ಶ್ರೀ ಬಸವ ಮಂದಿರ ದೊದ್ದಕುರುಬರಹಳ್ಳಿ ಕಲ್ಯಾಣನಗರ ,ಚಿಕ್ಕಮಗಳೂರಿನಲ್ಲಿ ನದೆಸಲಾಯಿತು…#avintvcom
1 min read
ಕರ್ನಾಟಕ ನಾಟಕ ಅಕಾಡೆಮಿ,ಬೆಂಗಳೂರು
ಕಲಾಸೇವ ಸಂಘ (ರಿ), ಚಿಕ್ಕಮಗಳೂರು
ಶ್ರೀ ಬಸವತತ್ವ ಪೀಠ (ರಿ) ಶ್ರೀ ಬಸವಮಂದಿರ ಚಿಕ್ಕಮಗಳೂರು
ಇವರ ಸಹಯೋಗದಲ್ಲಿ “ರಂಗ ಪ್ರಸಾದನ ತರಬೇತಿ ಶಿಬಿರ ” ದಿನಾಂಕ 03_2_2021 ರಿಂದ 07_2_2021 ರವರೆಗೆ
ಶ್ರೀ ಬಸವ ತತ್ವ ಪೀಠ (ರಿ)ಶ್ರೀ ಬಸವ ಮಂದಿರ ದೊದ್ದಕುರುಬರಹಳ್ಳಿ ಕಲ್ಯಾಣನಗರ , ಚಿಕ್ಕಮಗಳೂರಿನಲ್ಲಿ ನದೆಸಲಾಯಿತು…
ಈ ಐದು ದಿನಗಳ ಶಿಬಿರವನ್ನು ಬಿಸಲೇ ಹಳ್ಳಿ ಸೋಮಶೇಖರ್ ಬಹಳ ಅಚ್ಚುಕಟ್ಟಾಗಿ ಊಟ ವಸತಿಗಳನೆಲ್ಲ ನಿಬಾಯಿಸಿದರು,
ಹಲವಾರು ಜಿಲ್ಲೆಗಳಿಂದ 20 ಕ್ಕು ಹೆಚ್ಚು ಶಿಬಿರಾರ್ತಿಗಳು ಶಿಬಿರದಲ್ಲಿದ್ದರು,
ಕುಮಾರಿ ಪ್ರತಿಭಾ,ರಂಗ ನಿರ್ದೇಶಕಿ,ನೀನಾಸಂ ಪದವೀಧರರಾದವರು,ಇವರು ಶಿಬಿರರ್ತಿಗಳಿಗೆ ಹಲವು ರಂಗ ಚಟುವಟಿಕೆಗಳೊಂದಿಗೆ, ರಂಗ ಪ್ರಸಾದನದ ಕಲಿಕೆ ನೀಡಿದರು
ದಿನಾಂಕ 7 _2_2021 ಭಾನುವಾರ ಶಿಬಿರದ ಸಮರೋಪ ಸಮಾರಂಭವನ್ನು ಮಾಡಲಾಯಿತು ನಂತರ
ಶ್ರೀ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಸಮಾರೋಪದ ನುಡಿಯನ್ನಾಡಿದರು
ಎಲ್ಲಾ ಶಿಬಿರರ್ತಿಗಳಿಗೆ ಪ್ರಶಂಸ ಪತ್ರಗಳನ್ನು ಶ್ರೀಮತಿ ಎ.ಎನ್.ಮಾಲಿನಿ ರವರು ವಿತರಿಸಿದರು ,
ಮುಖ್ಯ ಅತಿಥಿಗಳಾಗಿ :ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಹಾವೀರ್ ಜೈನ್
ಹಾಗೂ ಡಾ॥ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳು ಹಾಗೂ ಶ್ರೀ ಎಚ್.ಡಿ.ತಮ್ಮಯ್ಯ ಹಾಗೂ ಎಲ್ಲ ಗಣ್ಯರಿಗೂ ಹಾಗೂ ತರಬೇತಿ ನೀಡಿದ ಪ್ರತಿಭಾರವರಿಗೂ ಹಾಗೂ ಬಿಸಲೇಹಳ್ಳಿ ಸೋಮಶೇಖರ್ ಹಾಗೂ ಮರುಳಸಿದ್ದಾ ಸ್ವಾಮೀಜಿರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು..
ಹಲವಾರು ಹಿರಿಯ ರಂಗ ಕಲಾವಿದರು , ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರುಗಳು ಉಪಸ್ತಿತರಿದ್ದರು .
ವರದಿ
ಮಗ್ಗಲಮಕ್ಕಿ ಗಣೇಶ್