04.02.2021, 10.30.ಕ್ಕೆ ಮೂಡಿಗೆರೆ ತಾಲೂಕ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಯಿತು.#avintvcom
1 min read
ಮಡಿವಾಳ ಮಾಚಿದೇವ ಜಯಂತಿ.2021.
ತಾ:04.02.2021.ರ ಗುರುವಾರ ಬೆಳಿಗ್ಗೆ 10.30.ಕ್ಕೆ ಮೂಡಿಗೆರೆ ತಾಲೂಕ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಯಿತು.
ತಹಸಿಲ್ದಾರ್ ಹೆಚ್.ಎಂ.ರಮೇಶ್ ಮಾತನಾಡಿ ನಾವು ಈ ಸಮಾಜದಲ್ಲಿ ಜಾತಿಯಿಂದ ಅಲ್ಲ ನೀತಿಯಿಂದ ಬದುಕಬೇಕು ಎಂದು ಶರಣ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಚಿದೇವನ ವಿಚಾರ ದಾರೆಗಳು ಮತ್ತು ಮಹನಿಯರ ಚಿಂತನೆಗಳು ಒಂದು ವರ್ಗಕ್ಕೆ ಮಾತ್ರವೆ ಸೀಮಿತವಾಗಬಾರದು ಅದು ಇಡಿ ಸಮಾಜದ ಎಲ್ಲರಿಗೂ ಸಲ್ಲುವ ಸಂದೇಶವಾಗಬೇಕೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಎಂ.ಎಸ್.ನಾಗರಾಜ್ ವಚನ ಸಾಹಿತ್ಯದ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಮಹತ್ವದ್ದು .ಸಮಾಜದ ಅನಿಷ್ಟ ಪದ್ದತಿಗಳು ಜಾತಿ ಕುಲ ಧರ್ಮಗಳಲ್ಲಿ ಅಡಗಿದ್ದ ಮೌಡ್ಯತೆಗಳನ್ನು ತಿದ್ದುವಲ್ಲಿ ವಚನಗಳು ಪ್ರಮುಕವಾದದ್ದು.
ಮಾಚಿದೇವ,
ಅರಸುತನವೆ ಮೇಲಲ್ಲ ಅಗಸತನ,
ಕೀಳಲ್ಲ ವೆಂದು ಸಾರಿದ್ದರ ಉದ್ದೇಶವೆ ಸರ್ವರು ಸಮಾನರು ಎಂಬ ಸಂದೇಶ ಎಲ್ಲರನ್ನು ತಲುಪಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕ್ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿಮಂಜುನಾಥ ಕಾರ್ಯಕ್ರಮ ಕುರಿತು ಮಾತನಾಡಿ, ಗೀತ ಗಾಯನ ಮಾಡಿದರು.
ಯುವ ಘಟಕದ ಅಧ್ಯಕ್ಷರಾದ ಎಂ.ವಿ.ಅನಿಲ್,ಖಜಾಂಚಿ ಎಂ.ಅರ್.ಲೋಕೆಶ್ ಗೌರವ ಅಧ್ಯಕ್ಷರಾದ ಎಂ.ಜೆ.ಯತಿರಾಜ್,
ಗುರುರಾಜ್ ಹಾಲ್ಮಟ್,
ಸತ್ಯನಾರಾಯಣ,
ದೇವರಾಜ್,ತಾಲೂಕು ಕಚೇರಿಯ ಸಿಬ್ಬಂದಿ ವರ್ಗ, ಮಡಿವಾಳ ಸಮಾಜದ ಬಾಂದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.