2020 ರ ರಾಜ್ಯ ಮಟ್ಟದ “ವಿಶೇಷ ಸಾಧನೆ “ಪ್ರಶಸ್ತಿ ಗೆ ವಿಶ್ವಚೇತನ ಅಭಿವೃದ್ಧಿ ಸಂಸ್ಥೆ. #avintvcom
1 min read
ಕರ್ನಾಟಕ ಸರಕಾರದ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರ ಇವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿರುವ ಶ್ರೀ ಜೀಜಾ ಮಾತಾ ವಿಶ್ವಚೇತನಾಭಿವೃದ್ದಿ ಸಂಸ್ಥೆಯು ಗಣನೀಯ ಸೇವೆಯನ್ನು ಗುರುತಿಸಿ ಶ್ರೀ ಶಾರದಾದೇವಿ ಬುದ್ದಿಮಾಂದ್ಯ ಮಕ್ಕಳ ವಸತಿಯ ವಿಶೇಷ ಶಾಲೆಗೆ 2020 ರ ರಾಜ್ಯ ಮಟ್ಟದ “ವಿಶೇಷ ಸಾಧನೆ” ಪ್ರಶಸ್ತಿ ಲಭಿಸಿದ್ದಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆದರ್ಶ ದಂಪತಿಗಳಾದ ಶಂಕರ ಶಿಂದೆ ಹಾಗೂ ಶಾಂತ ಶಿಂದೆ ಅವರಿಗೆ ಅಭಿನಂದನೆ ಸಲ್ಲಿಸಿ. ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮಾತನಾಡಿ ಏನು ಅರಿಯದ ತಿಳಿವಳಿಕೆ ಇಲ್ಲದ ಮಕ್ಕಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡುತ್ತಿರುವದು ಶ್ಲಾಘನೀಯವಾದದ್ದು.ಹೆತ್ತ ತಂದೆ ತಾಯಿ ಇಂತಹ ಮಕ್ಕಳನ್ನು ಜೋಪಾನ ಮಾಡಲು ಕಷ್ಟಕರ ಇರುವಾಗ ಶಿಂದೆ ದಂಪತಿ ಮಾಡುತ್ತಿರುವದು ದೊಡ್ಡ ಸಾಧನೆ ಇವರಿಗೆ ನಮ್ಮದು ಸಹಕಾರ ಇದೆ ಅದೆ ರೀತಿ ಗ್ರಾಮ ಪಂಚಾಯತ ಮಟ್ಟದಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರ ಹಾಗೂ ಜನಪ್ರತಿನಿಧಿಗಳು ಎಲ್ಲಾ ರೀತಿಯಿಂದ ಸೌಲಭ್ಯ ಒದಗಿಸಿ ಸರ್ಕಾರದ ಅಡಿಯಲ್ಲಿ ಈ ಸಂಸ್ಥೆಗೆ ಜಾಗ ನೀಡಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ರಾದ ಸಂತೋಷ ಕಲ್ಲೋತ್ತಿ ,ಅಶೋಕ್ ಗಾಡಿವಡ್ಡರ,ಯುವ ಮುಖಂಡರಾದ ರಾಮು ಮಗದುಮ್ಮ , ಅಂಬೇಡ್ಕರ್ ಯುವ ಸೇನೆ ಮಾಧ್ಯಮ ಘಟಕ ರಾಜ್ಯಾಧ್ಯಕ್ಷ ಮಹೇಶ ಶರ್ಮಾ ,ಶಿವ ಸೇನಾ ಜಿಲ್ಲಾ ಅಧ್ಯಕ್ಷ ದಾದಾಸಾಹೇಬ ಪಾಟೀಲ ,ಶಿವ ಸೇನೆ ಜಿಲ್ಲಾ ಕಾರ್ಯದರ್ಶಿ ರೂಪಾಲಿ ಪಾಟೀಲ,ಎಂ ಎಂ ಎಸ್ ತಾಲೂಕ ಅಧ್ಯಕ್ಷ ಅನೀಲ ಭಾಮನೆ ಸಂತೋಷ ಪೂಜಾರಿ ಉಪಸ್ಥಿತರಿದ್ದರು www.avintv.com