ಕಾರ್ಯಾಗಾರ#avintvcom
1 min read
ದಿನಾಂಕ 03/04/2021ರಂದು ವರ್ತಕ ಸಮುದಾಯ ಭವನ ಜನ್ನಾಪುರ. ಮೂಡಿಗೆರೆ ತಾಲೂಕು ಇಲ್ಲಿ SSLC ಮಕ್ಕಳಿಗೆ ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ,ಗಣಿತ ಹಾಗೂ ವಿಜ್ಞಾನ ವಿಷಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರಪತಿ ವಿಜೇತ, ಗಣಿತ ತಜ್ಞ
ಡಾ: ಶಿವುಕುಮಾರ್ ಜಿ ಬೆಂಗಳೂರು ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು
ಕ್ಷೇತ್ರ ಶಿಕ್ಷಣಾಧಿಕಾರಿ
ಗಳಾದ,ಶ್ರೀ ಹೇಮಂತ್ ರಾಜ್ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರು ಆದ ಸ್ಮಿತಾ ಸವಿತಾ ಲೋಬೊ, ಚಿಕ್ಕಮಗಳೂರು ಸರ್ಕಾರಿ ಮುಸ್ಲಿಂ ನೌಕರರ ಜಿಲ್ಲಾಧ್ಯಕ್ಷರಾದ
ಡಾ:ಫೈರೋಜ್ ಅಹಮದ್ ಭಾಗವಹಿದ್ದರು. ಅಧ್ಯಕ್ಷತೆಯನ್ನು ಜೆಸಿಐ ಜನ್ನಾಪುರ ಸಮೃದ್ಧಿಯ ಅಧ್ಯಕ್ಷರಾದ ಜೆಸಿ ಸಂತೋಷ್ ಜನ್ನಾಪುರ ಇವರು ವಹಿಸಿದ್ದರು.
ಕಾರ್ಯಾಗಾರದಲ್ಲಿ ಗೋಣಿಬೀಡು ಹೋಬಳಿಯ ನಾಲ್ಕು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಚಿನ್ನಿಗಾ ಸರ್ಕಾರಿ ಪ್ರೌಢಶಾಲೆ ಗೆ ಬಟ್ಟೆ ಹೊಲಿಗೆ ಯಂತ್ರವನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದ ನಿರ್ದೇಶಕರು ಆದ ಖಜಾಂಚಿ ಜೆಸಿ ಸಂತೋಷ, ಕಾರ್ಯದರ್ಶಿ ಜೆಸಿ ವಿನಯ್ ಹಾಗೂ ಜೆಸಿ ಪದಾಧಿಕಾರಿಗಳು ಭಾಗವಹಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.