2020-2021 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ #avintvcom
1 min read
2020-2021 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ 02/02/2021 ರಂದು ಹೊಯ್ಸಳ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟವನ್ನು ಮಾನ್ಯ ತಹಶೀಲ್ದಾರರಾದ ಶ್ರೀರಮೇಶ್ ಇವರು ಉದ್ಘಾಟಿಸಿದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಕುಮಾರ್ S N ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯರಾದ ರಂಜನ್ ಅಜಿತ್ ಕುಮಾರ್, ಪ.ಪಂ ಸದಸ್ಯರಾದ ಹೊಸಕೆರೆ ರಮೇಶ್ .AEE ಮಂಜುನಾಥ್,CPI ಜಗನ್ನಾಥ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ರಾಜು ಬಿ.ಎನ್.,ಪ್ರಧಾನ ಕಾರ್ಯದರ್ಶಿಯಾದ ಶಿವರಾಮ ಗೌಡ,ರಾಜ್ಯಪರಿಷತ್ ಸದಸ್ಯರಾದ ನವೀನ್ ಬಿ.ಆರ್.,ಉಪಾಧ್ಯಕ್ಷರಾದ ಸುಹಾಸ್ ,ದಿನೇಶ್ ಕೆ.ಎಂ.,ಖಜಾಂಚಿ ನವೀನ್ ಟಿ.ಎ.,ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಪದ್ಮರಾಜ್,ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಪೂರ್ಣೇಶ್ M.M. ,ಉಪಸ್ಥಿತರಿದ್ದರು. ಈ ಕ್ರೀಡಾಕೂಟದಲ್ಲಿ 500ಕ್ಕಿಂತ ಹೆಚ್ಚು ನೌಕರರು ಭಾಗಿಯಾಗಿದ್ದರು.ಪುರುಷರ ವಿಭಾಗದಲ್ಲಿ 45 ಕ್ಕಿಂತ ಮೇಲ್ಪಟ್ಟ ವರು,ಹಾಗೂ 45 ಕ್ಕಿಂತ ಕೆಳವಯೋಮಿತಿ ಯವರು ,ಮಹಿಳೆಯರ ವಿಭಾಗದಲ್ಲಿ 40 ಕ್ಕಿಂತ ಮೇಲಿನ ಹಾಗೂ ಕೆಳ ವಯೋಮಿತಿ ಎಂಬ ವಿಭಾಗಗಳಿದ್ದು ಒಟ್ಟು60 ಕ್ಕಿಂತ ಹೆಚ್ಚು ಸ್ಪರ್ಧೆಗಳಿದ್ದು 20 ಕ್ಕಿಂತ ಹೆಚ್ಚು ಇಲಾಖೆಗಳ ನೌಕರರು ಭಾಗವಹಿಸಿದರು.ಈ ಕ್ರೀಡಾಕೂಟ ಯಶಸ್ವಿಯಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.