ರಾಕೇಶ್ 2018ರಲ್ಲಿ ಬೆಳಗಾವಿಯಲ್ಲಿ ಸೈನಿಕ ತರಬೇತಿ ಸೇನೆಗೆ ಸೇರ್ಪಡೆಗೊಂಡಿದ್ದರು. #avintvcom
1 min read
ಯೋಧ ರಾಕೇಶ್ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮನ
ಹಾಸನ(ಅರಕಲಗೋಡು): ಹಿಮಾಚಲ ಪ್ರದೇಶದಲ್ಲಿ ಕರ್ತವ್ಯ ಸಂದರ್ಭ ತೀವ್ರ ಅನಾರೋಗ್ಯಕ್ಕೆ ಈಡಾಗಿ ಛತ್ತಿಸ್ಗಡ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟ ರಾಕೇಶ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಹುಟ್ಟೂರಿಗೆ ಆಗಮಿಸಿದ್ದು ಅರಕಲಗೋಡುವಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.ಸ್ಥಳೀಯ ಶಾಸಕ ಎ.ಟಿ ರಾಮಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು,ಅಧಿಕಾರಿಗಳು ರಾಕೇಶ್ ರವರ ಅಂತಿಮ ದರ್ಶನ ಪಡೆದಿದ್ದು ಸಕಲ ಗೌರವದಿಂದ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಬಾಣದಹಳ್ಳಿಗೆ ತೆಗೆದುಕೊಂಡು ನಡೆಸಲು ನಿರ್ಧರಿಸಿದ್ದಾರೆ.
ರಾಕೇಶ್ 2018ರಲ್ಲಿ ಬೆಳಗಾವಿಯಲ್ಲಿ ಸೈನಿಕ ತರಬೇತಿ ಸೇನೆಗೆ ಸೇರ್ಪಡೆಗೊಂಡಿದ್ದರು.