लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಗ್ಗಸಗೋಡು ಶಾಲೆಗೆ ಸಮಗ್ರ ಪ್ರಶಸ್ತಿ.

ದಿನಾಂಕ:29:08:2026 ಶನಿವಾರ ಬಣಕಲ್/ಬಾಳೂರು ವಲಯ ಮಟ್ಟದ 14ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್ ಇವರ ಆತಿಥ್ಯದಲ್ಲಿ ಬಣಕಲ್ ಪ್ರೌಢಶಾಲೆ ಆವರಣದಲ್ಲಿ ನಡೆಯಿತು ಇದರಲ್ಲಿ
ಬಾಲಕರ ವಿಭಾಗದ ವಯಕ್ತಿಕ ಸಮಗ್ರ ಪ್ರಶಸ್ತಿಯನ್ನು
GHPS ಬಗ್ಗಸಗೂಡು ಹಾಗೂ ಶ್ರೀ ವಿದ್ಯಾ ಭಾರತಿ ಪ್ರೌಡಶಾಲೆ.
ಬಾಲಕಿಯರ ವಿಭಾಗದ ವಯಕ್ತಿಕ ಸಮಗ್ರ
GHPS ಬಗ್ಗಸಗೂಡು ಹಾಗೂ ಬಣಕಲ್ ಪ್ರೌಢಶಾಲೆ ಬಣಕಲ್
ಶಾಲಾ ಸಮಗ್ರ ಪ್ರಶಸ್ತಿ
GHPS ಬಗ್ಗಸಗೂಡು ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿತು

ಕ್ರೀಡಾ ಕೂಟದ ಉದ್ಘಾಟನೆಯನ್ನು ಕಾಫಿ ಉದ್ಯಮಿ ಮೋಹನ್ ಬಾಳೂರು ನೆರವೇರಿಸಿ ಮಾತನಾಡಿ ಕ್ರೀಡೆ ಪ್ರತಿಯೊಬ್ಬರ ದೇಹವನ್ನು ಸದೃಢವಾಗಿಸುತ್ತದೆ ಆದ್ದರಿಂದ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮೀನಾಕ್ಷಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸಿಪೋಷಿಸಿ ಕ್ರೀಡಾ ಕ್ಷೇತ್ರದಲ್ಲಿ ಅವರನ್ನು ಸಾಧನೆಯತ್ತ ಪ್ರೋತ್ಸಾಹಿಲು ಶಾಲಾ ಕ್ರೀಡಾಕೂಟ ಸಹಕಾರಿಯಾಗಿದೆ ಮತ್ತು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.
ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಗಳಾದ ಆಶಿಕ್,ಶ್ರೀಜಿತ್,ಸಮರ್ಥ್,ಪ್ರಶಾಂತ್, ಭೂಮಿಕಾ ಇವರು ಕ್ರೀಡಾ ಜ್ಯೋತಿ ಹಿಡಿದು ಕ್ರೀಡಾಂಗಣಕ್ಕೆ ಆಗಮಿಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಉದ್ಘಾಟನಾ ನೃತ್ಯ ಎಲ್ಲರ ಗಮನ ಸೆಳೆಯಿತು.ಕ್ರೀಡಾಕೂಟದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಜರೀನಾ , ಸಂಸ್ಥೆಯ ಉಪಾಧ್ಯಕ್ಷ ಬಿ.ಇ.ಸುಬ್ರಾಯಗೌಡ.‌ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ.ಕೋಶಾಧಿಕಾರಿ ಯು.ಪಿ.ರಾಮಚಂದ್ರಹೊಳ್ಳ.ನಿರ್ದೆಶಕರಾದ ಬಿ.ಬಿ.ಮಂಜುನಾಥ್.ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಲವೀನಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಫೈರೋಜ್.ಮತ್ತು ಸುಧಾಕರ್,ಅರುಣ್ ಲೋಬೋ.ನಾರಾಯಣ ಗೌಡ.ಬೆಟ್ಟಗೆರೆ ಲೋಕೇಶ್.ಗ್ಯಾರೇಜ್ ಸಂಘದ ರವಿ.ಜೆಸಿಐನ ರಂಜಿತ್.ಸೇವಾಭಾರತಿ ಸಂಘದ ಸತೀಶ್.ವಿಪತ್ತು ನಿರ್ವಹಣಾ ಘಟಕದ ರವಿ.ಬಣಕಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ದಿವಾಕರ್, ಪೃಥ್ವಿ,ಕಾಲೇಜು ಪ್ರಾಂಶುಪಾಲರಾದ ಸತೀಶ್.ಶಾಲಾ ವಾಹನ ಸಂಘದ ಅಧ್ಯಕ್ಷ ಮಂಜುನಾಥ್.ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು,ಮುಖ್ಯಶಿಕ್ಷಕರಾದ ಮಾಲತಿ ಮತ್ತು ನಾಗರಾಜು. ಉಪಮುಖ್ಯಶಿಕ್ಷಕರಾದ ವಸಂತ್ ಹಾರ್ಗೋಡು ಶಿಕ್ಷಕರಾದ ಭಕ್ತೇಶ್.ವಿಜಯೇಂದ್ರ.ಪ್ರತಾಪ್.ಲಿಂಗರಾಜು.
ಲೋಕೇಶ್.ಅಶ್ವತ್.ವಿಜೇಂದ್ರ.ಲೀಲಾಮಣಿ.ಶ್ವೇತಾ. ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್. ಸಾಯಿಕೀರ್ತನ. ಗೀತಾ.
ಅಶ್ವಿತಾ.ಆಶಾ.ಅನುಷ.ಪೂಜಾ.ಸುಶ್ಮಿತಾ.ಚಂದನ.ಪ್ರೀತಿ.
ನೃತ್ಯ ಶಿಕ್ಷಕ ಕಿಶೋರ್ .ಶಾಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿವಿಧ ಶಾಲೆಗಳ
ವಿದ್ಯಾರ್ಥಿಗಳು ಮತ್ತು ಶಿಕ್ಷಕರು,ಪೋಷಕರು
ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *