लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಕಾರ್ಯಕ್ರಮ.

1 min read

ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಕಾರ್ಯಕ್ರಮ.
ಮೂಡಿಗೆರೆಯ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಸಭಾಂಗಣದಲ್ಲಿ ನಡೆಯಿತು.
ಈ ಒಂದು ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹೊಸಕೆರೆ ರಮೇಶ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೆರವೇರಿಸಿ ಮಾತನಾಡಿದ ವಾಸುದೇವ್ – ಸಮಾಜದಲ್ಲಿನ ಅನಿಷ್ಟವನ್ನು ಹೋಗಲಾಡಿಸುವ ಯಾವುದಾದರೂ ಸಾಧನ ಇದ್ದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ
ಜಾತಿಯನ್ನು ಸಂಪೂರ್ಣ ಕಿತ್ತು ಹಾಕುವ ಯೋಚನೆ ಹೊಂದಿದ್ದ ಒಬ್ಬ ಧೀಮಂತ ನಾಯಕ ಬಾಬು ಜಗಜೀವನ್ ರಾಮ್ ಎಂದರು ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಬೇಕಿದೆ ಎಂದರು.
ಬಾಬು ಜಗಜೀವನ್ ರಾಮ್ ರವರ ಅವತ್ತಿನ ಯೋಚನೆಗಳೇ ಇವತ್ತಿಗೂ ಸರ್ಕಾರ ನಾವುಗಳು ಸುಭಿಕ್ಷವಾಗಿದ್ದೇವೆ ಎಂದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೂಡಿಗೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗು ತಹಸೀಲ್ದಾರ್ ಆದ ಶ್ರೀ ರಾಜಶೇಖರ್ ಮೂರ್ತಿ ರವರು ಮಾತನಾಡಿ.. ಸಮಾಜದಲ್ಲಿ ಜಾತಿಯ ಪಿಡುಗು ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಈ ವಿಷಯನ್ನು ಇಂದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಿ ಬದುಕಬೇಕಾಗಿದೆ ಎಂದರು,ಭಾರತೀಯರಾಗಿ ಬದುಕುವುದನ್ನ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಬೋಧಿಸಿ, ಸಂವಿಧಾನ ಸಂಸ್ಕೃತಿಯನ್ನು ಒಪ್ಪಿಕೊಳ್ಳುವವನಿಂದ ಮಾತ್ರ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ದಮಯಂತಿ, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಬಿಎಸ್ಪಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಬೆಟ್ಟಗೆರೆ ಶಂಕರ್, ಪಿಕೆ ಮಂಜುನಾಥ್, ಕುನ್ನಳ್ಳಿ ರವಿ, ಬೆಟ್ಟಗೆರೆ ಮಂಜುನಾಥ್, ಅಣ್ಣೇಗೌಡ, ಸೀತಮ್ಮ, ಪ್ರಶಾಂತ್, ಕಮಲಾಕ್ಷಿ, ಸರೋಜಾ, ಲಕ್ಷ್ಮಣ್ ಗೌಡ,ಶಾಂತಕುಮಾರ್, ಬೆಟ್ಟಗೆರೆ ಲೋಕೇಶ್,ರಾಘವೇಂದ್ರ, ಶಿವಪ್ರಸಾದ್, ರುದ್ರಯ್ಯ, ಜಗದೀಶ್ , ಮುಂತಾದವರು ಭಾಗವಹಿಸಿದ್ದರು.
ಸ್ವಾಗತವನ್ನು ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್,ಕಾರ್ಯಕ್ರಮದ ನಿರೂಪಣೆಯನ್ನು ಮೂರ್ತಿ ನಡೆಸಿಕೊಟ್ಟರು.

About Author

Leave a Reply

Your email address will not be published. Required fields are marked *