ಸತ್ತಮೇಲೆ ಆದರೂ ನೆಮ್ಮದಿಯಿಂದ ಮಲುಗಲು ಸ್ವಲ್ಪ ಜಾಗ ಕೊಡಿ ಎಂದು ಕಂದಾಯ ಅಧಿಕಾರಿಗಳಿಗೆ ಕರವೇ ಮನವಿ #avintvcom
1 min read
ಸತ್ತಮೇಲೆ ಆದರೂ ನೆಮ್ಮದಿಯಿಂದ ಮಲುಗಲು ಸ್ವಲ್ಪ ಜಾಗ ಕೊಡಿ ಎಂದು ಕಂದಾಯ ಅಧಿಕಾರಿಗಳಿಗೆ ಕರವೇ ಮನವಿ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಹೋಬಳಿಗೆ ಸೇರಿದ ಚನ್ನಾಪುರ ಗ್ರಾಮದಲ್ಲಿ ಇಪ್ಪತ್ತು ಕುಟುಂಬಗಳು ವಾಸವಾಗಿದ್ದು .ಇಲ್ಲಿ ಎಲ್ಲರೂ ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ಇವರಿಗೆ ರುದ್ರಭೂಮಿ ಇಲ್ಲ ಎಂದು ಕೊಡ್ಲಿಪೇಟೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದರು ಕಂದಾಯ ಇಲಾಖೆಯವರು ಇದನ್ನು ಪರಿಗಣಿಸಲಿಲ್ಲ ..ಆದರೆ ಇದೇ ಚನ್ನಾಪುರ ಗ್ರಾಮದಲ್ಲಿ ನಿನ್ನೆ ದಿನ ಮಣಿ ಎಂಬುವರು ವಯಸ್ಸು 48 ಇವರು ಹೃದಯಾಘಾತದಿಂದ ತೀರಿ ಹೋಗಿರುತ್ತಾರೆ .ಈ ಸಮಯದಲ್ಲಿ ಚನ್ನಾಪುರ ಗ್ರಾಮದಲ್ಲಿ ರುದ್ರಭೂಮಿಯೇ ಇಲ್ಲ ಎಂದು ಕೊರತೆ ಉಂಟಾದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಮನ್ನಣೆ ಸಿಗದಿದ್ದಾಗ ಕರವೇ ಕಾರ್ಯಕರ್ತರಿಗೆ ಫೋನ್ ಮುಖಾಂತರ ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಚನ್ನಾಪುರ ಗ್ರಾಮಕ್ಕೆ ಭೇಟಿ ಕೊಟ್ಟು ತೀರಿಹೋದ ಮಣಿ ಅವರ ಶವವನ್ನು ನೋಡಿ ಬಂದ ಮೇಲೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರನ್ನು ಫೋನ್ ಮುಖಾಂತರ ಕರವೇ ಕಾರ್ಯಕರ್ತರು ಈ ವಿಷಯ ತಿಳಿಸಿದ ಮೇರೆಗೆ ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕರು ಮನುಕುಮಾರ್ ಮತ್ತು ಗ್ರಾಮ ಲೆಕ್ಕಿಗರಾದ ಚೈತ್ರ ರವರು ಗ್ರಾಮ ಲೆಕ್ಕಿಗರಾದ ಮತ್ತು ಗ್ರಾಮ ಸಹಾಯಕರಾದ ಮಹೇಶ್ ಇನ್ನಿತರರು ಬಂದು ಶವ ಸಂಸ್ಕಾರಕ್ಕೆ ಬೇಕಾದ ಜಾಗವನ್ನು ಪರಿಶೀಲನೆ ಮಾಡಲಾಯಿತು ಆಗ 2ರಿಂದ 3 ಕಡೆ ಪರಿಶೀಲನೆ ಮಾಡಿ 1ಸೂಕ್ತ ಜಾಗವನ್ನು ಕಂದಾಯ ಪರಿವೀಕ್ಷಕರು ತೋರಿಸಿದರು ಆದರೆ ಈ ಜಾಗವನ್ನು ಒಬ್ಬರು ಒತ್ತುವರಿ ಮಾಡಿಕೊಂಡರು ಹಾಗಾಗಿ ಕರವೇ ಕಾರ್ಯಕರ್ತರು ಕಂದಾಯ ಪರಿವೀಕ್ಷಕರಿಗೆ ಈ ಜಾಗ ಮೊದಲೇ ಒತ್ತುವರಿಯಾಗಿದೆ ಹಾಗಾಗಿ ತಮ್ಮ ಇಲಾಖೆಯಿಂದ ಒಬ್ಬರು ಅಧಿಕಾರಿಯನ್ನು ಶವಸಂಸ್ಕಾರ ಆಗುವವರೆಗೂ ಇದೇ ಜಾಗದಲ್ಲಿ ಇರಬೇಕೆಂದು ಕೇಳಿಕೊಂಡ ಮೇರೆಗೆ ಗ್ರಾಮ ಸಹಾಯಕರಾದ ಮಹೇಶ್ ಎಂಬುವರನ್ನು ಈ ಸ್ಥಳದಲ್ಲಿ ಇರಿಸಿದರು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಜೆಸಿಬಿಯನ್ನು ತರಿಸಿ ರಸ್ತೆ ನಿರ್ಮಿಸುವಾಗ ಒತ್ತುವರಿ ಮಾಡಿಕೊಂಡವರು ತುಂಬಾ ಜನರು ಬಂದು ಚನ್ನಾಪುರ ಗ್ರಾಮಸ್ಥರು ಜೊತೆಗೆ ಜಗಳವನ್ನು ತೆಗೆದು ಕೆಲಸವನ್ನು ನಿಲ್ಲಿಸಲಾಗಿತ್ತು ಈ ಸಮಯದಲ್ಲಿ ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಒತ್ತುವರಿದಾರರನ್ನು ಸಮಾಧಾನ ಪಡಿಸಲಾಯಿತು. ಇವತ್ತು ಮಣಿ ಅವರ ಶವಸಂಸ್ಕಾರವನ್ನು ನೆರವೇರಿಸಲಾಯಿತು .ಇನ್ನು ಮುಂದೆ ಹೀಗೆ ಯಾರಿಗೂ ಆಗದಂತೆ ಕಂದಾಯ ಇಲಾಖೆಯಲ್ಲಿ ಕರವೇ ಕಾರ್ಯಕರ್ತರ ಮನವಿ ಸತ್ತ ಮೇಲಾದ್ರೂ ಮನುಷ್ಯನಿಗೆ ನೆಮ್ಮದಿಯಿಂದ ಶವಸಂಸ್ಕಾರ ಮಾಡಲು ರುದ್ರಭೂಮಿಗಳನ್ನು ಯಾವ ಯಾವ ಊರಿನಲ್ಲಿ ರುದ್ರಭೂಮಿಗಳ ಇಲ್ಲವೋ ಎಲ್ಲಾ ಗ್ರಾಮಗಳಿಗೂ ಕೊಡಬೇಕೆಂದು ಕರವೇ ಕಾರ್ಯಕರ್ತರ ಮನವಿ ..ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಾವ ಯಾವ ಗ್ರಾಮದಲ್ಲಿ ರುದ್ರಭೂಮಿ ಇಲ್ಲವೋ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಗೆ ತಿಳಿಸಬೇಕೆಂದು ಮನವಿ ..ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಶನಿವಾರಸಂತೆ ಹೋಬಳಿ ಅಧ್ಯಕ್ಷರಾದ ಆನಂದ್ ಮತ್ತು ಚನ್ನಾಪುರ ಗ್ರಾಮದ ಘಟಕದ ಅಧ್ಯಕ್ಷರಾದ ಉದಯ್ ಮತ್ತು ಚನ್ನಾಪುರ ಗ್ರಾಮ ಘಟಕದ ಉಪಾಧ್ಯಕ್ಷರಾದ ಲೂಯಿಸ್ ಮತ್ತು ಚನ್ನಾಪುರ ಗ್ರಾಮಸ್ಥರಾದ ಪ್ರವೀಣ್ .ಸುರೇಶ್ .ಚಂದ್ರು .ಶಾಫಿ .ಶಿವಪ್ಪ .ಸ್ವಾಮಿ .ತೀರ್ಥ .ಕೃಷ್ಣ .ಧರ್ಮಣ್ಣ .ಅಖಿಲ್