लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಳಂಬ ವಿಷಯ ಕುರಿತು ಸರ್ಕಿಟ್ ಹೌಸಿನಲ್ಲಿ ಚರ್ಚಿಸಲಾಯಿತು #avintvcom

1 min read

ಪತ್ರಿಕಾ ಪ್ರಕಟಣೆ ಗಾಗಿ ವಿಷಯ ಇಂದು ಹುಬ್ಬಳ್ಳಿಯ ಸರ್ಕಿಟ್ ಹೌಸಿನಲ್ಲಿ ಸಭೆ ಮಾಡಲಾಯಿತು ಈ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಳಂಬ ವಿಷಯ ಕುರಿತು ಚರ್ಚಿಸಲಾಯಿತು ಚರ್ಚೆಯಲ್ಲಿ ಪಾಲ್ಗೊಂಡಂತೆ ನಗರ ಪಾಲಿಕೆ ಸದಸ್ಯ ರಾಧ ಸಾನಿಕೊಪ್ಪ ಅವರು ಚುನಾವಣೆ ವಿಷಯವಾಗಿ ನಾವು ಕೋರ್ಟಿಗೆ ಹೋದ ಸಂದರ್ಭದಲ್ಲಿ ಮೊದಮೊದಲಿಗೆ ಪ್ರತಿ ತಿಂಗಳು ಪೂರ್ವಕವಾಗಿ ಸಂದರ್ಭದಲ್ಲಿ ಹೈಕೋರ್ಟಿನ ಆದೇಶದ ಪ್ರಕಾರ 15ನೇ ಒಳಗಾಗಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮೀಸಲಾತಿ ಹಾಗೂ ಹೊಸ 82 ಮತಕ್ಷೇತ್ರದ ಬಗ್ಗೆ ಮಾಹಿತಿಯನ್ನು ನ್ಯಾಯಾಧೀಶರು ಕೇಳಿದರು ಆದೇಶ ಪೂರಕವಾಗಿ ಜಿಲ್ಲಾಧಿಕಾರಿಗಳು ಎಲ್ಲ ತಯಾರಿ ಮಾಡಿ ಕೋರ್ಟಿಗೆ ಸಲ್ಲಿಸಿದ್ದರು ತದನಂತರ ಆದೇಶ ಬರೆದೆ ಸುಮಾರು 21 ತಿಂಗಳು ಕಳೆದು ಎಂದು ಹೇಳಿದರು…… ನಂತರ ಮಾತನಾಡಿದ ಪಾಲಿಕೆ ಸದಸ್ಯ ರಾಜು ಅಂಬುಲಿ ಅವರು ಮಾತನಾಡಿ ಪ್ರತ್ಯೇಕ ಬಿಜೆಪಿ ಸದಸ್ಯರು p I l ಹಾಕಿದರು ವಾರ್ಡ್ ಮರುವಿಂಗಡನೆ ವಿಷಯ ವಾಗಿ ಹಾಕಿದರು ತದನಂತರ ಕೋರ್ಟಿನಲ್ಲಿ ಮತ್ತೆ ಕಾಲಹರಣ ಆಗತೊಡಗಿತು ಎಂದು ಹೇಳಿದರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ಅವರು ಮಾತನಾಡಿ ಈಗಾಗಲೇ ಸಾಕಷ್ಟು ಕಾಲಹರನವಾಗಿದೆ ನಾವು ರಾಜಕೀಯ ಪಕ್ಷದ ಮುಖಂಡರು ಸೇರಿ ಸುಪ್ರೀಂಕೋರ್ಟಿಗೆ ಹೋದರೆ ಸೂಕ್ತ ಎಂದು ಹೇಳಿದರು ಹಾಗೂ ಮತ್ತೊಂದು ಸಭೆ ಮಾಡಿ ಎಲ್ಲ ಪಕ್ಷದ ಮುಖಂಡರು ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹ ಮಾಡಿ ಸುಪ್ರೀಂಕೋರ್ಟಿಗೆ ಹೋಗುವುದು ಸೂಕ್ತ ಎಂದು ತಿಳಿಸಿದರು ಮಾಜಿ ಶಾಸಕ N H ಕೋನರೆಡ್ಡಿ ಅವರು ಮಾತನಾಡಿ ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರದಲ್ಲಿ ಬಹಳ ನಿರ್ಲಕ್ಷ್ಯ ವಹಿಸುತ್ತಿದೆ ಕಾರಣ ಇವರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ದಲ್ಲಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿಷಯದಲ್ಲಿ ಸಾಕಷ್ಟು ತಾರತಮ್ಯ ರಾಜ್ಯ ಸರ್ಕಾರ ಮಾಡಿದೆ… ಕಳೆದ ಎರಡು ವರ್ಷಗಳಲ್ಲಿ ಮಹಾನಗರ ಪಾಲಿಕೆ ಸುಮಾರು 21 ತಿಂಗಳು ಕಳೆದುಹೋಗಿವೆ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಧಾರವಾಡ ಜಿಲ್ಲೆ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು 21ನೇ ಸನ್ಸೇಸನ್ ನೆಪವೊಡ್ಡಿ ಕಾಲಹರಣ ಮಾಡಬಹುದು ಹಾಗಾಗಿ ಸರ್ವಪಕ್ಷ ಸದಸ್ಯರು ಸೇರಿ ಸುಪ್ರೀಂಕೋರ್ಟ್ಗೆಗೆ ಹೊಗುವುದು ಸರಿಯಾದ ನಿರ್ಧಾರ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಿದ್ದು ತೇಜಿ ಅವರು ಮಾತನಾಡಿ ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿತ್ತು ಅಭಿವೃದ್ಧಿ ಕುಂಠಿತವಾಗಿದೆ ಬಿಬಿಎಂಪಿ ವಿಚಾರದಲ್ಲಿ ರಾಜ್ಯ ಸರ್ಕಾರವು ಕೋರ್ಟಿನ ಆದೇಶ ಬಂದ ತಕ್ಷಣವೇ ರಾಜ್ಯ ಸರ್ಕಾರದ ಮಂತ್ರಿಗಳು ಸಭೆಯನ್ನು ಮಾಡುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಷಯದಲ್ಲಿ ನಮ್ಮ ಕೇಂದ್ರ ಮಂತ್ರಿಯವರ ಉಸ್ತುವಾರಿ ಮಂತ್ರಿಯವರ ಮೌನವೇಕೆ ಎಂದು ಹೇಳಿದರು ಹಾಗೂ ಕಳೆದ 2 ವರ್ಷಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ವಿಷಯದಲ್ಲಿ ಹೈಕೋರ್ಟಿನಲ್ಲಿ ಸೂಕ್ತವಾದ ತೀರ್ಮಾನ ಬರದೆ ಇದ್ದಾಗ ಮಂಗಳೂರು ಮಹಾನಗರ ಪಾಲಿಕೆ ಮುಖಂಡರು ಸೇರಿ ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯವನ್ನು ದೊರಕಿಸಿಕೊಂಡು ಬಂದರು ನಮ್ಮ ಜಿಲ್ಲೆಯ ರಾಜಕೀಯ ಪಕ್ಷದ ಮುಖಂಡರು ಮತ್ತೊಂದು ಸಭೆಯನ್ನು ಜನವರಿ ಮೊದಲನೇ ವಾರದಲ್ಲಿ ಸಭೆ ಮಾಡಿ ತದನಂತರ ಸುಪ್ರೀಂಕೋರ್ಟ್ಗೆ ಹೋಗಲಿಕ್ಕೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಹೋಗಬೇಕೆಂದು ಹೇಳಿದರು ಈ ಸಂದರ್ಭದಲ್ಲಿ  ಪಾಲಿಕೆಯ ಮತ್ತೊಬ್ಬ ಸದಸ್ಯ ಬಶೀರ್ ಗೂಡ್ಡಮಾಲ ಎನ್ ಎಚ್ ರಾಜು ಪೀರಜಾದೆ ಬಶೀರ್ ಮುಧೋಳ್ ರಮೇಶ್ ಬೋಸ್ಲೆ ನಾಗರಾಜ್ ಕಾಳೇ ಚೆನ್ನಪ್ಪ ಗೌಡ ಪಾಟೀಲ್ ಸಾಧಿಕ್ ಹಕಿಂ ಇತರರು ಇದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author