लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಾಗತ ಸಮಾರಂಭ..

*ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ., ಮೂಡಿಗೆರೆ ಅವರಿಗೆ ಸ್ವಾಗತ ಸಮಾರಂಭ*
*ಶ್ರೀಮತಿ. ಸುರಕ್ಷಾ.ಕೆ.ಕೆ.* ಅವರು ಇಂದು ಅಧಿಕೃತವಾಗಿ *ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ, ಮೂಡಿಗೆರೆ* ಎಂಬ ಹುದ್ದೆಯ ಜವಾಬ್ದಾರಿಯನ್ನು ಸ್ವೀಕರಿಸಿದರು. ಈ ಮಹತ್ವದ ಸಂದರ್ಭದಲ್ಲಿ, ವಕೀಲರ ಸಂಘದ ವತಿಯಿಂದ ಇಂದು ಬೆಳಿಗ್ಗೆ ವಕೀಲರ ಸಂಘದ ಸಭಾಂಗಣದಲ್ಲಿ ಭವ್ಯವಾದ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು *ಶ್ರೀ ಜಯಪ್ರಕಾಶ್.ವಿ*, ಗೌರವಾರ್ಥ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ, ಮೂಡಿಗೆರೆ ಅವರಿಂದ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು.
*ಶ್ರೀ.ವಿಶ್ವನಾಥ್.ಎ,* ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ, ಮೂಡಿಗೆರೆ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸದಾಗಿ ಹುದ್ದೆ ವಹಿಸಿಕೊಂಡಿರುವ ನ್ಯಾಯಾಧೀಶೆ ಶ್ರೀಮತಿ ಸುರಕ್ಷಾ.ಕೆ.ಕೆ. ಅವರನ್ನು ವಕೀಲರ ಸಂಘದ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ, ಅವರ ನ್ಯಾಯಾಂಗ ಸೇವೆಯ ನೂತನ ಪಯಣಕ್ಕೆ ಗೌರವ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಗೌರವಾನ್ವಿತ ನ್ಯಾಯಾಧೀಶರು *ಶ್ರೀ.ಜಯಪ್ರಕಾಶ್.ವಿ ಹಾಗೂ ಶ್ರೀ.ವಿಶ್ವನಾಥ್.ಎ* ಅವರು ಮಾತನಾಡಿ, ಜನತೆಗೆ ನ್ಯಾಯ ದೊರೆಯುವಲ್ಲಿ ನ್ಯಾಯಾಧೀಶರ ಜವಾಬ್ದಾರಿ ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುರಿತಂತೆ ಆಳವಾದ ಆಲೋಚನೆಗಳನ್ನು ಹಂಚಿಕೊಡರು.
ಹಿರಿಯ ವಕೀಲರಾದ *ಶ್ರೀ ಕೆ.ಎಂ. ಪ್ರಶಾಂತ್, ಶ್ರೀ ಬಿ. ಜಗದೀಶ್, ಮತ್ತು ಶ್ರೀ ಎಂ.ವಿ.ಜಯರಾಜ್* ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ನೂತನ ನ್ಯಾಯಾಧೀಶೆಗೆ ಶುಭ ಹಾರೈಸಿದರು.
ನಂತರ *ಶ್ರೀಮತಿ ಸುರಕ್ಷಾ ಕೆ.ಕೆ.* ಅವರು ವಕೀಲರನ್ನು ಉದ್ದೇಶಿಸಿ ಮಾತನಾಡಿ, ನ್ಯಾಯಾಲಯದಲ್ಲಿ ತ್ವರಿತ ಹಾಗೂ ಜನಮನ್ನಿತ ನ್ಯಾಯ ನೀಡುವಲ್ಲಿ ವಕೀಲರ ಸಹಕಾರದ ಮಹತ್ವವನ್ನು ಸಾರಿದರು.
ಮೂಡಿಗೆರೆಯ ವಕೀಲರ ಸಂಘದ ಅಧ್ಯಕ್ಷರಾದ *ಶ್ರೀ ಬಿ.ಟಿ. ನಟರಾಜ್* ಅವರು ಅಧ್ಯಕ್ಷತೆಯನ್ನು ವಹಿಸಿ, ನ್ಯಾಯಾಲಯ ಮತ್ತು ವಕೀಲರ ನಡುವಿನ ಪರಸ್ಪರ ಗೌರವ, ಸಹಕಾರ ಮತ್ತು ವಿಶ್ವಾಸದ ಸಂಬಂಧ ಸದಾ ಮುಂದುವರಿಯಲಿ ಎಂದು ಆಶಿಸಿದರು.
ಸಹಾಯಕ ಸರ್ಕಾರಿ ಅಭಿಯೊಜಕರಾದ ಶ್ರೀಮತಿ ರೂಪ ಮತ್ತು ಶ್ರೀಮತಿ ರೇಣುಕ ರವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಕೀಲರಾದ *ಶ್ರೀಮತಿ.ಕೆ.ವಿಶಾಲ* ಪ್ರಾರ್ಥಿಸಿದರು, ವಕೀಲರಾದ *ಎನ್.ಜೆ.ಉದಯ್* ಅವರು ಸ್ವಾಗತಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ *ಶ್ರೀ.ಕೆ.ಸಿ.ಚಂದ್ರಶೇಖರ್* ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ಸದಸ್ಯರು, *ಶ್ರೀಮತಿ ಸುರಕ್ಷಾ ಕೆ.ಕೆ.* ಅವರ ನ್ಯಾಯಾಂಗ ಸೇವೆಗೆ ಹಾರ್ದಿಕ ಶುಭಾಶಯಗಳನ್ನು ಅರ್ಪಿಸಿದರು.

About Author

Leave a Reply

Your email address will not be published. Required fields are marked *