ಮೂಡಿಗೆರೆ ಜೇಸಿ ವತಿಯಿಂದ ತಾರೀಖು 23.01.2021 ನೆ ಶನಿವಾರ ಮೂಡಿಗೆರೆ ಜೆಸಿ ಭವನದಲ್ಲಿ ನೇತಾಜಿ #avintvcom
1 min read
ಮೂಡಿಗೆರೆ ಜೇಸಿ ವತಿಯಿಂದ ತಾರೀಖು 23.01.2021 ನೆ ಶನಿವಾರ ಮೂಡಿಗೆರೆ ಜೆಸಿ ಭವನದಲ್ಲಿ ನೇತಾಜಿ *ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮೂಡಿಗೆರೆ ಜೇಸಿ ಪೂರ್ವಾಧ್ಯಕ್ಷರು ಹಾಗೂ ರೋಟರಿ ಪೂರ್ವಾಧ್ಯಕ್ಷರು ಆದ ವಿನೋದ್ ಕುಮಾರ್ ಶೆಟ್ಟಿಯವರು ನೇತಾಜಿಯವರು 1897 ಜನವರಿ 23 ರಂದು ಒರಿಸ್ಸಾದ ಕಡಕ್ ಊರಿನ ನಿಷ್ಠಾವಂತ ವಕೀಲರು ಆದ ರಾಯ್ ಬಹದ್ದೂರ್ ಜಾನಕೀನಾಥ ಬೋಸ್ ತಾಯಿ. ಪ್ರಭಾವತಿ ದೇವಿಯವರ 9ನೇ ಪುತ್ರರಾಗಿ ಜನಿಸಿದ ನೇತಾಜಿಯವರು 1919 ರಲ್ಲಿ ವಿದೇಶಕ್ಕೆ ಹೋಗಿ ಐ.ಸಿ ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು ಕೆಲವೆ ದಿನಗಳಲ್ಲಿ ಅದನ್ನು ವಾಪಸು ಮಾಡಿ ಬ್ರಿಟಿಷ್ ಸರ್ಕಾರದ ಸೇವೆಯ ಗುಲಾಮಗಿರಿ ಬೇಡ ಮಾತೃಭೂಮಿಯ ಬಂದ ವಿಮೋಚನೆಗೆ ಈ ಜೀವ ಮೀಸಲು ಎಂದರು.
ಜೆಸಿ ಅದ್ಯಕ್ಸರಾದ ಚಂದ್ರಶೇಖರ್ ಮಾತನಾಡಿ
1943ರಲ್ಲಿ ದೆಹಲಿ ಚಲೋಗೆ ಕರೆಯನ್ನು ಕೊಟ್ಟರು ದಂಡನಾಯಕನ ಉಡುವು ಧರಿಸಿ ಧೀರ ನಿಲುವಿನ ಸ್ವತಂತ್ರ ಭಾರತ ಸರಕಾರದ ಸ್ಥಾಪನೆಯನ್ನು ಘೋಷಿಸಿದರು 1944 ಜನವರಿ 24 ರಂದು ರಂಗೂನಿನಲ್ಲಿ ಭಾರತೀಯರು ಸ್ವಾತಂತ್ರ್ಯೋತ್ಸವನ್ನು ಆಚರಿಸಿದರು ಇವರು ಭಾರತದ ದೇಶದ ಮೊದಲ ಅಂಗಾಮಿ ಪ್ರಧಾನ ಮಂತ್ರಿಯಾಗಿದ್ದರು ಹಾಗೂ ಭಾರತದ ವೀರರೇ, ನನಗೆ ನಿಮ್ಮ ರಕ್ತ ಕೊಡಿ, ನಿಮಗೆ ನಾನು ಸ್ವಾತಂತ್ರ್ಯ ಕೊಡುಸುತ್ತೇನೆ ಎಂದು ಕರೆನೀಡಿದ ಸುಭಾಷ್ ಚಂದ್ರ ಬೋಸ್ ರವರನ್ನು ದೇಶದ ಜನರು ನೇತಾಜಿ ಎಂದು ಪ್ರೀತಿ, ಗೌರವಗಳಿಂದ ಕರೆಯಲಾಗುತ್ತಿದೆ. ನೇತಾಜಿಯವರ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ನಿಕಟ ಪೂರ್ವಾಧ್ಯಕ್ಷರು ರವಿಕುಮಾರ್ ಜೇಸಿ ಕಾರ್ಯದರ್ಶಿ ಶ್ರೇಷ್ಠಿ, ಜೇಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್, ಜೇಸಿರೆಟ್ ಕಾರ್ಯದರ್ಶಿ ಕೃತಿ ಪ್ರದೀಪ್, ಪ್ರಾಜೆಕ್ಟ ಡೈರೆಕ್ಟರ್ ಇರ್ಷಾದ್, ಜೆಜೆಸಿ ಅಧ್ಯಕ್ಷರಾದ ರಾಣಿ ಚಂದ್ರಶೇಖರ್ ಮತ್ತು . ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಜೇಸಿ ಪೂರ್ವಾಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್,ಎಂ.ಎಸ್.ಆಶೋಕ್ , ಅತುಲ್ ರಾವ್ , ಕೆ ಎಲ್ ಎಸ್ ತೇಜಸ್ವಿಯವರು ಪ್ರಸನ್ನಗೌಡಹಳ್ಳಿ., ಎಂ.ಡಿ.ವಿಜಯ್ , ಟಿ.ಹರೀಶ , ನಯನಕಣಚೂರ್, ಹಾಗೂ ಜೇಸಿರೆಟ್ ಪೂರ್ವಾಧ್ಯಕ್ಷರು,ಜೇಸಿ ಜೇಸಿರೆಟ್ ಸದಸ್ಯರು, ಜೆಜೆಸಿ ಸದಸ್ಯರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.