AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರುನಾಡಿನಲ್ಲಿ ಮಲಯಾಳಿ ಸಂಘ ಉದ್ಘಾಟನೆ.ಸಮಾರಂಭ#avintvcom

1 min read
Featured Video Play Icon

ಕರುನಾಡಿನ ನೆಲ ಜಲದ ಉಳಿವಿಗೆ ಕಂಕಣ ಬದ್ದರಾಗೋಣ…… ಬ್ಮಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ಘಾಟನೆ ಸಮಾರಂಭ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕರುನಾಡಿನ ಮಲಯಾಳಿಗಳು ಕರ್ನಾಟಕದ ನೆಲಜಲದ ಉಳಿವಿಗೆ ಕಂಕಣಬದ್ದರಾಗೋಣ ಎಂದು ಬಣಕಲ್ ಬ್ಮಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದ ಬ್ಮಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಲಯಾಳಂ, ಬ್ಯಾರಿ, ತುಳು, ಕೊಡವ, ಮರಾಠಿ, ತಮಿಳು ಮುಂತಾದ ಭಾಷಿಗರು ಹಲವು ಶತಮಾನಗಳಿಂದ ಕರುನಾಡಿನಲ್ಲಿ ಹುಟ್ಟಿ ಬೆಳೆದಿದ್ದು ಇಲ್ಲಿನ ನೆಲ ಜಲ ಅನ್ನ ಅಕ್ಷರವನ್ನು ಪಡೆದು ಕರುನಾಡಿನವರೇ ಆಗಿ ಹೋಗಿದ್ದಾರೆ. ಕನ್ನಡ ನಾಡು ನುಡಿಯ ರಕ್ಷಣೆ ಮೊದಲ ಆದ್ಯತೆಯಾಗಬೇಕಿದೆ ಎಂದರು. ಉಪನ್ಯಾಸ ನೀಡಿ ಮಾತನಾಡಿದ ಸ್ಪೈಸಸ್ ಪ್ಲಸ್‍ನ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಆನೆದಿಬ್ಬ, ಸಮುದಾಯದ ಸಂರ್ವಾಗೀಣ ಅಭಿವೃದ್ದಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದ್ದು ಶೋಷಿತ ವರ್ಗ ಸಂಘಟಿತರಾಗಬೇಕಿದೆ ಎಂದರು. ಸಕಲೇಶಪುರ ತಾಲೂಕು ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಉದೇವಾರ, ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಮನೆಮನೆಗೆ ತಲುಪಿಸಬೇಕಿದೆ. ಶೋಷಿತರ ಧ್ವನಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ನಾರಾಯಣಗುರು ಮಾರ್ಗದಲ್ಲಿ ನಡೆಯಬೇಕಿದೆ ಎಂದರು. ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ, ಗೌರವಾಧ್ಯಕ್ಷ ಗುಣಶೇಖರ್, ಬಣಕಲ್ ಠಾಣೆ ಪಿಎಸ್‍ಐ ಶ್ರೀನಾಥ್ ರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ದಾದಾಮಣಿ, ಗಿರಿಯಪ್ಪ, ಬಣಕಲ್ ಠಾಣೆ ಎಎಸ್‍ಐ ಶಶಿ, ಸಮಾಜ ಸೇವಕ ಆರೀಪ್, ಬ್ಯಾಂಕ್ ಉದ್ಯೋಗಿ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾನೂನು ಸಲಹೆಗಾರ ಪರೀಕ್ಷಿತ್ ಜಾವಳಿ, ಗೌರಿಗಂಡಿ ಮಲಯಾಳಿ ಸಂಘದ ಅಧ್ಯಕ್ಷ ರವಿ ಗೌರಿಗಂಡಿ, ಮುಖ್ಯ ಅತಿಥಿಗಳಾದ ರಾಜು ಆಲ್ದೂರು, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪಧಾಧಿಕಾರಿಗಳು ಇದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author