ಪ್ರಭುದ್ದತೆಯ ಪರಿಷತ್ತಿನ ಅದಿನಾಯಕ ಬಿ.ಎಲ್.ಶಂಕರ್ ರವರಿಗೆ ಹುಟ್ಟುಹಬ್ಬ..
1 min read
ಪ್ರಭುದ್ದತೆಯ ಪರಿಷತ್ತಿನ ಅದಿನಾಯಕ ಬಿ.ಎಲ್.ಶಂಕರ್ ರವರಿಗೆ ಹುಟ್ಟುಹಬ್ಬ..
ಶ್ರೀಯುತ ಬಿ.ಎಲ್.ಶಂಕರ್ ಸರ್ ಅವರ ಹುಟ್ಟು ಹಬ್ಬಕ್ಕೆ ಬಸವ ಕೃಪೆಯ ಬಯಸುತ್ತಾ.
ಅವರ ಪ್ರತಿ ಹುಟ್ಟು ಹಬ್ಬಕ್ಕೆ ಅವರೊಳಗಿನ ಮತ್ತೊಂದು ಪುಟವನ್ನು ತೋರಿಸುವದಷ್ಟೇ ಅವರಿಗೆ ಕೊಡುವ ನನ್ನ ಪುಟ್ಟ ಉಡುಗೊರೆ.
ತಮ್ಮನ್ನು ನಾನಾ ಶಕ್ತಿಗಳಿಗೆ ಮಾರಿಕೊಂಡಿರುವ ರಾಜಕಾರಣಿಗಳೇ ಅತಿ ಹೆಚ್ಚಿರುವವರ ನಡುವೆ ಬಿ.ಎಲ್.ಶಂಕರ್ ಅವರು ಮಾರಾಟವೂ ಆಗಲಿಲ್ಲ, ಖರೀದಿದಾರರು ಇವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಕಾರಣ ಇವತ್ತಿನ ರಾಜಕಾರಣವನ್ನು ಕಟ್ಟಲು ಬೇಕಿರುವುದು ದ್ವೇಷದ ಇಟ್ಟಿಗೆಯೇ ಹೊರತು ಪ್ರೀತಿಯನ್ನರಡುವ ಬಿ.ಎಲ್.ಶಂಕರ್ ಅವರಂತ ವಿದ್ಯಮಾನಗಳಲ್ಲ.
ಜಾತಿ ಧರ್ಮದ ಹೆಸರಲ್ಲಿ ಜನರ ಅರಿವನ್ನು ಕೊಂದು ರಾಜಕಾರಣವನ್ನು ಕಟ್ಟುವವರ ನಡುವೆ ಸೋತ ಸತ್ಯಗಳನ್ನು ಎತ್ತಿ ತರುವ ಮೂಲಕ ಬಿ.ಎಲ್.ಶಂಕರ್ ಅವರು ಉದ್ವಿಗ್ನಗೊಳಿಸುವ ಕುಟಿಲ ಮನಸ್ಸುಗಳ ಜಟಿಲ ಪ್ರಶ್ನೆಗಳಿಗೆ ಪ್ರಜ್ಞಾಪೂರ್ವಕವಾದ ಉತ್ತರಗಳನ್ನು ಕೊಡುವ ಮೂಲಕ ‘ಅರಬರೆ ಪ್ರಜಾಪ್ರಭುತ್ವ ವಾದಿಗಳ’ ಕೊಳಕು ಮನಸ್ಸನ್ನು ತೊಳೆಯುವಲ್ಲಿ ಹೋರಾಟ ನಿರತರಾಗಿರುವ ಬಿ.ಎಲ್ ಶಂಕರ್ ಅವರ ವ್ಯಕ್ತಿತ್ವಕ್ಕೆ ಅಧಿಕಾರದ ಜವಬ್ದಾರಿಗಳನ್ನು ಕೊಡುವಲ್ಲಿ ಇವತ್ತಿನ “ಲಾಭಿಯ ರಾಜಕೀಯ ವ್ಯವಸ್ಥೆ” ವಿಫಲಗೊಂಡಿದೆ.
ಅಧಿಕಾರದಿಂದ ಮಾಜಿ ಆದರೆ ಅವರ ಜೀವನವೇ ಮಾಜಿ ಆಗುವ ಮಟ್ಟಕ್ಕೆ ಇಳಿಯುವ ಈ ಹೊತ್ತಿನಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಸದಾ ಪ್ರಸ್ತುತರಾಗಿರುವ ಸವಾಲಲ್ಲಿ ಬಿ.ಎಲ್,ಶಂಕರ್ ಅವರು ಪೂರ್ಣ ಯಶಸ್ಸು ಕಂಡಿದ್ದಾರೆ. ಇವರನ್ನು ರಾಜಕಾರಣಿ ಅಂತ ಕರೆಯುವುದಕ್ಕಿಂತಲೂ ಜನಹಿತ ಸಿದ್ಧಾಂತಕ್ಕೆ ತೀವ್ರ ಬದ್ಧತೆಯುಳ್ಳ ಒಬ್ಬ ಪ್ರಖಂಡ ಪ್ರಜಾಪ್ರಭುತ್ವವಾದಿ ಎಂಬುದಕ್ಕೆ ಹೆಚ್ಚೆಚ್ಚು ಅರ್ಹರಾಗಿ ಕಾಣ ಸಿಗುತ್ತಾರೆ.
ಬಿ.ಎಲ್.ಶಂಕರ್ ಅವರ ಅಗತ್ಯತೆ ಬೇಕೆಂದು ಒಂದು ಚಿಂತನಾ ವರ್ಗದ ಮನಸ್ಸುಗಳಿಗೆ ಕಾಡುವುದಕ್ಕೆ ಬಲವಾದ ಕಾರಣಗಳಿವೆ. ಪ್ರಭುತ್ವದ ಖಾಸಗಿ ವಕ್ತಾರರಂತಿರುವ ಬಹತೇಕ ಏಕಮುಖಿ ಮಾಧ್ಯಮಗಳು ‘ಚಾರಿತ್ರಿಕ ಸಂಗತಿಗಳ’ ವಾಸ್ತವತೆಯನ್ನು ತಿರುಚಿ ವರ್ತಮಾನದ ಜನ ಮಾನಸಕ್ಕೆ ಕೃತಕವಾದ ವಿಚಾರಗಳನ್ನು ತುಂಬಿ ಈ ನೆಲ ಮೂಲದ ಸತ್ಯತೆಗಳಿಗೆ ಭೀಕರವಾದ, ವೇಗವಾದ, ತುರ್ತಾದ ಹೊಡೆತಗಳನ್ನು ಕೊಡುತ್ತಿದ್ದಾರೆ. ಇದನ್ನು ತಡೆದು ನಿಲ್ಲಲ್ಲು ಜನ ಜಾಗೃತಿ ಮಾಡಲು ಈ ನೆಲ ಮೂಲದ ವೈಚಾರಿಕ ಜ್ಞಾನ ಮತ್ತು ಅಖಂಡವಾದ ನಿರ್ಭಯತೆ ಬೇಕು. ಇವೆರಡು ಸಹ ಬಿ.ಎಲ್.ಶಂಕರ್ ಅವರಲ್ಲಿ ಹೇರಳವಾಗಿದೆ. ಅಧಿಕಾರವನ್ನು ಹುಚ್ಚರು ನಿಭಾಯಿಸಬಹುದು. ಆದರೆ ಚಾರಿತ್ರಿಕ ಸತ್ಯಗಳನ್ನು ತುಳಿಯುವಲ್ಲಿ ಇರುವ ಪ್ರಬಲ ಶಕ್ತಿಗಳ ವಿರುದ್ಧ ಧ್ವನಿ ಎತ್ತಲು ಬಿ.ಎಲ್.ಶಂಕರ್ ಅವರಂತಹ ಪ್ರಬುದ್ಧರೇ ಬೇಕಾಗಿದೆ. ಈ ಕಾರಣಕ್ಕೆ ಬಿ.ಎಲ್.ಶಂಕರ್ ಮತ್ತು ಅವರಂತವರು ಶಾಸನ ಸಭೆಗಳಲ್ಲಿ, ಸಂಸತ್ತಿನಲ್ಲಿ ಇರಬೇಕೆಂಬದು ಬಹಳಷ್ಟು ಜನರನ್ನು ಬಿಟ್ಟು ಬಿಡದೇ ಕಾಡುತ್ತದೆ.
ಸಣ್ಣ ದನಿಯಲ್ಲಿಯೇ ಕೇವಲ “Yes” ಎಂದಿದ್ದರೆ ಸಾಕಿತ್ತು ಬಿಜೆಪಿಯಲ್ಲಿ ಅಡ್ಮಿಶನ್ ಪ್ರಕ್ರಿಯೇ ಕೆಲವೇ ಕ್ಷಣಗಳಲ್ಲಿ ಮುಗಿದು ಮತ್ತು ಸಾಲದೆಂಬಂತೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಸಹ ಸಿಕ್ಕಿರುತ್ತಿತ್ತು. ಇವತ್ತಿಗೆ ನಾಲ್ಕನೇ ಬಾರಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ
ಮತ್ತು ಕೇಂದ್ರದಲ್ಲಿ ಬಿ.ಎಲ್.ಶಂಕರ್ ಮಂತ್ರಿಗಳು ಆಗಿರುತ್ತಿದ್ದರು. ಲೋಕಸಭಾ ಟಿಕೇಟ್ ನೀಡಿ ಬಿ.ಎಲ್. ಶಂಕರ್ ಅವರನ್ನು ಆಪರೇಷನ್ ಕಮಲದ ಪ್ಲಾನಿಗೆ ಬಿ.ಎಲ್. ಶಂಕರ್ ಅವರು ಗೌರವಯುತವಾಗಿ I am not to joining bjp; sorry’ ಆಹ್ವಾನಿಸಿದ್ದಕ್ಕೆ Thanks ಎಂದು ಬಿಜೆಪಿಯ ಪ್ರಮುಖರೊಬ್ಬರಿಗೆ ಬಿ.ಎಲ್. ಶಂಕರ್ ತಿಳಿಸಿದ್ದು ಈಗ ಒಂದು ಗೌಪ್ಯ ಇತಿಹಾಸ.
ಅಧಿಕಾರದ ವ್ಯಾಮೋಹ ಇದ್ದಿದ್ದರೆ ಬಿಜೆಪಿಯ ಮೂಲಕ ಮನೆ ಬಾಗಿಲಿಗೆ ಬಂದ ಅಧಿಕಾರವನ್ನು ಬಿ.ಎಲ್.ಶಂಕರ್ ಬೇಡ ಎನ್ನುತ್ತಿರಲಿಲ್ಲ. ಏಕೋ ಏನೋ ಅವರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ ಯಾವುದೇ ಪಕ್ಷದ ಮುಖಂಡ ಆಗ ಬಯಸುವುದಕ್ಕಿಂತಲೂ ನಾನೊಬ್ಬ “ಪರಿಶುದ್ಧ ಪ್ರಜಾಪ್ರಭುತ್ವವಾದಿ” ಆಗಬೇಕು ಎಂಬ ಅವರ ಅಂತರಂಗದ ನಿರ್ಣಯಕ್ಕೆ ಸುಧೀರ್ಘ ಕಾಲದವರೆಗೂ ಬದ್ಧರಾಗಿ ಅಧಿಕಾರಕ್ಕಿಂತ ಜನಹಿತ ಆಶಯಗಳತ್ತ ಅವರ ಮನಸ್ಸು ಬಲವಾಗಿ ವಾಲಿದ್ದರಿಂದ ಬಿಜೆಪಿಯಿಂದ ಲೋಕಸಭೆಗೆ ಹೋಗುವ ಅವಕಾಶಕ್ಕೆ ತಡೆ ಆಯಿತು. ಇಷ್ಟರ ನಡುವೆ ಅಧಿಕಾರ ಸಿಗದೇ ಇದ್ದರೂ ಸೈದ್ಧಾಂತಿಕವಾಗಿ ಸಂತೋಷವಾಗಿದ್ದಾರೆ, ಆರೋಗ್ಯವಾಗಿದ್ದಾರೆ..
“ಮುತ್ಸದ್ಧಿ ರಾಜಕಾರಣದ” ಕೊನೆ ಕೊಂಡಿಗಳ ಪೈಕಿ ಬಿ.ಎಲ್.ಶಂಕರ್ ಒಬ್ಬರು. ಇಂತವರ ಸಾಂಗತ್ಯ ಪಡೆದು ಅವರ ನಡೆನುಡಿಗಳ ಅರಿವಿನಿಂದ ಇವತ್ತಿನ ರಾಜಕಾರಣಿಗಳು ಜನ ಸಮುದಾಯವನ್ನು ಪ್ರಭಾವಿಸಲು ಶಕ್ತಿ ಇರುವ “ಮುತ್ಸದ್ಧಿತನವನ್ನು” ತಾನೂ ಉಂಡು, ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಜವಬ್ದಾರಿಯನ್ನು ಪರ್ತಕರ್ತರು, ಹೋರಾಟಗಾರರು, ರಾಜಕಾರಣಿಗಳು ವಹಿಸಬೇಕಿದೆ. ಈ ಕಾರಣಕ್ಕೆ ಬಿ.ಎಲ್.ಶಂಕರ್ ನನ್ನ ದೃಷ್ಟಿಯಲ್ಲಿ ಅವರೊಂದು “ವಿದ್ಯಾಮಾನ”.
ನೂರ್ಕಾಲ ಹುಟ್ಟು ಹಬ್ಬದ ಸಂಭ್ರಮಕ್ಕೆ ಅವರೊಂದಿಗೆ ಕನ್ನಡ ನಾಡಿನ ನೆಲ ಜನ ಎಲ್ಲವೂ ಸಾಕ್ಷಿಯಾಗಲಿ..
ಹ್ಯಾಪಿ ಹುಟ್ದಬ್ಬ ಸರ್.
ಶುಭವಾಗಲಿ…
ಮನಸುಳಿ ಮೋಹನ್ ತರೀಕೆರೆ.