2019-20ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಜೊಲ್ಲೆಜಿ ಯವರು ಭಾಗವಹಿಸಿ, ಮಾತನಾಡಿದರು #avintvcom
1 min read
ನಿಪ್ಪಾಣಿ
“ಅನ್ನದಾತರ ಏಳಿಗೆಗೆ ನಮ್ಮ ಶ್ರಮ ಅವಿರತ”
ಇಂದು ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಇದರ 2019-20ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಸಭೀಕರನ್ನು ಉದ್ದೇಶಿಸಿ ಮಾತನಾಡಿದರು.
ಅನ್ನದಾತರ ಬೆಳೆಗೆ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉತ್ತಮ ರೀತಿಯಲ್ಲಿ ಪ್ರತಿಫಲ ನೀಡುತ್ತಿದೆ. ಸಕಾಲದಲ್ಲಿ ರೈತರು ಬೆಳೆದ ಕಬ್ಬನ್ನು ಅರಿಯುವುದು, ಉಪ ಉತ್ಪನ್ನಗಳ ಲಾಭಾಂಶ, ಕಬ್ಬಿನ ದರ ನಿಗದಿ, ಪಾವತಿಯು ಸೇರಿದಂತೆ ಎಲ್ಲವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರದ ಅಧೀನದಲ್ಲಿ ನಡೆಯುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯ ಮೆಚ್ಚುವಂತದ್ದು. ಬಿಜೆಪಿ ಸರ್ಕಾರವೂ ರೈತರ ಪರವಾಗಿದ್ದು, ಅನ್ನದಾತರ ಅಭ್ಯುದಯಕ್ಕಾಗಿ ನಮ್ಮ ಶ್ರಮ ಅವಿರತವಾಗಿರುತ್ತದೆ. ಇದಲ್ಲದೇ, ರೈತರ ಬೆವರಿನ ಶ್ರಮಕ್ಕೆ ಪ್ರತಿಫಲ ನೀಡುತ್ತಿರುವ ಕಾರ್ಖಾನೆಗೆ ಅಗತ್ಯ ನೆರವನ್ನು ನೀಡಲು ಬಿಜೆಪಿ ಸಹಕಾರ ಸದಾ ಇರುತ್ತದೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷರಾದ ಶ್ರೀ ಎಂ.ಪಿ. ಪಾಟೀಲ, ಕಾರ್ಖಾನೆಯ ನಿರ್ದೇಶಕ ಮಂಡಳಿಯ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವು ಕುಲಕರ್ಣಿ ಹಾಗೂ ಇತರ ಸದಸ್ಯರು ಹಾಜರಿದ್ದರು.
निपाणी
“अन्नदातांच्या भरभराटीसाठी सदैव प्रयत्न”
आज निपाणी येथील श्री हालसिद्धनाथ सहकारी साखर कारखाना याच्या 2019-20च्या वार्षिक सर्वसाधारण सभेत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेऊन, उपस्थितांना उद्देशून संबोधित केले.
अन्नदातांच्या पिकाला श्री हालसिद्धनाथ सहकारी साखर कारखाना चांगल्या पद्धतीने भाव देत आहे. वेळेवर शेतकर्यांनी उगवलेला ऊस तोडणी करणे, उप-उत्पादनांचे लाभांश, ऊस दराची किंमत आणि पावती यासह सर्व वेळेवर चांगल्या पद्धतीने देखरेख करीत आहेत. सहकारी क्षेत्रांतर्गत कारखाना प्रशासनाचे काम कौतुकास्पद आहे. भाजपा सरकार शेतकर्यांच्या बाजूने असून, अन्नदातांच्या हितासाठी परिश्रम घेत आहे. याव्यतिरिक्त, शेतकर्यांच्या प्रयत्नांना प्रतिफळ देणाऱ्या कारखान्याला आवश्यक ते सहकार्य देण्यासाठी आमचा सहकार सदा राहील असे सांगितले.
यावेळी साखर कारखान्याचे अध्यक्ष श्री चंद्रकांत कोटिवाले, उपाध्यक्ष श्री एम.पी. पाटील, कारखान्याचे संचालक मंडळी सदस्य, व्यवस्थापकीय संचालक श्री शिवु कुलकर्णी आणि इतर सदस्य उपस्थित होते.