AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಟ್ಟಣದ ಜಮೀನೊಂದರಲ್ಲಿ ಗಂಭಿರ ಗಾಯಗೊಂಡು ಹಾರಲಾರದೆ, ಓಡಲೂ ಆಗದೆ #avintvcom

1 min read
Featured Video Play Icon

ರಾಷ್ಟ್ರ ಪಕ್ಷಿಯ ರಕ್ಷಣೆ ಮಾಡಿ ಮಾನವೀಯತೆ ಮೆರೆದ ನಾಗರಿಕರು

ಬೈಲಹೊಂಗಲ : ಪಟ್ಟಣದ ಜಮೀನೊಂದರಲ್ಲಿ ಗಂಭಿರ ಗಾಯಗೊಂಡು ಹಾರಲಾರದೆ, ಓಡಲೂ ಆಗದೆ ಮುದುಡಿ ಕುಳಿತ್ತಿದ್ದ ರಾಷ್ಟ್ರಪಕ್ಷಿ ನವಿಲನ್ನು ನಾಗರಿಕರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೊಪ್ಪಿಸಿ ಪಕ್ಷಿ ಪ್ರೇಮ ಮೆರೆದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಕುಮಾರ ಹೊಸಮನಿ ಅವರು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನಾಯಿಗಳ ಶಬ್ಧ ಕೇಳಿ ಏನೋ ಇರಬಹುದೆಂದು ಹೋಗಿ ನೋಡಿದಾಗ ಬಣವೆಯಲ್ಲಿ ನವಿಲೊಂದು ಗಂಭೀರ ಗಾಯಗೊಂಡು ನರಳುತ್ತಿದ್ದನ್ನು ಗಮನಿಸಿದ್ದಾರೆ. ಸಾಮಾನ್ಯವಾಗಿ ಶಬ್ಧ ಮಾಡಿದರೆ ನವಿಲು ಹಾರಿಹೋಗುತ್ತವೆ. ಆದರೆ ಈ ನವಿಲು ಹತ್ತಿರ ಹೋದರೂ ಹಾರಲಾರದನ್ನು ಕಂಡುಬಂದಿದೆ. ಅಲ್ಲದೆ, ರಾಷ್ಟ್ರಪಕ್ಷಿಯ ದೇಹಕ್ಕೆ ಇರುವೆ ಮುತ್ತಿದ್ದರಿಂದ ತಕ್ಷಣ ನವಿಲನ್ನು ರಕ್ಷಣೆ ಮಾಡಿದ್ದಾರೆ. ಕುಮಾರ ಹಾಗೂ ಅಜ್ಜಪ್ಪ ಹೊಸಮನಿ ಅವರು ಪಶು ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಸಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಿ.ಎಂ.ಕುಂಬಾರ, ಈರಣ್ಣಾ ಸೊಗಲದ ಅವರು ನವಿಲನ್ನು ತೆಗೆದುಕೊಂಡು ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು. ಪಕ್ಷಿಯನ್ನು ರಕ್ಷಣೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿರುವುದು ಮಾನವೀಯ ಕಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಅಜ್ಜಪ್ಪ ಹೊಸಮನಿ, ಉಳವಪ್ಪ ಅಂಗಡಿ, ಶಿವಾನಂದ ಹುಲಕುಂದ, ಉಮೇಶ ಹೊಸಮನಿ ಉಪಸ್ಥಿತರಿದ್ದರು.

ಬಾಕ್ಸ ಐಟಂ :

ಅದು ದೊಡ್ಡ ನವಿಲು. ನಾವು ಹೋದ ತಕ್ಷಣ ಹಾರಬೇಕಿತ್ತು. ಯಾಕೋ ಹಾರಲಾಗುತ್ತಿಲ್ಲ. ಅದಕ್ಕೆ ಏನೋ ಆಗಿರಬೇಕೆಂದು ನೀರು ಕುಡಿಸಿದರೂ ಕುಡಿಯಲಿಲ್ಲ. ಬಾಯಲ್ಲಿ ಬುರುಗು ಬರುತ್ತಿತ್ತು. ಗಾಬರಿಯಾಗಿ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರಿಗೆ ಮಾಹಿತಿ ನೀಡಿದಾಗ, ತಕ್ಷಣ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಏನಾದರೂ ಮಾಡಿ ನವಿಲನ್ನು ಚಿಕಿತ್ಸೆ ಕೊಡಿಸಬೇಕೆಂದು ಪಶು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಲಾಯಿತು.

ಕುಮಾರ ಹೊಸಮನಿ

ಪ್ರಗತಿಪರ ರೈತ, ಬೈಲಹೊಂಗಲ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author