ಶ್ರೀ ಕಂಚಾಳ ಕುಂಟಿ ನಂದೀಶ್ವರ ಮಠ ನಿಡಗುಂದಾದಲ್ಲಿ ಹಮ್ಮಿಕೊಂಡ ಕಾರ್ತಿಕ ದೀಪೋತ್ಸವ ಸಮಾರೂಪ ಸಮಾರಂಭ #avintvcom
1 min read
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಶ್ರೀ ಕಂಚಾಳ ಕುಂಟಿ ನಂದೀಶ್ವರ ಮಠ ನಿಡಗುಂದಾದಲ್ಲಿ ಹಮ್ಮಿಕೊಂಡ ಕಾರ್ತಿಕ ದೀಪೋತ್ಸವ ಸಮಾರೂಪ ಸಮಾರಂಭ ಸುಮಂಗಲೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಕೋರೋನಾ ವಾರಿಯರ್ಸ್ ಸನ್ಮಾನ ಕಾರ್ಯಕ್ರಮವು ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ದೀಪ ಬೇಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು
ಹೌದು
ಈ ಸಂದರ್ಭದಲ್ಲಿ ದಿನಾಂಕ 23 ಮತ್ತು 27 ರಂದು ನಡೇದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಚಿಂಚೊಳಿ ತಾಲ್ಲೂಕಿನ ಸುಲೇಪೇಟ, ನಿಡಗುಂದಾ,ಕೆರೊಳ್ಳಿ,ಕೇಶ್ವರ,ಕೊರಡಂಪಳ್ಳಿ,ಕುಪನೂರ,ದೇಗಲಮಡಿ ಗ್ರಾಮ ಪಂಚಾಯತ ನೂತನ ಸದಸ್ಯರಿಗೆ ಹಾಗೂ ಕೊರೊನಾ ವಾರಿಯರ್ಸ್ ರಾದ ಡಾಕ್ಟರ್, ಆಶಾ ಕಾರ್ಯಕರ್ತೆಯರಿಗೆ ಸಾಲು ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ಶ್ರೀ ಶರಣಪ್ಪ ತಳವಾರ ಮಾತನಾಡಿ ಕಂಚಾಳ ಕುಂಟಿ ನಂದಿಶ್ವರ ಮಠದಲ್ಲಿ ಹಮ್ಮಿಕೊಂಡ ಕಾರ್ತಿಕಮಾಸ ಸಮಾರೂಪ ಸಮಾರಂಭ ನಡೆತ್ತಿರುವದು ಬಹಳ ಸಂತೋಷದ ವಿಷಯ ಇಂತಹ ಕ್ಷೇತ್ರದಲ್ಲಿ ಗ್ರಾಮ ಮಟ್ಟದಲ್ಲಿ ಇರುವಂತಹ ಜನರಿಗೆ ಒಳ್ಳೆಯ ನೆಮ್ಮದಿ ಶಾಂತಿ ಭಾವನೆ ಮುಡಿಸುವ ಸ್ವಾಮಿಜಿಗಳಿಗೆ ಎಷ್ಟು ಅಭಿನಂದನೆಗಳನ್ನು ಹೆಳಿದರು ಕಡಿಮೆ ಇದೆ ಅವರು ಎಲ್ಲಾ ಸಮಾಜದವರನ್ನು ಕರೆದು 12ನೇ ಶತಮಾನದ ಅಣ್ಣ ಬಸವಣ್ಣನವರ ಹೇಳಿದಂತೆ ಎಲ್ಲರೂ ಸಮಾನರು ಸಮಾನತೆ ಬಗ್ಗೆ ಬಸವಣ್ಣನವರ ವಿಚಾರಗಳು ಸ್ವಾಮಿಜಿಗಳ ಭಾವನೆಗಳಾಗಿವೆ ಎಂದು ಹೆಳಿದರು
ಅದೆ ರಿತಿ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಶರಣಪ್ಪ ಮೆಡಿಕಲ್ ನಿಡಗುಂದಾ ಮಾತನಾಡಿ ಪರಮ ಪೂಜ್ಯ ಕರುಣೇಶ್ವರ ಸ್ವಾಮಿಜಿಗಳು ಈ ಭಾಗದಲ್ಲಿ ಬಂದು ಹತ್ತು ವರ್ಷಗಳು ಕಳೆದವು ಕಾರ್ಯ ನಿರಂತರವಾಗಿ ಧರ್ಮ ದಾಸೋಹ ಅನ್ನ ದಾಸೊಹ ಮಾಡಿಕೊಂಡು ಜಾಗೃತಿ ಮಾಡುತ್ತ ಒಳ್ಳೆಯ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೆಳಿದರು
ಅದೆ ರಿತಿ ಕಂಚಾಳ ಕುಂಠಿ ಮಠದ ಶ್ರೀಗಳಾದ ಕರುಣೇಶ್ವರ ಮಹಾಸ್ವಾಮಜಿಗಳು ಮಾತನಾಡಿ ಈ ಒಂದು ಕರ್ಯಾಕ್ರಮದ ಉದ್ದೇಶವೆಂದರೆ ದೀಪಗಳನ್ನು ಬೆಳಗುಸುವದರ ಮೂಖಾಂತರ ಜನರಲ್ಲಿ ಇರುವಂತಹ ಅಜ್ಞಾನವನ್ನು ಮೌಡ್ಯತೆ ಮೂಡನಂಬಿಕೆಗಳನ್ನು ತೊಲಗಿಸುವಂತಹ ನಿಟ್ಟಿನಲ್ಲಿ ದೀಪೋತ್ಸವ ಮಾಡುವ ಮುಖಾಂತರ ಜಗೃತಿ ಮೂಡಿಸುವದಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶರಣಪ್ಪ ತಳವಾರ,ಚಂದ್ರಶೇಖರ್ ಗುತ್ತೆದಾರ್, ಬಸವರಾಜ ಸುಲೇಪೇಟ, ಶಿವಶರಣಪ್ಪ ಮೆಡಿಕಲ್, ಕೃಷ್ಣ ಮೂರ್ತಿ ,ರಾಮಕೃಷ್ಣಪ್ಪ, ವೆಂಕಟರಡ್ಡಿ,ಚಂದ್ರು ನಿಡಗುಂದಾ,ಬಾಬು ಕುಂಬಾರ,ಭಿಮರೆಡ್ಡಿ ದೇಶಮುಖ್,ಅವಿನಾಶ ಗೊಶಾಲ್ ಹಾಗೂ ನಿಡಗುಂದಾ ಗ್ರಾಮದ ಜನರು ಎಲ್ಲಾ ಭಕ್ತರು ಈ ಸಮಾರಂಭದಲ್ಲಿ ಪಾಲಗೊಂಡಿದ್ದರು
ವರದಿ:- ಶಿವಕುಮಾರ ತಳವಾರ ಸುಲೇಪೇಟ