AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಇಂದು ಸೋಮಲಿಂಗ್ ಗೆನ್ನುರ್ ವಿಶೇಷ ಜಿಲ್ಲಾಧಿಕಾರಿಗಳ… #avintvcom

1 min read
Featured Video Play Icon

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಇಂದು ಸೋಮಲಿಂಗ್ ಗೆನ್ನುರ್ ವಿಶೇಷ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪುನರ್ವಸತಿ ಕೇಂದ್ರದಲ್ಲಿ ಹಂಚಿಕೆಯಾದ ನಿವೇಶನಗಳ ತನಿಖೆ ಹಾಗೂ ತಪಾಸಣೆ ಮಾಡಲು ಮಹಾ ವ್ಯವಸ್ಥಾಪಕರು ಪುನರ್ವಸತಿ ಭೂ ಸ್ವಾಧೀನ ಕೃಷ್ಣಾ ಮೇಲ್ದಂಡೆ ಯೋಜನೆ ನವನಗರ ಬಾಗಲಕೋಟ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ  5 ಜನರ ಸಮಿತಿಯನ್ನು ರಚನೆ ಮಾಡಿ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಿವೇಶನಗಳಲ್ಲಿ ಆದಂತ ಅನ್ಯಾಯವನ್ನು ಕುಲಂಕುಶವಾಗಿ ತನಿಖೆ ಮಾಡಿ ತನಿಖೆ ವರದಿ ನೀಡಲು ಆದೇಶಿಸಿದ್ದಾರೆ ಎಂದರು ಅವು ನಮಗೆ ಸುಮಾರು 8ರಿಂದ 15 ದಿವಸಗಳ ಕಾಲ ಸಮಯವಾಗಿದ್ದು ನಾವು ಇರುವಂತಹ ಸ್ಥಳಕ್ಕೆ ಸರ್ವೆರ್ ಮುಖಾಂತರ ಸಂಪೂರ್ಣ ಕೊಲ್ಹಾರ  ಪಟ್ಟಣವನ್ನು ಅಳತೆ ಮಾಡುವ ಮುಖಾಂತರ ವರದಿಯನ್ನು ತಯಾರಿಸುತ್ತಿದ್ದೇವೆ ಮತ್ತು ಕೋಲಾರ ಪಟ್ಟಣದಲ್ಲಿ ಆದಾಯವನ್ನು ನಾವು ಸರಿಪಡಿಸುತ್ತೇವೆ ಎಂದು ನೀಡಿದರು ಮತ್ತು ಕೊಲ್ಹಾರ ಪಟ್ಟಣದಲ್ಲಿ ಸರಕಾರದ ಜಾಗ ಹಾಗೂ ಕಾಯ್ದಿರಿಸುವ ಸ್ಥಳ ಉದ್ಯಾನವನಗಳು ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ಮಾಡಿ ವರದಿ ನೀಡುತ್ತೇವೆ ಎಂದರು ಮತ್ತು ಸರಕಾರಿ ಜಾಗದಲ್ಲಿ ಯಾರೇ ಅಕ್ರಮವೆಸಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು ಈ ವೇಳೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಆಲಿಮಟ್ಟಿ. ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಎಂ.ಎನ ಚೋರಗಸ್ತಿ ಇಂಡಿ. ಜಮಖಂಡಿ ಪುನರ್ವಸತಿ ಅಧಿಕಾರಿಗಳು ಜಮಖಂಡಿ ಹಾಗೂ ಇನ್ನೂ ಹಲವು ಅಧಿಕಾರಿಗಳು  ಕೊಲ್ಹಾರ ಪಟ್ಟಣವನ್ನು ತನಿಖೆ ಮಾಡಿ ವರದಿ ನೀಡಲು ಉಪಸ್ಥಿತರಿದ್ದರು ಮತ್ತು ಈ ವೇಳೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರವಿ ಶಿರಗುಪ್ಪಿ ಇದ್ದರೂ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author