लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
18/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಷಯ: ನಿವೇಶನಕ್ಕೆ ಮೀಸಲಿಟ್ಟ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ನಿವೇಶನಕ್ಕೆ ಕಾಯ್ದಿರಿಸುವ ಬಗ್ಗೆ.

1 min read

| ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿ.ಯು.ಸಿ.ಐ)
ಮತ್ತುವಸತಿಗಾಗಿ ಹೋರಾಟ ವೇದಿಕೆ

ಪಂಚಾಯತ್ ರಾಜ್ಯ ಸಚಿವರು
ಕರ್ನಾಟಕ ಸರ್ಕಾರ ಕರ್ನಾಟಕ.
ಮಾನ್ಯರೇ,

ವಿಷಯ: ನಿವೇಶನಕ್ಕೆ ಮೀಸಲಿಟ್ಟ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ನಿವೇಶನಕ್ಕೆ ಕಾಯ್ದಿರಿಸುವ ಬಗ್ಗೆ.

ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮರಗೋಡು. ಕಬೈಲು, ಜಿ.ಹೊಸಳ್ಳಿ, ತಮಟೆಹಳ್ಳಿ, ಹನುಮನಹಳ್ಳಿ, ಜಿ.ಅಗ್ರಹಾರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನಿವೇಶನಗಳಿಲ್ಲದೆ ಬಾಡಿಗೆ ಮನೆಯಲ್ಲಿ ಮತ್ತು ಕೂಲಿ ಲೈನ್ ನಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿದ್ದು, ಮುಖ್ಯವಾಗಿ ಪ.ಜಾತಿ ಮತ್ತು ಪ.ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲರೂ ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಇದುವರೆವಿಗೂ ಯಾವುದೇ ನಿವೇಶನ ಮಂಜೂರಾಗಿರುವುದಿಲ್ಲ.
ಆದರೆ ಕಳೆದ ಹತ್ತು ವರ್ಷಗಳಿಂದ ನಿವೇಶನಕ್ಕಾಗಿ ಹಲವು ಹೋರಾಟ ರೂಪಿಸಿ ಮನವಿ ಪತ್ರ ಸಲ್ಲಿಸಲಾಗಿದೆ ಹಾಗೂ ನಿವೇಶನ ರಹಿತರ ಪಟ್ಟಿಯನ್ನು ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ನೀಡಲಾಗಿತ್ತು.
ಹಾಗೂ ಮೇಲ್ಕಂಡ ನಮ್ಮ ಸಂಘಟನೆ ವತಿಯಿಂದ ಗೋಣಿಬೀಡು ಪಂಚಾಯಿತಿಯ ಸರ್ವೆ ನಂಬರ್ 144 ರಲ್ಲಿ 4 ಎಕರೆ ಜಾಗ ಗುರುತಿಸಿದ್ದು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಮಾಡಿಸಿ ನಿವೇಶನಕ್ಕಾಗಿ ಕಾಯ್ದಿರಿಸುವಂತೆ ಮಾಡಲಾಗಿತ್ತು ಹಾಗೂ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನಾ ಹೋರಾಟ ರೂಪಿಸಿ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ನಿವೇಶನಕ್ಕೆ ಮೇಲ್ಕಂಡ ಭೂಮಿಯನ್ನು ಕಾಯ್ದಿರಿಸುವಂತೆ ನಿರ್ಣಯ ಕೈಗೊಂಡ ದಾಖಲಾತಿಗಳನ್ನು ಮೂಡಿಗೆರೆ ತಹಸೀಲ್ದಾರ್ ಕಛೇರಿಗೆ ಸಲ್ಲಿಸಲಾಗಿತ್ತು. ತದನಂತರ ಸ್ಥಳೀಯ ವಾಸಿಗಳು 1 ಎಕರೆ ಜಾಗವನ್ನು ಒತ್ತುವರಿ ಮಾಡಿ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ ಎಂಬ ಕಾರಣದಿಂದ ನಿವೇಶನ ಮಂಜೂರಾತಿಗೆ ತಡೆ ಉಂಟಾಗಿತ್ತು.
ಆದರೆ ಇತ್ತೀಚೆಗೆ ಉಳಿದ 3 ಎಕರೆ ನಿವೇಶನದ ಜಾಗವನ್ನು ಕೂಡ ಕಬಳಿಸುವ ಉದ್ದೇಶದಿಂದ ನಿವೇಶನಕ್ಕೆ ಮೀಸಲಿಟ್ಟ ಜಾಗಕ್ಕೆ ತೆರಳದಂತೆ ಅಡ್ಡಿಪಡಿಸುತ್ತಿದ್ದಾರೆ. ಹಾಗೂ ಹೀಗಾಗಿ ಕೂಡಲೇ ತನಿಖೆ ಮಾಡಿ ಅಕ್ರಮ ಒತ್ತುವರಿದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ವೆ ಕಾರ್ಯ ನಡೆಸಿ ದಾಖಲಾತಿಗಳೊಂದಿಗೆ ಗೋಣಿಬೀಡು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಗೆ ಖಾತೆ ಮಾಡಿ ಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲು ಕಲ್ಪಿಸಿಕೊಡಲು ಕೋರುತ್ತೇವೆ.

ಅದೇ ರೀತಿ ಕಮ್ಮರಗೋಡು ಸರ್ವೆ ನಂಬರ್ 127 ರಲ್ಲಿ 3 ಎಕರೆ ಭೂಮಿಯನ್ನು ಅಕ್ರಮ ಖಾತೆ ಮಾಡಿಕೊಂಡಿದ್ದನ್ನು ಪತ್ತೆ ಮಾಡಿ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿ ಅಕ್ರಮ ಖಾತೆಯನು ವಜ ಮಾಡಿಸಲಾಗಿದ್ದು ಸದರಿ ಭೂಮಿಯನ್ನು ಈಗಾಗಲೇ ಸರ್ವೆ ಮಾಡಿ ನಕಾಷೆ ಮಾಡಲಾಗಿದ್ದು ಈ ಭೂಮಿಯನು ಕೂಡ ನಿವೇಶನಕ್ಕೆ ಕಾಯ್ದಿರಿಸಲು ಮನವಿ ಪತ್ರವನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹಾಗೂ ಸರ್ವೆ ನಂಬರ್ 126 ರಲ್ಲಿ 20 ಗುಂಟೆ ಜಮೀನು ಕೂಡ ಉಪವಿಭಾಗಾಧಿಕಾರಿಗಳಿಂದ ವಜಾ ಮಾಡಿಸಲಾಗಿದೆ. ಹೀಗಾಗಿ ಮೇಲ್ಕಂಡ ಸರ್ವೆ ನಂಬರ್ ಗಳಿಗೆ ಸೇರಿದ ಎಲ್ಲಾ ಭೂಮಿಯನ್ನು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಿ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿ ಅರ್ಹ ನಿವೇಶನ ರಹಿತರಿಗೆ ಸರ್ಕಾರದ ನಿರ್ದೇಶನದಂತೆ ನಿವೇಶನ ಮಂಜೂರು ಮಾಡಿ ಕೊಡಬೇಕೆಂದು ಒತ್ತಾಯಿಸಿ ದಿನಾಂಕ:28-03-2025 ರಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನಾ ಹೋರಾಟ ನಡೆಸಿ ಈ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ. ವಿಳಂಬ ಮಾಡಿದಲ್ಲಿ ನಿವೇಶನ ರಹಿತರೇ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ವಾಸಿಸಲು ಮುಂದಾಗುತ್ತೇವೆ ಎಂದು ಈ ಮೂಲಕಎಚ್ಚರಿಸುತ್ತಿದ್ದೇವೆ.

ಹಕ್ಕೊತ್ತಾಯಗಳು:

1. ಸರ್ವೆ ನಂಬರ್ 144 ರಲ್ಲಿ ನಿವೇಶನಕ್ಕೆ ಮೀಸಲಿಟ್ಟ ಭೂಮಿಯನ್ನು ಅಕ್ರಮ ಒತ್ತುವರಿದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.

2. ಸರ್ವೆ ನಂಬರ್ 144 ರಲ್ಲಿ ನಿವೇಶನಕ್ಕೆ ಮೀಸಲಿಟ್ಟ ಸೂಕ್ತ ದಾಖಲೆ ಹಾಗೂ ಸರ್ವೆ ಕಾರ್ಯ ನಡೆಸಿ ಭೂಮಿಯನ್ನು ನಿವೇಶನಕ್ಕೆ ಕಾಯ್ದಿರಿಸಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಆದೇಶ ಹೊರಡಿಸುವುದು.

3. ಸರ್ವೆ ನಂಬರ್ 126-127 ಕಮ್ಮರಗೋಡು ಗ್ರಾಮದಲ್ಲಿ ಈಗಾಗಲೇ ಅಕ್ರಮ ಖಾತೆಯನು ರದ್ದುಗೊಳಿಸಿರುವ ಮತ್ತು ನಕಾಷೆ ತಯಾರಿರಿಸುವ ಭೂಮಿಯನ್ನು ಕೂಡಲೇ ನಿವೇಶನಕ್ಕೆ ಕಾಯ್ದಿರಿಸಿ ಸೂಕ್ತ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸುವುದು.

4. ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಲು ಸೂಕ್ತ ನಿರ್ದೇಶನ ನೀಡುವುದು ಮತ್ತು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು.

5. ನಿವೇಶನಕ್ಕೆ ಮಂಜೂರಾತಿ ಮಾಡಲು ಅಡ್ಡಿಪಡಿಸುವವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು.

ನೂರಾರು ನೊಂದ ಕಾರ್ಮಿಕರು ಭಾಗವಹಿಸಿದ್ದರು…
ರುದ್ರಯ್ಯ.ಬಿ.
ಗೌರವಾಧ್ಯಕ್ಷರು
ವಸತಿಗಾಗಿ ಹೋರಾಟ ವೇದಿಕೆ

 

About Author

Leave a Reply

Your email address will not be published. Required fields are marked *