ಹೆಣ್ಣು ಮಕ್ಕಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಕ್ಷಮರನ್ನಾಗಿಸಲು ಅವಿರತ ಶ್ರಮ. #avintvcom
1 min read
ಹೊಸಪೇಟೆ
ಹೆಣ್ಣು ಮಕ್ಕಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಕ್ಷಮರನ್ನಾಗಿಸಲು ಅವಿರತ ಶ್ರಮ.
ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಜಿ ಹಾಗೂ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪುರಂದೇಶ್ವರಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರು ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಮಹಿಳಾ ಮೋರ್ಚಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ ಹಾಗೂ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಕವಿತಾ ಸಿಂಗ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಮಹಿಳೆಯರನ್ನು ಸಮಾನತೆ ಹಾಗೂ ಗೌರವದಿಂದ ಕಾಣುವ ಪಕ್ಷ ಬಿಜೆಪಿ. ಪಕ್ಷದ ಏಳಿಗೆಯೊಂದಿಗೆ ಸ್ತ್ರೀ ಸಬಲೀಕರಣದ ಉದ್ದೇಶದಿಂದ ಮಹಿಳಾ ಮೋರ್ಚಾ ಎಂಬ ಉತ್ತಮ ವೇದಿಕೆಯನ್ನು ಬಿಜೆಪಿ ನಮಗೆ ಒದಗಿಸಿಕೊಟ್ಟಿದೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಕನ್ಯಾ ಸಮೃದ್ಧಿ, ಬೇಟಿ ಬಚಾವೋ ಬೇಟಿ ಪಡಾವೋ, ಭಾಗ್ಯಲಕ್ಷ್ಮಿ ಯೋಜನೆಗಳಿಂದ ಹೆಣ್ಣು ಮಕ್ಕಳ ಬಾಳಲ್ಲಿ ನಂದಾದೀಪ ಪ್ರಜ್ವಲಿಸುವಂತಾಗಲು ಸರ್ವರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾರಿ ಶಕ್ತಿ ಈ ದೇಶದ ಆಸ್ತಿ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಕ್ಷಮರಾಗಬೇಕು. ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಸಶಕ್ತರನ್ನಾಗಿಸೋಣ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಆನಂದ್ ಸಿಂಗ್ ಜಿ, ಸಂಸದರಾದ ದೇವೇಂದ್ರಪ್ಪ ಜಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥ್ ನಾರಾಯಣ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಟೆಂಗಳೆ, ಶಾಸಕರು, ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
मुलींना सर्व क्षेत्रात सक्षम बनविण्यासाठी अविरत श्रम
आज बळ्ळारी तालुक्यातील होसपेटे येथे, भाजपा राज्याध्यक्ष श्री. नलीनकुमार कटिल जी आणि राष्ट्रीय महिला मोर्चाचे प्रधान कार्यदर्शी श्रीमती. पुरंदेश्वरी यांच्या नेतृत्वात झालेल्या भाजपा राज्य महिला मोर्चा कार्यकारिणी सभेत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भाग घेऊन संबोधित केले.जिल्ह्यात पहिला महिला मोर्चा कार्यक्रम यशस्वी आयोजित केलेल्या राज्य महीला मोर्चा अध्यक्ष श्रीमती. गीता विवेकानंद आणि बळ्ळारी जिल्हा महिला मोर्चा अध्यक्ष श्रीमती.कविता सिंग यांचे अभिनंदन केले.
महिलांना समानता आणि गौरव देणारा पक्ष भाजपा,पक्षाच्या हितासाठी आणि स्त्री सबलीकरणासाठी महिला मोर्चा हा उत्तम व्यासपीठ भाजपा उपलब्ध करून दिला आहे.आपल्या केंद्र आणि राज्य सरकारच्या सुकन्या समृद्धी, बेटी बचाओ बेटी पढाओ आणि भाग्यलक्ष्मी प्रकल्पांनी मुलींच्या जीवनात नंदादीप प्रज्वलित करण्यासाठी सर्वजण एकजुटीने काम केले पाहिजे. स्त्री शक्ति ही देशाची संपत्ती आहे महिलांनी सर्व क्षेत्रात सक्षम असणे आवश्यक आहे. महिलांना आत्मविश्वास देऊन सशक्त बनऊया असा संदेश दिला.
यावेळी मंत्री श्री.आनंद सिंग जी, खासदार श्री. देवेंद्रप्प जी, भाजपा राज्य प्रधान कार्यदर्शी श्री.आश्र्वत नारायण, राज्य महिला विकास महामंडळाचे अध्यक्ष श्रीमती.शशिकला टेंगळे, पदाधिकारी, महीला मोर्चा सदस्या व कार्यकर्ते उपस्थित होते.