ಕೊರಗಜ್ಜ ದೇವಾಯಲದ ಹುಂಡಿಯಲ್ಲಿ ಕಾಂಡೋಮ್: ದಕ್ಷಿಣಕನ್ನಡದಲ್ಲಿ ಮಿತಿ ಮೀರಿದ ಕಿಡಿಗೇಡಿಗಳ ಕೃತ್ಯ #avintvcom
1 min read
ಕೊರಗಜ್ಜ ದೇವಾಯಲದ ಹುಂಡಿಯಲ್ಲಿ ಕಾಂಡೋಮ್: ದಕ್ಷಿಣಕನ್ನಡದಲ್ಲಿ ಮಿತಿ ಮೀರಿದ ಕಿಡಿಗೇಡಿಗಳ ಕೃತ್ಯ
ಮಂಗಳೂರು:ಉಗ್ರರ ಪರ ಗೋಡೆ ಬರಹ,ಕೋಮುಗಲಭೆ,ಪೋಲಿಸರ ಮೇಲೆ ಹಲ್ಲೆಯ ಟಾರ್ಗೆಟ್,ಹನಿಟ್ರ್ಯಾಪ್,ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುವ ದಕ್ಷಿಣ ಕನ್ನಡದಲ್ಲಿ ಇದೀಗ ಕಿಬಡಿಕೇಡಿಗಳು ಮತ್ತೊಂದು ಕುಚೇಷ್ಟೆ ಮಾಡಿದ್ದಾರೆ. ಉಲ್ಲಾಳದ ಕೊರಗಜ್ಜ ದೇವಾಲಯದ ಹುಂಡಿಯ ಎಣಿಕೆ ಕಾರ್ಯಕ್ಕೆ ತೆಗೆದ ಸಂದರ್ಭ ಸಿಎಂ ಬಿಎಸ್ ವೈ ಭಾವಚಿತ್ರಕ್ಕೆ ಶಿಲುಬೆ ಹಾರ , ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರಿಗೆ ಅವಹೇಳನೆ ಮಾಡುವ ರೀತಿಯಲ್ಲಿ ಭಿತ್ತಿಪತ್ರ ಹಾಗು ಕಾಂಡೋಮ್ ಗಳನ್ನು ಹಾಕಿ ವಿಕೃತಿ ಮೆರೆದಿದ್ದಾರೆ.ಸ್ಥಳಕ್ಕೆ ಉಲ್ಲಾಳದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ