लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತೋಪಿನಲ್ಲಿ ಮರಗಳ ಕಳವು -ಅರಣ್ಯ ಇಲಾಖೆ ಸಿಬ್ಬಂದಿ ಕೈವಾಡ ಶಂಕೆ….

1 min read

ಗುಡ್ಡಹಟ್ಟಿ ಅರಣ್ಯ ನೆಡು ತೋಪಿನಲ್ಲಿ ಮರಗಳ ಕಳವು -ಅರಣ್ಯ ಇಲಾಖೆ ಸಿಬ್ಬಂದಿ ಕೈವಾಡ ಶಂಕೆ
ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ,ಮೂಡಿಗೆರೆ ವಲಯದ ,ಬಣಕಲ್ ಸರ್ವೇ ನಂಬರ್ 254ರ ಗುಡ್ಡಹಟ್ಟಿ ಇಲಾಖಾ ಅರಣ್ಯ ನೆಡುತೋಪು ನಲ್ಲಿ ಕಾಡು ಮರಗಳ ಕಳವು ಪ್ರಕರಣ ವರದಿಯಾಗಿದೆ.
ಇಲ್ಲಿನ ಹಲವಾರು ಅಕೇಶಿಯಾ ಮರಗಳಗಳನ್ನು ಕಡಿದು ಕದ್ದು ಸಾಗಿಸಲಾಗಿದೆ.ಮರಗಳನ್ನು ಕದ್ದು ಸಬಣಕಲ್ ಟೌನ್ ನಲ್ಲಿನ ಸಾಮಿಲ್ ಗೆ ಸಾಗಿಸುವಲ್ಲಿ ಇಬ್ಬರು ಸಿಬ್ಬಂದಿ ಶಾಮಿಲಾ ಗಿದ್ದಾರೆ
ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಾವ್ಯ‌ ಬಣಕಲ್ ಸಾಮೀಲ್ ಗೆ ತೆರಳಿ ಪರಿಶೀಲಿಸಿ ಕಾಡು ಮರಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಮಾಡುತ್ತಿದ್ದಾರೆ.
ಮರವನ್ನು ಸೀಜ್ ಮಾಡಿ ಹಳೆಕೊಟೆ ಮರದ ಗೊದಾಮಿಗೆ ಸಾಗಿಸಲಾಗಿದೆ.
FIR.ಕೂಡ ಅಗಿದೆ ಮುಂದಿನ ತನಿಖೆಯಲ್ಲಿ ಸತ್ಯ ಹೊರ ಬಿಳಲಿದೆ ಎಂದು RFO.ತಿಳಿಸಿದ್ದಾರೆ.
ಸಾಮಿಲ್ ಮಾಲೀಕ ಮೂರ್ತಿ ಹೇಳುವ ಪ್ರಕಾರ ಇಲಾಖೆ ಸಿಬ್ಬಂದಿಗಳೇ ಇದನ್ನು ತಂದು ಕೊಟ್ಟು ಕಟಾವು ಮಾಡಿಕೊಡಲು ಹೇಳಿದ್ದಾರೆ ಎನ್ನಲಾಗಿದೆ.
ಕ್ರಮ ಕೈಗೊಳ್ಳಬೇಕು,:ಪ್ರಕರಣ ಮುಚ್ಚಿಹಾಕುವ ಹುನ್ನಾರ ?
ರೈತರು ಗೂಟಕ್ಕೆ ಮರ ಕಡಿದರೆ ಪ್ರಕರಣ ದಾಖಲು ಮಾಡುವ ಇಲಾಖೆ ,ಇಲ್ಲಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎನ್ನುವ ಆರೋಪವು ಕೇಳಿ ಬಂದಿದೆ.
ತಪ್ಪಿತಸ್ಥ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

About Author

Leave a Reply

Your email address will not be published. Required fields are marked *