ಖ್ಯಾತ ದಂತ ವೈದ್ಯರಾದ ಡಾ: ರಾಜೇಶ್ ಹೆಗ್ದೆಯವರಿಗೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುವ.ಮಗ್ಗಲಮಕ್ಕಿಗಣೇಶ
1 min readದಿವಂಗತ ಡಾ:ರಾಜೇಶ್ ಹೆಗ್ಡೆಯವರು (53.ವರ್ಷ) ಕುಂದಾಪುರ ತಾಲೂಕಿನ ಹಿರಿಯೂರು ಗ್ರಾಮದ ಕುಲ್ಕೆಬೈಲ್ ನಲ್ಲಿ ದಿವಂಗತ ರಾಮಣ್ಣ ಹೆಗ್ಡೆಯವರ ದಂಪತಿಗಳಿಗೆ ಮೊದಲನೆಯ ಸುಪುತ್ರ. ಮೂವರು ಮಕ್ಕಳಲ್ಲಿ ಇವರ ತಂಗಿ ತುರುವೆಕೆರೆಯಲ್ಲಿ ನೆಲಸಿದ್ದಾರೆ.ತಮ್ಮ ಅಮೇರಿಕಾದಲ್ಲಿ ಜನ್ರಲ್ ಸರ್ಜನ್ ಅಗಿ ಕೆಲಸ ಮಾಡುತಿದ್ದರೆ. ಪಟೆಲ್ ಮನೆತನದ ಇವರ ಕುಟುಂಬ ಅದಿಕ ಕೃಷಿ ಜಮೀನನ್ನು ಹೊಂದಿದವರು. ಇವರು BDS.ಅನ್ನು ದಾವಣಗೆರೆಯಲ್ಲಿ ಮುಗಿಸಿ ಲಿಬಿಯಾದಲ್ಲಿ 2.ವರ್ಷ ಮತ್ತು ಅರಸಿಕೆರೆಯಲ್ಲಿ ತಮ್ಮ ವೈದ್ಯ ವೃತ್ತಿ ನಡೆಸಿ 2001.ರಲ್ಲಿ ಮೂಡಿಗೆರೆಯ ನೃತ್ಯಶ್ರಿ ಕಾಂಪ್ಲೆಕ್ಸ್ ನಲ್ಲಿ ನಂದಿ ಡೆಂಟಲ್ ಕ್ಲಿನಿಕ್ ತೆರೆದಿದ್ದರು. ಸ್ವಾತಿಹೆಗ್ಗಡೆಯವರೊಂದಿಗೆ ವಿವಾಹವಾಗಿ ಒರ್ವ ಪುತ್ರಿಯೊಂದಿಗೆ ಮೂಡಿಗೆರೆಯ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಮೂಡಿಗೆರೆ ಜನರ ಒಡನಾಡಿಯಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಕಳೆದ 2.ವರ್ಷಗಳ ಹಿಂದೆ ಲಯನ್ಸ್ ಡಿಸ್ಟ್ರಿಕ್ಟ್ ನ ವಲಯ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು ಅನೇಕ ಕಾರ್ಯಕ್ರಮಗಳನ್ನು ಮಾಡಿ ಹಲವು ಪ್ರಸಸ್ತಿಗಳನ್ನು ಪಡೆದಿದ್ದರು. ಮೂಡಿಗೆರೆಯ ಜೇಸಿ, ರೋಟರಿ. ತುಳುಕೂಟ,ಬಂಟರ ಸಂಘ ಇನ್ನು ಹಲವು ಸಂಘ ಸಂಸ್ಥೆಗಳೊಂದಿಗೆ ಸೇರಿ ಹಲವಾರು ದಂತ ತಪಾಸಣೆ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ. ಜಿಲ್ಲಾ ದಂತ ವೈದ್ಯರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುವ. ಮಗ್ಗಲಮಕ್ಕಿಗಣೇಶ. ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು. ಮೂಡಿಗೆರೆ. ಶ್ರದ್ದಾಂಜಲಿ ಕಾರ್ಯಕ್ರಮ……… ಮೂಡಿಗೆರೆಯ…. ಜೇಸಿಐ. ತಾ:ಕನ್ನಡ ಸಾಹಿತ್ಯ ಪರಿಷತ್ತು. ತಾ:ಸ್ಕೌಟ್ಸ್ ಮತ್ತು ಗೈಡ್ಸ್. ರೋಟರಿ ಕ್ಲಬ್. ಲಯನ್ಸ್ ಕ್ಲಬ್. ತಾ:ಬೆಳೆಗಾರರ ಸಂಘ. ಫ಼್ರೆಂಡ್ಸ್ ಯೂನಿಯನ್ ಬಾಲ್ ಬ್ಯಾಡ್ ಮೆಂಟೆನ್ ಕ್ಲಬ್. ತುಳು ಕೂಟ. ತಾ:ಕನ್ನಡ ಜಾನಪದ ಪರಿಷತ್ತು. ಸಚೇತ ಯುವ ಸಂಘ. ಮಲ್ನಾಡ್ ಗಲ್ಫ್ ಅಸೊಶಿಯೇಶನ್. ಇವರುಗಳ ಸಹಯೊಗದಲ್ಲಿ ಇತ್ತಿಚಿಗೆ ನಿಧನರಾದ ಮೂಡಿಗೆರೆಯ ಖ್ಯಾತ ದಂತ ವೈದ್ಯರಾದ ಡಾ: ರಾಜೇಶ್ ಹೆಗ್ದೆಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ. ದಿನಾಂಕ::25.12.2020. ಶುಕ್ರವಾರ. ಸಮಯ: ಬೆಳಿಗ್ಗೆ 10.00.ಗಂಟೆ. ಸ್ಥಳ::ಜೇಸಿ ಭವನ. ಮೂಡಿಗೆರೆ. ದಯವಿಟ್ಟು ಬನ್ನಿ. ಮಗ್ಗಲಮಕ್ಕಿಗಣೇಶ. ಅಧ್ಯಕ್ಷರು ತಾ:ಕನ್ನಡ ಸಾಹಿತ್ಯ ಪರಿಷತ್ತು. ಮೂಡಿಗೆರೆ.