लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಚಿಕ್ಕಮಗಳೂರು ಜಿಲ್ಲಾ ಲೇಖಕಿಯರ ಸಂಘಕ್ಕೆ ಅಜ್ಜಂಪುರ ಎಸ್. ಶೃತಿ ಅಧ್ಯಕ್ಷೆ*

1 min read

*ಚಿಕ್ಕಮಗಳೂರು ಜಿಲ್ಲಾ ಲೇಖಕಿಯರ ಸಂಘಕ್ಕೆ ಅಜ್ಜಂಪುರ ಎಸ್. ಶೃತಿ ಅಧ್ಯಕ್ಷೆ*

ಚಿಕ್ಕಮಗಳೂರು: ಉಪನ್ಯಾಸಕಿ, ನಿರೂಪಕಿ, ಲೇಖಕಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಾಲ್ಯದ ದಿನಗಳಿಂದಲೇ ತನ್ನದೇ ಆದ ಒಂದು ಚಾಪನ್ನು ಮೂಡಿಸಿಕೊಂಡು ಬರುತ್ತಿರುವ ಬಹುಮುಖ ಪ್ರತಿಭೆಯಾದ ಅಜ್ಜಂಪುರ ಎಸ್ ಶೃತಿ ಅವರನ್ನು ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

ಜಿಲ್ಲೆಯ ಮಹಿಳಾ ಬರಹಗಾರ್ತಿಯರನ್ನು, ಕವಿಯತ್ರಿಯರನ್ನು,ಲೇಖಕಿಯರನ್ನು ಒಟ್ಟು ಗೂಡಿಸಿಕೊಂಡು ಕಾವ್ಯ ಕಮ್ಮಟ, ಕಥಾ ಕಮ್ಮಟಗಳನ್ನು ಆಯೋಜಿಸುವ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಜಿಲ್ಲೆಯಲ್ಲಿ ಹೊರಹೊಮ್ಮುವಂತೆ ,ಕವನಗಳ ರಚನೆ, ಸಣ್ಣ ಕತೆಗಳು, ಹಾಗೂ ಲೇಖನಗಳ ಬರವಣಿಗೆಗೆ ಉತ್ತೇಜನ ನೀಡಿ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕರ್ನಾಟಕ ಲೇಖಕಿಯರ ಸಂಘದ ಶಾಖೆಗಳನ್ನು ತೆರೆದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ, ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮುಳಗಿ ಹೋಗಿರುವ ಯುವ ಸಮೂಹವನ್ನು ಸಾಹಿತ್ಯ ಲೋಕಕ್ಕೆ ಕರೆತರುವ ಗುರುತರ ಜವಾಬ್ದಾರಿ ಲೇಖಕಿಯರ ಸಂಘದ ಮೇಲಿದ್ದು, ಈ ಜವಾಬ್ದಾರಿಯನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಮನೆತನದ ಹಿನ್ನೆಲೆ ಇರುವ ಅಜ್ಜಂಪುರ ಎಸ್, ಶೃತಿ ಅವರು ಸಮರ್ಪಕವಾಗಿ ನಿಭಾಯಿಸುತ್ತಾರೆ ಎಂಬ ಆಶಯದೊಂದಿಗೆ ಅಧ್ಯಕ್ಷೀಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದಿದ್ದಾರೆ.

ತಳಮಟ್ಟದಲ್ಲಿ ಸಂಘಟನೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಮೂಲಕ,ಅವಕಾಶ ಒದಗಿದರೆ ರಾಜ್ಯ ಮಟ್ಟದ ಕರ್ನಾಟಕ ಲೇಖಕಿಯರ ಸಂಘದಿಂದ ಸಮ್ಮೇಳನ ಆಯೋಜನೆ ಮಾಡಲಾಗುವ ಅಭಿಲಾಷೆಯನ್ನು ಹೊಂದಿದ್ದೇನೆ ಎಂದು ನೂತನ ಅಧ್ಯಕ್ಷೆ ಅಜ್ಜಂಪುರ ಎಸ್. ಶೃತಿ ತಿಳಿಸಿದ್ದಾರೆ.

ಎಲ್ಲರ ಬದುಕಿನೊಳಗೊಂದು ಬರಹ ಇದ್ದೇ ಇರುತ್ತದೆ. ಬರೆಯಬೇಕೆಂಬ ಆಸೆ ಇದ್ದರೂ ಕೊಡ ಅದೇಕೋ ಬೇರೆ ಬೇರೆ ಕಾರಣಗಳಿಂದ ಕೈಗೂಡಿರುವುದಿಲ್ಲ, ಇಂತಹ ಎಲೆಮರೆಯ ಪ್ರತಿಭೆಗಳಿಗೆ ಕರ್ನಾಟಕ ಲೇಖಕಿಯರ ಸಂಘ ಕೀಲೆಣ್ಣೆಯಂತಾಗಿ, ಜಿಲ್ಲೆಯಲ್ಲಿ ಹೊಸ ಹೊಸ ಲೇಖಕಿಯರು ಹೊರಹೊಮ್ಮಲಿ ಎಂಬುದು ಅವಿನ್ ಟಿವಿ ಆಶಯವಾಗಿದೆ.
••••••••••••✒️
ವರದಿ.
ಮಂಜುನಾಥಸ್ವಾಮಿ.
ದಿಣ್ಣೆಕೆರೆ..

About Author

Leave a Reply

Your email address will not be published. Required fields are marked *