ಚಳಿ ಕಾಯಿಸ ಬೇಕೆ ಬನ್ನಿ…..
1 min read
ಚಳಿ ಕಾಯಿಸ ಬೇಕೆ ಬನ್ನಿ……
ಮೂಡಿಗೆರೆ ತಾಲೂಕು.ಗೊಣೀಬೀಡು ಪಟ್ಟಣದ ಸಂತೆ ಮಳಿಗೆಗಳಲ್ಲಿ ವಲಸೆ ಕಾರ್ಮಿಕರು…. ವಾರದ ಸಂತೆಗೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ಮಳಿಗೆಗಳನ್ನು ಸ್ವಂತ ಮನೆಗಳಾಗಿ ಮಾಡಿಕೊಂಡು ಮಳಿಗೆಗಳನ್ನು ಹಾಳು ಮಾಡುತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳಿಗೆಗಳಲ್ಲಿ ನೆಲಕ್ಕೆ ಹಾಕಿರುವ ಸಿಮೆಂಟ್ ಅಡಿಗೆ ಮಾಡಲು ಸೌದೆ ಬಳಸುವುದರಿಂದ ಸಂಪೂರ್ಣ ಹಾಳಾಗುತ್ತಿದೆ.ತೋಟಕ್ಕೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ತೋಟದ ಮಾಲಿಕರು ಲೈನಿನಲ್ಲಿ ವ್ಯವಸ್ಥೆ ಮಾಡಬೇಕೆಂದು ತ್ತಿಳಿಸಿದ್ದಾರೆ.
ಸ್ವಚ್ಚತೆಗೆ ಆದ್ಯತೆ ಕೊಡದೆ ಗಬ್ಬು ನಾರುತ್ತಿದೆ.
ಶಾಲಾ ಮಕ್ಕಳು ದಿನ ನಿತ್ಯ ಇದೆ ದಾರಿಯಲ್ಲಿ ತಿರುಗಾಡ ಬೇಕಾಗಿದೆ.
ಗ್ರಾಮ ಪಂಚಾಯತಿ ಅದ್ಯಕ್ಷರಿಗೆ.ಪಿಡಿಯೊಗೆ ತಿಳಿಸಿದರೆ ಯಾವುದೆ ಪ್ರಯೋಜನ ಅಗುತ್ತಿಲ್ಲ ಎಂದು ದೂರಿದ್ದಾರೆ.
ಒಂದು ವಾರದ ಒಳಗೆ ಸಂತೆ ಮೈದಾನ ಖಾಲಿ ಮಾಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.