ನಿಯಮ ಉಲ್ಲಂಘಿಸಿ ಚಾರ್ಮಾಡಿ ಘಾಟ್ನಲ್ಲಿ ಘನವಾಹನ ಸಂಚಾರ #avintvcom
1 min read
ನಿಯಮ ಉಲ್ಲಂಘಿಸಿ ಚಾರ್ಮಾಡಿ ಘಾಟ್ನಲ್ಲಿ ಘನವಾಹನ ಸಂಚಾರ
ಕೊಟ್ಟಿಗೆಹಾರ:ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಘನವಾಹನ ಸಂಚಾರಕ್ಕೆ ನಿರ್ಭಂಧವಿದ್ದರೂ ೧೮ ಚಕ್ರದ ಲಾರಿಯೊಂದು ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಸಂಚರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರಿನಿAದ ಬೆಂಗಳೂರಿಗೆ ಹೋಗುವ ೧೮ ಚಕ್ರದ ಘನವಾಹನ ಭಾನುವಾರ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರಕ್ಕೆ ಬಂದಿದ್ದು ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಪೋಲಿಸರು ಲಾರಿಯನ್ನು ನಿಲ್ಲಿಸಿದ್ದಾರೆ. ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಬಂದಿರುವ ಬಗ್ಗೆ ಸ್ಥಳೀಯರು ಹುಬ್ಬಳ್ಳಿ ಮೂಲದ ಚಾಲಕನನ್ನು ವಿಚಾರಿಸಿದಾಗ ನನಗೆ ಚಾರ್ಮಾಡಿ ಘಾಟ್ನಲ್ಲಿ ಘನವಾಹನ ಸಂಚಾರ ನಿಷೇದಿಸಿರುವುದು ತಿಳಿದಿರಲಿಲ್ಲ. ಚಾರ್ಮಾಡಿ ಚೆಕ್ಪೋಸ್ಟ್ನಲ್ಲಿ ಚಾರ್ಮಾಡಿ ಪೋಲಿಸರು ಹಣ ಪಡೆದು ಲಾರಿಯನ್ನು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಬರುವಾಗ ಹಲವು ಕಡೆಗಳಲ್ಲಿ ತಡೆಗೋಡೆಗಳಿಗೆ ಲಾರಿಯ ಅಂಚು ತಾಗಿ ತಡೆಗೋಡೆ ಹಾನಿಯಾಗಿದೆ. ಕೊಟ್ಟಿಗೆಹಾರದಲ್ಲಿ ಪೋಲಿಸರು ಲಾರಿಯನ್ನು ತಡೆದಿದ್ದು ಹಿಂದಿರುಗಿ ಹೋಗಲು ತಿಳಿಸಿದರು. ಆದರೆ ಹಿಂದಿರುಗಿ ಹೋದರೆ ತಡೆಗೋಡೆಗಳಿಗೆ ತಗುಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪೋಲಿಸರು ಚಾಲಕರಿಗೆ ಎಚ್ಚರಿಕೆ ನೀಡಿ ಬೆಂಗಳೂರು ಕಡೆಗೆ ಕಳಿಸಿದರು.’
ಬಣಕಲ್ ಪಿಎಸ್ಐ ಶ್ರೀನಾಥ್ ರೆಡ್ಡಿ ಮಾತನಾಡಿ ಬಣಕಲ್ ಭಾಗದಿಂದ ಚಾರ್ಮಾಡಿ ಕಡೆಗೆ ಯಾವುದೇ ವಾಹನಗಳನ್ನು ಬಿಡುತ್ತಿಲ್ಲ. ಚಾರ್ಮಾಡಿ ಘಾಟ್ ಕಡೆಯಿಂದ ಲಾರಿಯನ್ನು ಹಿಂದೆ ಕಳಿಸಿದರೆ ತಡೆಗೋಡೆಗೆ ತಗುಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಲಾರಿ ಚಾಲಕನಿಗೆ ಎಚ್ಚರಿಕೆ ನೀಡಿ ಕಳಿಸಲಾಯಿತು ಎಂದರು.
ಬೆಳ್ತAಗಡಿಯ ವೃತ್ತ ನಿರೀಕ್ಷಕ ಸಂದೇಶ್ ಮಾತನಾಡಿ ಚುನಾವಣೆ ಇರುವುದರಿಂದ ಚಾರ್ಮಾಡಿ ಚೆಕ್ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುವ ಪೋಲಿಸ್ ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ನೇಮಿಸಿರುವುದರಿಂದ ಲಾರಿ ಆ ಸಮಯದಲ್ಲಿ ಚಾರ್ಮಾಡಿ ಚೆಕ್ಪೋಸ್ಟ್ ಹಾದು ಹೋಗಿರಬಹುದು. ಪೋಲಿಸ್ ಸಿಬ್ಬಂದಿಗಳು ಹಣ ಪಡೆದಿಲ್ಲ. ಹಣ ಪಡೆದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಚಿತ್ರ:೨೭ಕೆಟಿಜಿ೨:೨೭ಕೆಟಿಜಿ೩:ಚಾರ್ಮಾಡಿ ಘಾಟ್ ಹೆದ್ದಾರಿ ಹಾದು ಬಂದ ಘನವಾಹನ.