ಗ್ರಾಮಪಂಚಾಯ್ತಿ ಚುನಾವಣೆ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಎಲ್ಲೆಡೆ ಬಿರುಸಿನಿಂದ ಮತ ಬೇಟೆ ನಡೆಯುತ್ತಿದೆ #avintvcom
1 min readಅಂಕ್ಯರ್ :- ಪ್ರಾಣ ಬೇಕಾದರೂ ಬಿಡುವೆ ಕೊಟ್ಟ ಮಾತು ತಪ್ಪಲ್ಲ, ಮಾಸಪ್ಪ.
ಎರಡನೇಯ ಹಂತದ ಗ್ರಾಮಪಂಚಾಯ್ತಿ ಚುನಾವಣೆ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಎಲ್ಲೆಡೆ ಬಿರುಸಿನಿಂದ
ಮತ ಬೇಟೆ ನಡೆಯುತ್ತಿದೆ,ಅದರಂತೆ ದೇವನಹಳ್ಳಿ ತಾಲ್ಲೂಕು ಮಂಡಿಬೆಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದಿಂದ ಪಂಚಾಯತಿ ಚುನಾವಣೆಗೆ ಸ್ವರ್ಧಿಸಿರುವ ಮುತ್ತುರಾಯಸ್ವಾಮಿ,ಮುನೇಶ್ವರ,ಲಗುಮಮಮ್ಮ ದೇವಸ್ಥಾನದ ಪೂಜಾರಿ ಮಾಸಪ್ಪನರು ದೇವರ ಆಶಿರ್ವಾದದ ಮೇರೆಗೆ ಬಿರುಸಿನಿಂದ ಮತಯಾಚನೆ ಮಾಡುತ್ತಿದ್ದಾರೆ,
ಬೈಟ್ :- ಈ ಕುರಿತು ಮಾತನಾಡಿದ ಮುತ್ತುರಾಯಸ್ವಾಮಿ ದೇವಸ್ಥಾನದ ಪೂಜಾರಿ ಮಾಸಪ್ಪನವರು ಗ್ರಾಮದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಹಿಂದಿನಿಂದಲೂ ಸಮಾಜ ಸೇವೆಮಾಡುತ್ತಿದ್ದು ಈಗ 2020 ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತೆಂಗಿನ ಮರದ ಗುರುತಿನಿಂದ ಸ್ಪರ್ಧಿಸುತ್ತಿದ್ದು, ಯುವಕರು, ಊರಿನ ಪ್ರಮುಖರು ಬೆಂಬಲನೀಡಿದ್ದಾರೆ, ನನ್ನನ್ನು ಒಂದು ವೇಳೆ ಜನತೆ ಆಶಿರ್ವದಿಸಿ ಜಯಗೊಳಿಸಿದರೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವೆ ಹಾಗೂ ಯಾವುದೇ ರೀತಿಯಲ್ಲಿಯೂ ಸಜ್ಜನ ಪಕ್ಷಪಾತ ಭ್ರಷ್ಟಾಚಾರ ಮಾಡದೆ ಜನತೆಯ ಸೇವೆಯನ್ನು ಮಾಡುವೆ ಎಂದು ಹೇಳುತ್ತಾ ನಾನು ಗ್ರಾಮದ ಜನರ ಬೆಂಬಲಿತ ಅಭ್ಯರ್ಥಿ ಆದ್ದರಿಂದ ಚಿಕ್ಕತತ್ತಮಂಗಲ ಗ್ರಾಮದ ಜನತೆ ತಮ್ಮ ಅಮೂಲ್ಯವಾದ ಮತಗಳನ್ನು ನನ್ನ ಗುರುತಾದ ತೆಂಗಿನ ಮರದ ಗೆ ನೀಡಿ ಜಯಗೊಳಿಸಿ ತಮ್ಮ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ನರೇಂದ್ರ ಕುಮಾರ್ ,ಶಿವರಾಮ್, ಪವನ್, ಮಂಜುನಾಥ,ಅಶೋಕ,ಇತರರು ಇದ್ದರು