ಬೆಳೆಗಾರರ ಮತ್ತು ರೈತರ ಉಳಿವಿಗಾಗಿ ರೈತ ಸಮಾವೇಶ : ಬಾಲಕೃಷ್ಣ…
1 min read
ಬೆಳೆಗಾರರ ಮತ್ತು ರೈತರ ಉಳಿವಿಗಾಗಿ ರೈತ ಸಮಾವೇಶ : ಬಾಲಕೃಷ್ಣ.
ಇತ್ತೀಚಿನ ದಿನಗಳಲ್ಲಿ ಬೆಳೆಗಾರರು ಮತ್ತು ರೈತರು ಒಂದಲ್ಲ ಒಂದು ಸಮಸ್ಯೆಯಿಂದ ಸಿಲುಕಿಕೊಳ್ಳುತ್ತಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರಗಳು ಸಹ ರೈತರ ಸಮಸ್ಯೆಗಳು ಗಮನಹರಿಸುವ ನಿಟ್ಟಿನಲ್ಲಿ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಶಾಶ್ವತ ಪರಿಹಾರ ದೊರಸಿಸುವಂತೆ ಒತ್ತಾಯಿಸಿ ಇದೆ ಜೂನ್ 9.ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ “ಜಿಲ್ಲಾ ರೈತ ಸಮಾವೇಶ” ದಲ್ಲಿ ಜಿಲ್ಲೆಯ ರೈತರು ಮತ್ತು ಬೆಳೆಗಾರರು ಹಾಗೂ ಕಾರ್ಮಿಕರು ಭಾಗವಹಿಸಿ ಮಲೆನಾಡಿನ ಜನ ಜೀವನ ಉಳಿಸುವಂತೆ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದರು.
ಅವರು ಬುಧವಾರದಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಕಚೇರಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಪ್ರಾಸ್ತವಿಕ ಭಾಷಣದಲ್ಲಿ ಮಾತನಾಡುತ್ತಾ, ಕೆಜಿಎಫ್, ಬೆಳೆಗಾರರ ಸಂಘ ಹಾಗು ರೈತಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಹೋರಾಟ ಮಾಡಿದ್ದರ ಪರಿಣಾಮ ಕಸ್ತೂರಿ ರಂಗನ್ ವರದಿ ತೂಗುಕತ್ತಿಯಿಂದ ಬಚಾವ್ ಆಗಿದ್ದೇವೆ, ಆದರೆ ಈಗ ದಟ್ಟ ಅರಣ್ಯ (ಡೀಮ್ಸ್ ಪಾರೇಸ್ಟ್) ಹೆಸರಿನಲ್ಲಿ ಮತ್ತೊಂದು ತೂಗುಕತ್ತಿಯನ್ನು ನೇತು ಹಾಕುವ ಪ್ರಯತ್ನ ನಡೆಯುತ್ತಿದೆ.
ಇದು ಹೀಗೆ ಮುಂದುವರೆದರೆ ಬೆಳೆಗಾರರು ಮತ್ತು ರೈತರು ಹಾಗೂ ಮಲೆನಾಡಿಗರ ಜನ ಜೀವನ ಅಸ್ತವ್ಯಸ್ತ ಆಗುವುದರೊಂದಿಗೆ ನೆಲೆಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳುವುದರ ಮೂಲಕ ಈ ಸಮಾವೇಶವನು ಯಶಸ್ವಿ ಗೊಳಿಸಿಕೊಡುವಂತೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಹೆಚ್.ಬಿ.ಶಿವಣ್ಣ ವಹಿಸಿ ಮಾತನಾಡುತ್ತಾ ಬೆಳೆಗಾರರ ಉಳಿವಿಗಾಗಿ ಪಕ್ಷ ಬೇದ ಮರೆತು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿಗೊಂಡರು.
ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್.ಎಂ.ಜೆ ಮಾತನಾಡಿ, ಕಾಫಿ ಬೆಳೆಗಾರರನ್ನು ಎಚ್ಚರಿಸುವ ಕೆಲಸ ವಾಗಬೇಕು. ಇಂದು ಬೆಳೆಗಾರರು ಮತ್ತು ರೈತರು ಅನೇಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಯಾವುದೇ ಒಂದು ಸಮಸ್ಯೆಯ ಪರಿಹಾರಕ್ಕೆ ಜನಶಕ್ತಿಯೇ ನಿರ್ಣಾಯಕವಾಗಿದ್ದು, ಜೂನ್ 9ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಮತ್ತು ರೈತರನ್ನು ಕರೆತರಲು ಇಲ್ಲಿರುವ ಪ್ರತಿಯೊಬ್ಬರು ಕನಿಷ್ಠ 50 ಜನರನ್ನು ಕರೆತರುವ ಸಂಕಲ್ಪ ಮಾಡಬೇಕೆಂದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿಯ ಅಧ್ಯಕ್ಷ ಎಸ್ ವಿಜಂತರ್ ಕುಮಾರ್ ಅವರು ಸಮಾವೇಶದ ಕುರಿತು ವಿಚಾರ ಮಂಡಿ ಸಿದರು. ಒತ್ತುವರಿ ಹೋರಾಟ ಸಮಿತಿಯ ಅಧ್ಯಕ್ಷರಾದಂತಹ ಬಿಎಸ್ ಜಯರಾವತ್ ಮುಖಂಡರಾದ ದೀಪಕ್ ದೊಡ್ಡಯ್ಯ ಒಕ್ಕಲಿಗರ ಸಂಘದ ಆದಕರಾದ ಬ್ರಿಜೇಶ್ ಕಡಿದಾಳು.ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿಪಿ ಸುರೇಂದ್ರ, ಸಂಘಟನಾ ಕಾರ್ಯದರ್ಶಿ ಅಶೋಕ್ ಸುರಪ್ಪನಹಳ್ಳಿ ಉಪಾಧ್ಯ ಕ್ಷರಾದ ಸುರೇಶ್ ಆಲ್ಲೂರು. ಖಜಾಂಚಿ ಗಳಾದ ಸುಂದರೇಶ್, ಕೆ. ಮಲ್ಲೇಶ್. ಮನೋಹರ್, ಡಿ.ಎಸ್ರಘು, ವಸ್ತಾರೆ ಬೆಳೆಗಾ ರರ ಸಂಘದ ಅಧ್ಯಕ್ಷ ಟಿ.ಡಿ ಮಲ್ಲೆಶ್ ಕಾರ್ಯದರ್ಶಿ ರತೀಶ್ ಕುಮಾರ್, ಅವತಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಕೆಜಿಎಫ್ ನಿರ್ದೇಶಕರಾದ ಕೆ ಎಂ ಕಾಂತೇಗೌಡ್ರು, ರತ್ನಾಕರ್ ಖಾಂಡ್ಯ, ಹೋರಾಟ ಸಂಚಾಲಕರುಗಳಾದ ಕೆ.ಕೆ.ರಘು, ವಾಸು ಪೂಜಾರಿ, ಪೂರ್ಣೆಶ್ ಮೈಲಿಮನೆ, ಕೆಜಿಫ್ ಕಚೇರಿ ಕಾರ್ಯ ದರ್ಶಿ ಕುಮಾರ್, ಬೆಳೆಗಾರರ ಸಂಘಟನೆ ಮತ್ತು ರೈತ ಸಂಘಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದು, ಸಮಾವೇಶಕ್ಕೆ ಬೆಂಬಲ ಸೂಚಿಸಿದರು.