AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಬಲವರ್ಧನೆಯೇ…#avintvcom

1 min read
Featured Video Play Icon

ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಬಲವರ್ಧನೆಯೇ   ಎಸ್.ಡಿ.ಎಂ.ಸಿ. ರಚನೆಯ ಮೂಲ ಆಶಯ-ಶ್ರೀ ಹೇಮಂತರಾಜ್. ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಿಗೆರೆ .

 

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿಡುವಾಳೆ ಮೂಡಿಗೆರೆ ತಾಲೂಕು ಇಲ್ಲಿ ದಿನಾಂಕ 3/02/2021 ರಂದು ಎಸ್.ಡಿ.ಎಂ.ಸಿ.ಸದಸ್ಯರಿಗಾಗಿ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಗುರುರಾಜ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಹೇಮಂತ್ ರಾಜ್ ಆಗಮಿಸಿದ್ದರು.ಶ್ರೀ ರವೀಂದ್ರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ,ಶ್ರೀಮತಿ ಸವಿತ ಉಪಾಧ್ಯಕ್ಷರು, ಶ್ರೀ ಪೂರ್ಣೇಶ್ ಮುಖ್ಯೋಪಾಧ್ಯಾಯರು,ಶ್ರೀ ಪ್ರದೀಪ್ ಸಹಶಿಕ್ಷಕರು ಇದ್ದರು. ತರಬೇತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಶ್ರೀ ಪೂರ್ಣೇಶ್ ಸ್ವಾಗತಿಸಿದರು. ಜ್ಞಾನದ ಸಂಕೇತವಾದ ದೀಪ ಬೆಳಗುವ ಮೂಲಕ ಉದ್ಘಾಟನಾ  ಕಾರ್ಯಕ್ರಮ  ನೆರವೇರಿಸಿದ ಶ್ರೀ ಹೇಮಂತರಾಜ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡುತ್ತಾ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಬಲವರ್ಧನೆಯೇ   ಎಸ್.ಡಿ.ಎಂ.ಸಿ. ರಚನೆಯ ಮೂಲ ಆಶಯವಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಾಗೂ ಅಗತ್ಯ ಸವಲತ್ತುಗಳ ಪೂರೈಕೆಗಾಗಿ ಸ್ಥಳೀಯ ದಾನಿಗಳನ್ನು ಗುರುತಿಸಿಕೊಂಡು,ಅವರ ಮನವೊಲಿಸಿ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ಈ ಶಾಲೆಯ ಪ್ರಗತಿಗಾಗಿ ಶ್ರೀ ಸುನಿಲ್ ಗೌಡರು ನೀಡುತ್ತಿರುವ ಸಹಕಾರಕ್ಕೆ ಇಲಾಖೆ ಅಭಾರಿಯಾಗಿದೆ.ಇದಕ್ಕಾಗಿ ಶ್ರಮಿಸುತ್ತಿರುವ ಸರ್ವರನ್ನೂ ಅಭಿನಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀ ರವೀಂದ್ರ ಹಾಗೂ ಶ್ರೀ ಪೂರ್ಣೇಶ್ ಇವರು ಎಸ್.ಡಿ.ಎಂ.ಸಿ ರಚನೆ,ಸದಸ್ಯರ ಹಕ್ಕು ,ಕರ್ತವ್ಯಗಳು,ಶಿಕ್ಷಣ ಸಾರ್ವತ್ರಿಕರಣಕ್ಕಾಗಿ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು,ಯಶೋಗಾಥೆಗಳು,ಸಂವಾದ,ಮಕ್ಕಳ ಹಕ್ಕು ರಕ್ಷಣೆ,ಶಾಲಾಭಿವೃದ್ಧಿ ಯೋಜನೆ ತಯಾರಿ ಕುರಿತಂತೆ ವಿವರವಾಗಿ ಚರ್ಚಿಸಿದರು.ಕೋವಿದ್ ಸಂಕಷ್ಟಕರ ಪರಿಸ್ಥಿತಿಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಕಾರ್ಯಕ್ರಮಗಳ ಕುರಿತು ಮುಕ್ತವಾಗಿ ವಿಚಾರ ವಿನಿಮಯ ಮಾಡಲಾಯಿತು. ಭಾಗವಹಿಸಿದ ಎಲ್ಲರೂ ಇದುವರೆಗೆ ಯಾರೂ ಶಾಲೆಯಲ್ಲಿ ಆಗಿರುವ ಪ್ರಗತಿಯನ್ನು ವೀಕ್ಷಿಸಿ ಮುಕ್ತ ಕಂಠದಿಂದ ಕೊಂಡಾಡಿದರು. ರಬೇತಿಗೆ ಆಗಮಿಸಿದ್ದ ಸದಸ್ಯರಿಗೆ ಕಾಫಿ ,ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರೀ ಗುರುರಾಜ್ ಅವಿರತ ಪ್ರಯತ್ನ ಹಾಗೂ ಸಾಂದರ್ಭಿಕ ಸಲಹೆ ಶಾಲೆಯ ಅಭಿವೃದ್ಧಿಗೆ ಕಾರಣವಾಯಿತು ಎಂಬುದನ್ನು ಸ್ಮರಿಸಿದರು.ಮುಂದೆ ಗುರಿ ಎಂದರೆ ಶಾಲೆ ಅಭಿವೃದ್ಧಿ ಹಾಗೂ ಹುರಿದುಂಬಿಸಲು ಗುರು ಅಂದರೆ ಪೂರ್ಣೇಶ್ ಸರ್ ಇರುವುದೇ ನಮ್ಮ ಈವರೆಗಿನ ಸಾಧನೆಗೆ ಕಾರಣ ಎನ್ನುತ್ತಾ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗೈದರು.

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author