ಕಾವೇರಿ ನದಿ ಜಿಲ್ಲೆಯ ಗಡಿ ಭಾಗವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ,ಅದರಲ್ಲೂ ಮೈಸೂರು. #avintvcom
1 min read
“ಸೇತುಬಂಧ” ಆತ್ಮಕಥೆಯಾಗಲಿದೆ ಸಿನಿಮಾ..
ಕೊಡಗು:ಕಾವೇರಿ ನದಿ ಜಿಲ್ಲೆಯ ಗಡಿ ಭಾಗವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ,ಅದರಲ್ಲೂ ಮೈಸೂರು. ಮುಖ್ಯವಾಗಿ ಕಣಿವೆ,ನಿಸರ್ಗದಾಮ ಮತ್ತು ತೆಪ್ಪದಕಂಡಿಯಲ್ಲಿ ಒಂದು ಭಾಗದಿಂದ ಮತ್ತೊಂದೆಡೆಗೆ ತೆರಳಬೇಕು ಎಂದಾಗ ದೋಣಿ ಇಲ್ಲವೇ ತೆಪ್ಪಗಳನ್ನು ಅನಿವಾರ್ಯವಾಗಿ ಅವಲಂಭಿಸಬೇಕಿತ್ತು. ಸರ್ಕಾರ ಅಳೆದು ತೂಗಿ ಪರದಾಡುತ್ತಿದ್ದ ಸಂದರ್ಭ ಕಾಂಕ್ರಿಟ್ ಸೇತುವೆ ಬದಲು ಕಾಲು ಸೇತುವೆ ಮಾಡುವುದು ಸೂಕ್ತ ಎಂದು ನಿರ್ಧಾರಕ್ಕೆ ಬರಲಾಯಿತು.ಆದರೆ ಅಂತಹಾ ಸೇತುವೆ ನಿರ್ಮಾಣ ಮಾಡುವ ಸಾಮರ್ಥ್ಯದ ಎಂಜಿನಿಯರ್ ಬೇಕಲ್ಲವೇ. ದಕ್ಷಿಣಕನ್ನಡ ಅರಂತೋಡಿನಲ್ಲಿ ಪಯಸ್ವಿನಿ ನದಿಗೆ ನಿರ್ಮಾಣವಾದ ಸೇತುವೆಯ ಎಂಜಿನಿಯರ್ ಅನ್ನು ಹುಡುಕುತ್ತಿದ್ದ ಸಂದರ್ಭ ಸಿಕ್ಕಿದ್ದು ಪದ್ಮಶ್ರೀ ಗಿರೀಶ್ ಭಾರದ್ವಾಜ್. ಹೌದು ತೂಗು ಸೇತುವೆಗಳ ಜನಕ ದೇಶದ ಬಹುತೇಕ ಗ್ರಾಮಾಂತರ ಪ್ರದೇಶದ ಮುಖ್ಯ ಪಟ್ಟಣ,ನಗರಕ್ಕೆ ರಸ್ತೆಗಳೇ ಇಲ್ಲದೆ ಇರುವ ಪ್ರದೇಶಗಳಲ್ಲಿ ಇಲ್ಲಿವರೆಗೆ ಬರೋಬ್ಬರಿ 128 ತೂಗು ಸೇತುವೆ ನಿರ್ಮಾಣ ಮಾಡಿರುವ ಗಿರೀಶ್ ಭಾರದ್ವಾಜ್ ಜೀವನಾಧರಿತ ಸಿನಿಮಾ “ಸೇತುಬಂಧ” ಕನ್ನಡ ಮತ್ತು ಹಿಂದಿಯಲ್ಲಿ “ದಿ ಬ್ರಿಡ್ಜ್ ಮ್ಯಾನ್ ” ಹೆಸರಿನಲ್ಲಿ ಮೂಡಿ ಬರಲಿದೆ.
ಮೂಲತಃ ದಕ್ಷಿಣಕನ್ನಡದ ಸುಳ್ಯದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು,ಮಂಢ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿದರು,ತನ್ನ ವಿದ್ಯಾಭ್ಯಾಸ ತನ್ನ ಗ್ರಾಮಕ್ಕೂ ಉಪಯೋಗವಾಗಲಿ ಎನ್ನ್ನುವ ಕಾರಣಕ್ಕೆ ಮೂಟ್ಟ ಮೊದಲ ಭಾರಿಗೆ 1989ರಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಅರಂಬೂರು ಎನ್ನುವಲ್ಲಿ ಸೇತುವೆ ನಿರ್ಮಾಣ ಮಾಡಿ ಯಶಸ್ವಿಯಾದರು ಇದರ ನಂತರ ಹಿಂತಿರುಗಿ ನೋಡಲೇ ಇಲ್ಲ ಬಳಿಕ ರಾಜ್ಯದ ಬಹುತೇಕ ಕಡೆ, ಕೇರಳದಲ್ಲಿ 10 ,ಆಂದ್ರಪ್ರದೇಶದ ನಕ್ಷಲ್ ಪೀಡಿತ ಪ್ರದೇಶ,ಓಡಿಸಾ ಸೇರಿದಂತೆ 129 ಸೇತುವೆ ಪೂರ್ಣಗೊಳಿಸಿರುವ ಇವರ ಬಳಿ ಇನ್ನಷ್ಟು ಪ್ರಾಜೆಕ್ಟ್ ಗಳಿವೆ. ಇದೀಗ ದೇಶದ ವಿಶೇಷ ವ್ಯಕ್ತಿಗಳ ಜೀವನಾಧರಿತ ಸಿನಿಮಾವಾಗಿರು ಹೆಂಡತಿಯ ಪ್ರೀತಿಗಾಗಿ ಬೆಟ್ಟವನ್ನು ಕೊರೆದ ಮಾಂಜಿ ದಿ ಮೌಂಟೇನ್ ಮ್ಯಾನ್ ಮಾದರಿಯಲ್ಲಿ ಗಿರೀಶ್ ಭಾರಧ್ವಾಜ್ ರವರ ಚಿತ್ರ ಮೂಡಿಬರಲಿದೆ.
ಚಿತ್ರಕಥೆ ಮತ್ತು ನಿರ್ದೇಶನವನ್ನು ಕನ್ನಡದಲ್ಲಿ ಹೊಂಸ್ಟೇ ಹಾರರ್ ಚಿತ್ರ ಮಾಡಿದ್ದ ಸಂತೋಷ್ ಕೊಂಡೆಕೇರಿ ಮಾಡುತ್ತಿದ್ದರೆ, ಶಾಂತಕುಮಾರ್ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು,ನಂತರದ ಚಿತ್ರೀಕರಣ ಸುಳ್ಯದಲ್ಲೇ ನಡೆಯಲಿದೆ,ಇದಕ್ಕಾಗಿ ಸಾಕಷೊಟು ಕಲಾವಿದರ ಅವಶ್ಯಕತೆ ಇರುವುದರಿಂದ,ಪ್ರತ್ಯಕ್ಷವಾಗಿ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಮಿಕರು,ಗ್ರಾಮಸ್ಥರನ್ನು ಬಳಸಿಕೊಳ್ಳುವ ಸಾದ್ಯತೆಗಳಿದೆ.
ಕೊಂಪುಳೀರ ಗಿರಿಧರ್