ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ಹೊರ ವಲಯದಲ್ಲಿ ನಕಲಿ ಮದ್ಯ ವಶ…#avintvcom
1 min read
ಹತ್ತು ಲಕ್ಷ ನಕಲಿ ಮದ್ಯ ವಶಪಡಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು
ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ಹೊರ ವಲಯದಲ್ಲಿ ನಕಲಿ ಮದ್ಯ ವಶ
ತಾದೂರು ಗ್ರಾಮದ ಮಂಜುನಾಥ್ ರವರ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ನಕಲಿ ಮದ್ಯ ವಶ
ಶಿಡ್ಲಘಟ್ಟ ತಾಲ್ಲೂಕಿನ ತಾದೂರು ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ರೇಷ್ಮೆ ಸಾಕಾಣಿಕೆ ಮನೆಯಲ್ಲಿ 37,900 ಲೀಟರ್ ನಕಲಿ ಮದ್ಯ ಹಾಗೂ 1200 ಲೀಟರ್ ಮದ್ಯಸಾರ ವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಕಲಿ ಮದ್ಯವನ್ನು ತಾದೂರು ಗ್ರಾಮದ ಹೊರವಲಯದಲ್ಲಿರುವ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ತಯಾರಿಸಿ ಅಲ್ಲಿಂದ ರಾತ್ರೋ ರಾತ್ರಿ ಹೊರ ರಾಜ್ಯ ತಮಿಳುನಾಡಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಭಾನುವಾರ ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರು ಚಿಕ್ಕಬಳ್ಳಾಪುರ ಜಿಲ್ಲೆ ಬಿ.ಪಿ. ನರೇಂದ್ರಕುಮಾರ್ ನೇತೃತ್ವದಲ್ಲಿ ನಕಲಿ ಮದ್ಯ ತಯಾರಿಕಾ ಮನೆಯ ಮೇಲೆ ದಾಳಿ ಮಾಡಿ .ಕಾಪರ್ ಬ್ಯಾರೆಲ್, ಬ್ಲಾಕ್ ಪರಲ್ ಬ್ರಾಂದಿ, ಎಕ್ಸ್ಪ್ರೆಸ್ ಸ್ಪೆಷಲ್ ಬ್ರಾಂದಿ, ಸ್ಪಿರಿಟ್, ಬ್ಲೆಂಡ್, ಗೋಲ್ಕಂಡ ಕ್ಯಾಬ್ , ಶವಲೇಸ್, ಗ್ರೀನ್ ಮ್ಯಾಜಿಕ್, ಹನಿ ಬಿ , ಮ್ಯಾಕ್ , ಡವೇಲ್ಸ್ no 1, ಸುಮಾರು 10 ಲಕ್ಷ ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ
ಮದ್ಯಸಾರ ಹಾಗೂ ನಕಲಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ಮಂಜುನಾಥ್ ನನ್ನು ಬಂದಿಸಿದ್ದು, ಈ ನಕಲಿ ಮದ್ಯವನ್ನು ಕಳೆದ ನಾಲ್ಲ್ಕು ದಿನಗಳಿಂದ ಈ ಕೆಲಸ ಅರಂಭಿಸಿರುವುದಾಗಿ ತಿಳಿದು ಬಂದಿದೆ, ಮದ್ಯ ಸಾರ ತಯರುಸಿತ್ತೀರುವ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಕೆ ನಡೆಸುವುದಾಗಿ ಅಬಕಾರಿ ಇಲಾಖೆ ಡಿಸಿ ನರೇಂದ್ರಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ ಜಿ ಪಿ ವಿಶ್ವನಾಥ ಬಾಬು, ಫಿರೋಜ್ ಖಾನ್ ಕಿಲ್ಲೇದಾರ್, ಸಿಬ್ಬಂದಿ
ಕೆ.ಲಂಕೆ ಹನುಮಯ್ಯ, ಎಸ್.ಎ.ಶಂಕರ್ ಪ್ರಸಾದ್, ಜಿ.ಮಂಜುಳಾ, ನಿತಿನ್, ರಾಘವೇಂದ್ರ, ಕರಿಲಿಂಗ, ರಮೇಶ್, ಪ್ರಶಾಂತ್, ಅಜಿತ್, ಮಹೇಶ್ ಹಾಗೂ ಮತ್ತಿತರರು ಇದ್ದರು.
ವರದಿ. ಲೋಕೇಶ್.ಶಿಡ್ಲಘಟ್ಟ