ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ #avintvcom
1 min read
ನಾಡಿನತ್ತ ಸಲಗ ಫ್ಯಾಮಿಲಿ
ಕೊಡಗು: ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ ಕಂಡುಬರುತ್ತಿದೆ.ಕುಶಾಲನಗರ ಸಮೀಪದ ಸೀಗೆ ಹೊಸೂರಿಗೆ ಸೇರಿದ ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಕಣಿವೆ ಸೇತುವೆ ಬಳಿ ಕಾಣಿಸಿಕೊಂಡ ಕಾಡಾನೆಗಳಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.ಇನ್ನು ಏಕಾಏಕಿ ಆನೆಗಳು ಅಡ್ಡಾಡುತ್ತಿದ್ದ ಕಾರಣ ಕುಶಾಲನಗರ ಹಾಸನ ನಡುವೆ ಟ್ರಾಫಿಕ್ ಜಾಂ ಉಂಟಾಗಿತ್ತು.ಸೀಗೆಹೊಸೂರಿನ ಮುಖ್ಯರಸ್ತೆಯಲ್ಲೇ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಅಡ್ಡದಿಡ್ಡಿ ಓಡಾಡುತ್ತಿದ್ದಲ್ಲದೆ, ಕಾವೇರಿ ನದಿ ತಟ ಕಣಿವೆ ಸೇತುವೆ ಬಳಿ ಗ್ರಾಮಸ್ಥರ ಚೀರಾಟದಿಂದ ದಿಕ್ಕಾಪಾಲಾಗಿತ್ತು. ಇನ್ನು ಇದೇ ಹಿಂಡಿನಲ್ಲಿ ಇದ್ದ ಕೆಲವು ಆನೆಗಳು ಚಿಕ್ಕಬೆಟ್ಟ ಪ್ರದೇಶದ ಮನೆ ಮೇಲೆ ದಾಳಿ ಮಾಡಿ,ದನದ ಕೊಟ್ಟಿಗೆ ನುಸುಳಿದ ವೇಳೆ ಹಸುವೊಂದಕ್ಕೆ ಗಾಯವಾಗಿದೆ, ಕೊಡಗು ಮೈಸೂರು ಗಡಿಯಾಗಿರುವ ಹಿನ್ನಲೆಯಲ್ಲಿ ಯಾವ ಜಿಲ್ಲೆಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮಾಡಬೇಕು ಎನ್ನುವಷ್ಟರಲ್ಲೇ ಹಲವು ನಷ್ಟಗಳು ಸಂಭವಿಸಿದ್ದು ಬಳಿಕ ಬಂದ ತಂಡ ಮೈಸೂರಿನ ಪಿರಿಯಾಪಟ್ಟಣದ ತಂಡ ಪಟಾಕಿ ಸಿಡಿಸಿ ಕಾಡಾನೆಗಳನ್ನು ಮತ್ತು ಕಾಡಿಗೆ ಓಡಿಸುವ ಕೆಲಸ ಮಾಡಿದರು.