AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿನ್ನೆ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದ ಬಾಳೂರು ಹೋಬಳಿ ಆದಿದ್ರಾವಿಡ ಸೇವಾ #avintvcom

1 min read
Featured Video Play Icon

ಆದಿದ್ರಾವಿಡ ಸಮುದಾಯದ ಸಮಾವೇಶ.

“ಆದಿದ್ರಾವಿಡ ಸಮುದಾಯದ ಪ್ರತಿಯೊಬ್ಬರು ಸಂಘಟಿತರಾಗಬೇಕೆಂದು ಆದಿದ್ರಾವಿಡ ಸೇವಾ ಸಂಘದ ರಾಜ್ಯಾಧ್ಯಕ್ಷ  ಶಿವಾನಂದ್ ಬಲ್ಲಾಲ್ ಬಾಗ್ ತಿಳಿಸಿದರು.

ನಿನ್ನೆ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದ ಬಾಳೂರು ಹೋಬಳಿ ಆದಿದ್ರಾವಿಡ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ   ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಆದಿದ್ರಾವಿಡ ಸಮುದಾಯದ ಪ್ರತಿಯೊಬ್ಬರು ಸಂಘಟಿತರಾದರೆ ಮಾತ್ರ ಸಮುದಾಯದ ಅಭಿವೃದ್ದಿ ಸಾಧ್ಯ.ಸಮುದಾಯದ ಜನ  ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಹಿಂದುಳಿದಿದ್ದು ಈ ಎಲ್ಲಾ ಕ್ಷೇತ್ರದಲ್ಲಿ ಸಮುದಾಯದ ಪ್ರತಿಯೊಬ್ಬರು ಸಬಲರಾಗಬೇಕಾದರೆ ಮೊದಲು ಸಂಘಟಿತರಾಗಬೇಕೆಂದು ತಿಳಿಸಿದರು.

ಆದಿದ್ರಾವಿಡ ಸೇವಾಸಂಘ ಹಾಸನ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶಂಕರ್ ಬಾಳುಪೇಟೆ ಮಾತನಾಡಿ.

ಈ ಕಾರ್ಯಕ್ರಮದ ಮೂಲಕ ಆದಿದ್ರಾವಿಡ ಸಮುದಾಯದ ಜನ ಎಷ್ಟರಮಟ್ಟಿಗೆ ಸಂಘಟಿತರಾಗಿದ್ದಾರೆಂದು ತಿಳಿಯುತ್ತದೆ. ಹಾಗಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಅನಿವಾರ್ಯ ಎಂದರು.

ಆದಿದ್ರಾವಿಡ ಕೊಡಗು ಜಿಲ್ಲಾಧ್ಯಕ್ಷರಾದ ಸೋಮಪ್ಪ ಮಾತನಾಡಿ.ಆದಿದ್ರಾವಿಡ ಸಮುದಾಯದವರು ಬೇರೆ ಬೇರೆ ಜಾತಿಪ್ರಮಾಣಪತ್ರವನ್ನು ಹೊಂದಿದ್ದು. ಸಮುದಾಯದ ಪ್ರತಿಯೊಬ್ಬರು ಆದಿದ್ರಾವಿಡ ಎಂದು ತಿದ್ದುಪಡಿ ಮಾಡಿಸುವುದು ಇದಕ್ಕೆ ರಾಜ್ಯ ಹಾಗೂ ಜಿಲ್ಲಾ ಸಮಿತಿಯಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಎಂದರು.

ಚೈತನ್ಯ ಸಹಕಾರಿ ಬ್ಯಾಂಕ್ ನ ನಿರ್ಧೇಶಕರಾದ ಕೃಷ್ಣಸೂಟರ್ ಪೇಟೆ ಮಾತನಾಡಿ .ಆದಿದ್ರಾವಿಡ ಸಮುದಾಯದ ಮೊದಲ ಚೈತನ್ಯ ಸಹಕಾರಿ ಬ್ಯಾಂಕ್ ಮಂಗಳೂರಿನಲ್ಲಿ ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿದೆ.ಇದು ಆದಿದ್ರಾವಿಡ ಸಮುದಾಯದ ಜನರಿರುವ ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಸ್.ಮೊನಪ್ಪ, ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಸದಸ್ಯರಾದ ಶೇಖರ ಕುಕ್ಕೇಡಿ.

ದೈವದ ಪಾತ್ರಿ ಐತಪ್ಪ ಛೇಗು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬು ಬಿಲ್ಲೊಟ್ಟ ವಹಿಸಿದ್ದರು.  ದೈವದ ಪಾತ್ರಿಗಳಾದ ಸುನೀಲ್ ಸಕಲೇಶಪುರ. ರಮೇಶ್ ಸಬ್ಬೇನಹಳ್ಳಿ. ಆದಿದ್ರಾವಿಡ ಚಿಕ್ಕಮಗಳೂರು  ಜಿಲ್ಲಾಧ್ಯಕ್ಷರಾದ ದೇಜಪ್ಪ ಅಬ್ರುಕುಡಿಗೆ. ಹಾಸನ ಜಿಲ್ಲಾಧ್ಯಕ್ಷರಾದ ಆನಂದ ಅಲಸುಲಿಗೆ.  ಸಮುದಾಯದ ಸಂತೋಷ್  ಸಾಲಿಯಾನ್.   ಮಹಾಬಲ .ಕೃಷ್ಣಪ್ಪ ಜಾವಳಿ. ಮಂಜುನಾಥ್ ಮೇಲ್ಕುಡಿಗೆ. ವಸಂತ್ ಹಾರ್ಗೋಡು.  ತನಿಯಪ್ಪ. ರವಿ. ಸೀನಾ. ಬಾಬು. ಮುಂತಾದವರಿದ್ದರು.

ಸಭಾಕಾರ್ಯಕ್ರಮದ ಮೊದಲು ಅಥಿತಿ ಗಣ್ಯರನ್ನು ವಾದ್ಯಗೋಷ್ಠಿಯೊಂದಿಗೆ ಭವ್ಯಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.ಇದೇ ಸಂದರ್ಭದಲ್ಲಿ ಬಾಳೂರು ಹೋಬಳಿಯ ನೂತನ ಆದಿದ್ರಾವಿಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆನಡೆಯಿತು.

 

ಇದರಲ್ಲಿ

ಅಧ್ಯಕ್ಷರಾಗಿ ತನಿಯಪ್ಪ. ಉಪಾಧ್ಯಕ್ಷರುಗಳಾಗಿ ಶಿವಪ್ಪ. ನಾರಾಯಣ. ಸುಂದರ ಸಂಪ್ಲಿ. ಕಾರ್ಯದರ್ಶಿಯಾಗಿ ಉಮೇಶ್. ಸಹಕಾರ್ಯದರ್ಶಿಗಳಾಗಿ ಶ್ರೀಧರ್ ಮೇಲ್ಕುಡಿಗೆ.

 

ರಾಜು ಗಬ್ಗಲ್. ಶಂಕರ್ ಹೇಮಾವತಿ. ಖಜಾಂಚಿಗಳಾಗಿ ಬಿ.ಕೆ.ಸಂಜೀವ. ರವಿ ಸಂಪಿಗೆಖಾನ್. ಸುರೇಶ್ ಮರ್ಕಲ್. ಮತ್ತು ಆರಾಧನಾ ಸಮಿತಿಯ ಸದಸ್ಯರುಗಳಾಗಿ

 

ದುಗ್ಗಪ್ಪ.ಸಂಜೀವ.ಲಕ್ಷ್ಮಣ್.ಸುರೇಶ್.ಕಾಡ್ಯಮೇಸ್ತ್ರಿ.ಸುಂದರ.ಕೂಸ.ರಾಮಣ.ನಾರಾಯಣ.ದೂಜ ಇವರು ನೇಮಕಗೊಂಡರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author