AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿಕ್ಷಣ ಕೊಡುವ ಮೂಲಕ ಅವರನ್ನು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು#avintvcom

1 min read

ಸಿಂದಗಿ : ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಅವರನ್ನು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವಂತೆ  ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ವಿಜಯಪುರದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಎನ್ .ವ್ಹಿ .ಹೊಸೂರ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಶುಕ್ರವಾರ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ,

ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ,

ಕ, ರಾ , ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಇವರ ಸಹಯೋಗದಲ್ಲಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ, ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ

ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ  ಶಿಕ್ಷಣದಲ್ಲಿ ಹಲವಾರು ಸವಾಲುಗಳು ಬರುತ್ತಿದ್ದು ಅವುಗಳನ್ನು ಶಿಕ್ಷಕರು  ಸದಾ  ಸ್ವೀಕರಿಸಬೇಕಿದೆ  ಎಂದು ಹೇಳಿದರು..

ಸಮಾರಭದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ  ಡಾ.ಲತಾ ಮುಳ್ಳೂರ ಮಾತನಾಡಿ, ಭಾರತೀಯರು ಎಲ್ಲಾ ರೀತಿಯ ಗುಲಾಮಗಿರಿಯಿಂದ ಮುಕ್ತರಾಗಬೇಕಾಗಿದೆ, ಇದು ಫುಲೆ ದಂಪತಿಗಳ  ಬಯಕೆಯಾಗಿತ್ತು,

ಸಮಾಜದಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು , ಸಮಾಜದಲ್ಲಿ

ಮಹಿಳೆಯರಿಗೆ ಎಂತಹ ಸ್ಥಾನಮಾನ ಕೊಟ್ಟಿದ್ದರೂ ಅಸಮಾನತೆ ಇನ್ನೂ ಇದೆ ಎಂದರು. ಶಿಕ್ಷಕಿಯರ ಸಮಸ್ಯೆ, ಬೇಡಿಕೆ ಈಡೇರಿಕೆ, ಮೀಸಲಾತಿಗಾಗಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಲಾಗಿದೆ’  ಆ ವೇದಿಕೆ ಮೂಲಕ  ಜಾಗೃತರಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅರ್ಜುನ ಲಮಾಣಿ ಅವರು ಸಂಘದ ಧ್ವಜವನ್ನು ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಭೂಸನೂರ ಅವರಿಗೆ ಹಸ್ತಾಂತರಿಸಿದರು.

ಕ್ಷೇತ್ರ  ಶಿಕ್ಷಣಾಧಿಕಾರಿ ಎಚ್ .ಎಸ್ ನಗನೂರ , ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಪವಿತ್ರಾಜಿ,  ಸಾನಿಧ್ಯವಹಿಸಿ ಮಾತನಾಡಿದರು.

ವಿಶ್ರಾಂತ ಶಿಕ್ಷಕ ಪಿ ಎಸ್ ಮಿಂಚನಾಳ ಅವರನ್ನು ಸಂಘದ ಪರವಾಗಿ  ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ಧಲಿಂಗ ಚೌಧರಿ,  ಮಧ್ಯಾಹ್ನ ಉಪಾಹಾರ ಯೋಜನೆಯ  ಸಹಾಯಕ ನಿರ್ದೇಶಕರಾದ ಶಿವಚಂದ್ರ ಕತ್ನಳ್ಳಿ , ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷ  ಶ್ರೀಮತಿ ರಾಜೇಶ್ವರಿ ದೇವರ, ಶ್ರೀಮತಿ ನೀಲಗಂಗಾ ಅಣೆಪ್ಪನವರ, ಕ.ರಾ.ಪ್ರಾ.ಶಾ ಶಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್ .ಎನ್.  ಮುರಾಳ, ಸಂಘದ ಮಾಜಿ ಅಧ್ಯಕ್ಷ ಯು ಐ ಶೇಖ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ  ಆರ್ .ಎಚ್ .ಬಿರಾದಾರ, ದೇವರ ಹಿಪ್ಪರಗಿ ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎ.ಎಚ್ .ವಾಲಿಕಾರ, ದೇವರ ಹಿಪ್ಪರಗಿ ಕ.ರಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಡಗಿ, ಕ.ರಾ. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ  ಸಂಘದ ತಾಲೂಕು ಅಧ್ಯಕ್ಷ ಶೈನಾಬಿ .ಎಂ.ಮಸಳಿ, ಲಕ್ಷ್ಮಣ ಸಿ ಸೊನ್ನ,  ಶ್ರೀಮತಿ ಎಸ್ ಎಂ ಚಿಗರಿ , ಡಿ.ಎಂ.ಮಾಹೂರ,

ಬಸವರಾಜ ಸೋಮಪುರ,

ಶ್ರೀಮತಿ ಎಸ್ .ಎಸ್ .ಬಡಿಗೇರ,   ಮಾಹಾಂತೇಶ ಬಾಗೇವಾಡಿ , ಶ್ರೀಮತಿ ಜೆ.ಬಿ.ಭಾಸಗಿ ,ಶ್ರೀಮತಿ ಜಿ.ಎನ್.ಪಾಟೀಲ,  ಸುನಂದ ನಾರಾಯಣಕರ್ , ಎಸ್ ಎಸ್ ಹಚಡದ, ಪಿ.ಎಸ್ ಅಡಗಲ್, ಜಿ.ಎಸ್.ಹೊಸಗೌಡರ, ಜಿ.ಎಸ್ ಗತಾಟೆ, ಕ.ರಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ರಾಯಪ್ಪ ಇವಣಗಿ, ಭಾಗವಹಿಸಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ್ ಬೀಳಗಿ ಸ್ವಾಗತಿಸಿದರು. ಸಿದ್ಧಲಿಂಗ ಚೌಧರಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ. ರಾಯಪ್ಪ ಇವಣಗಿ ವಂದಿಸಿದರು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ..

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author