ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಮಡಿಕೇರಿಯಲ್ಲಿ ಎಫೈಆರ್ ದಾಖಲು #avintvcom
1 min read
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಮಡಿಕೇರಿಯಲ್ಲಿ ಎಫೈಆರ್ ದಾಖಲು
ಕೊಡಗು:ಕೊಡಗಿನಲ್ಲಿ ಕೊಡವರು ಗೋಮಾಂಸ ಭಕ್ಷಣೆ ಮಾಡುತ್ತಿರೆ ಎಂದು ಮಾಜಿ ಸಿ.ಎಂ ,ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಸಲ್ಲಿಸಲಾಗಿದ್ದ ದೂರಿನ ಅನ್ವಯ ಕಡೆಗೂ ಮಡಿಕೇರಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 154 ಅಡಿಯಲ್ಲಿ ಎಫ್.ಐರ್.ಆರ್ ದಾಖಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಬಿಜೆಪಿ ಪಕ್ಷ ಮತ್ತು ವಿವಿಧ ಕೊಡವ ಸಮಾಜ ಪ್ರತಿಭಟನೆ ನಡೆಸಿದ ದಿನದಂದು ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಹಾಗು ಮುಕ್ಕೋಡ್ಲುವಿನ ಗ್ರಾಮಸ್ಥರಾಗಿರುವ ರವಿ ಕುಶಾಲಪ್ಪ ಡಿಸಂಬರ್ 11,2020 ರಂದು ದೂರು ದಾಖಲಿಸಿದ್ದರು,ಇದೀಗ ಕಡೆಗೂ ಎಫ್ ಐ ಆರ್ ದಾಖಲು ಮಾಡಲಾಗಿದೆ.