ಕೊಟ್ಟೂರು ತಾಲ್ಲೂಕಿನ ಚಪ್ಪರದಹಳ್ಳಿಯಲ್ಲಿ ಮರಣ ಹೊಂದಿದರೆ ಅವರನ್ನು ಶವಸಂಸ್ಕಾರ ಮಾಡುವುದು ದುಸ್ತರವಾಗಿದೆ.#avintvcom
1 min readಚಪ್ಪರದಹಳ್ಳಿ ಸಾರ್ವಜನಿಕರಿಗೆ ಸ್ಪಂದಿಸದ ಪಿ.ಡಿ.ಒ. ಮೈಲಪ್ಪ
ಕೊಟ್ಟೂರು ತಾಲ್ಲೂಕಿನ ಚಪ್ಪರದಹಳ್ಳಿಯಲ್ಲಿ ಶವ ಸಂಸ್ಕಾರಕ್ಕಾಗಿ ಇರುವ ಜಾಗಕ್ಕೆ ಹೋಗಲು ದಾರಿ ತುಂಬಾ ಕಿರಿದಾಗಿದ್ದು, ಯಾರಾದರೂ ಮರಣ ಹೊಂದಿದರೆ ಅವರನ್ನು ಶವಸಂಸ್ಕಾರ ಮಾಡುವುದು ತೀರಾ ದುಸ್ತರವಾಗಿದೆ. ಈ ಹಿಂದೆ ಈ ಸಮಸ್ಯೆಯ ಬಗ್ಗೆ ಪತ್ರಿಕೆಗಳಲ್ಲಿ ವರದಿ ಮಾಡಿದ್ದರೂ ಸಹ ಸೌಜನ್ಯಕ್ಕಾದರೂ ಸದರಿ ಗ್ರಾಮಕ್ಕೆ ಹೋಗಿ ಸಮಸ್ಯೆ ಪರಿಹರಿಸುವುದಿರಲಿ ಕನಿಷ್ಟಪಕ್ಷ ಕೇಳುವ ಸೌಜನ್ಯವೂ ಈ ಪಿ.ಡಿ.ಒ. ಅಧಿಕಾರಿ ಮೈಲಪ್ಪ ಇವರಿಗೆ ಇಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸಾರ್ವಜನಿಕರು ಸದರಿ ಸ್ಥಳವನ್ನು ಮಾಧ್ಯಮದವರಿಗೆ ತೋರಿಸಿ, ಪಿ.ಡಿ.ಒ. ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಚಪ್ಪರದಹಳ್ಳಿ ವ್ಯಾಪ್ತಿಯ ಕೆ.ಅಯ್ಯನಹಳ್ಳಿ ಪಿ.ಡಿ.ಓ. ಆಗಿ ಒಂದು ವರ್ಷವಾದರೂ ಸಹ ಚಪ್ಪರದಹಳ್ಳಿ ಸ್ಮಶಾನದ ಬಗ್ಗೆ ಮಾಹಿತಿಯೇ ಇವರಿಗೆ ಗೊತ್ತಿರುವುದಿಲ್ಲ. ಚಪ್ಪರದಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೆ ನಂ. 114 ಬಿ/1 ಈ ಸರ್ವೆ ನಂಬರಿನಲ್ಲಿ ಸುಮಾರು 1.00 ಎಕರೆ ಜಾಗವನ್ನು ಸ್ಮಶಾನಕ್ಕಾಗಿಯೇ ಸರ್ಕಾರ ಮೀಸಲಿಸಿರುವಾಗ ಇದ್ದರೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಕಳವಳ ವ್ಯಕ್ತಪಡಿಸಿದರು. ಈ ಸ್ಮಶಾನಕ್ಕಾಗಿಯೇ ಮೀಸಲಿಸಿರುವ ಜಾಗವನ್ನೇ ಕೆಲವೊಂದು ಕಾಣದ ಮತ್ತು ರಾಜಕೀಯ ಹಿತಾಸಕ್ತಿ ಕೈಗಳು ತಮ್ಮ ವಶಪಡಿಸಿಕೊಂಡಿದ್ದಾರೆ. ಹಾಗಾಗಿ ಸ್ಮಶಾನಕ್ಕಾಗಿಯೇ ಪರದಾಡುವಂತಹ ಸ್ಥಿತಿ ಚಪ್ಪರದಹಳ್ಳಿ ಗ್ರಾಮಸ್ಥರದು. ತಾಲ್ಲೂಕು ಆಡಳಿತ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಗೆಯೇ ಪಿ.ಡಿ.ಒ. ಮೈಲಪ್ಪ ಇವರ ಮೇಲೆ ಸೂಕ್ತ ಆಡಳಿತಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದೂ ಸಹ ಆಗ್ರಹಿಸಿದ್ದಾರೆ. ಬಾಕ್ಸ್ ಐಟಂ
ಚಪ್ಪರದಹಳ್ಳಿ ಸಾರ್ವಜನಿಕರ ಕಡೆಯಿಂದ ಪಿ.ಡಿ.ಒ. ಮೈಲಪ್ಪ ಅವರ ಮೇಲೆ ಸೂಕ್ತ ಆಡಳಿತಾತ್ಮಕ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.