138.ನೇ ಅಂಬೇಡ್ಕರ್ ಜಯಂತಿಯ ಪೂರ್ವ ಬಾವಿ ಸಭೆ….
1 min read
138.ನೇ ಅಂಬೇಡ್ಕರ್ ಜಯಂತಿಯ ಪೂರ್ವ ಬಾವಿ ಸಭೆ….
ಮೂಡಿಗೆರೆ ತಾಲೂಕು ಪಂಚಾಯಿತಿ ಕಛೇರಿಯಲ್ಲಿ
138.ನೇ ಅಂಬೇಡ್ಕರ್ ಜಯಂತಿಯ ಪೂರ್ವ ಬಾವಿ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಶಾಸಕಿ ನಯನಮೋಟಮ್ಮ ವಹಿಸಿದ್ದರು.
ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆಸಲು ಸಭೆ ಓಪ್ಪಿಗೆ ನೀಡಿತು..
ಈ ಬಾರಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿಯನ್ನು ಓಟ್ಟಿಗೆ ನಡೆಸುವುದೆಂದು ತೀರ್ಮಾನಿಸಲಾಯಿತು…
ಈ ಹಿಂದೆ ಚುನಾವಣಾ ನೀತಿ ಸಂಹಿತೆ ಮತ್ತು ಕರೋನ ಬಂದಿರುವುದರಿಂದ ಸರಳವಾಗಿ ಅಚರಿಸುತಿದ್ದರು.
ಈ ಬಾರಿ ಬಹಳ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು…
ಮೆರವಣಿಗೆಯಲ್ಲಿ ಕಲಾತಂಡಗಳನ್ನು ಬಳಸಿಕೊಂಡು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು..
ವಿದ್ಯಾರ್ಥಿಗಳು. ಸಾರ್ವಜನಿಕರು ಸಂಘಸಂಸ್ಥೆಗಳ ಸದಸ್ಯರು ಬಾಗವಹಿಸಲು ಕೋರಲಾಯಿತು.
ಸಭೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ರಾಜಶೇಖರ ಮೂರ್ತಿ.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ್. ಪ.ಪಂ.ಉಪಾಧ್ಯಕ್ಷ ರಾದ ಹೊಸಕೆರೆರಮೇಶ್…..ತಾ.ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರುಬಾಲಕೃಷ್ಣ..ಕಸಾಪ ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ…..ಸಂಘ ಸಂಸ್ಥೆಗಳ ಪದಾದಿಕಾರಿಗಳು.ಇಲಾಖೆಯ ಮುಖ್ಯಸ್ಥರುಗಳು.ಭಾಗವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರವರು ಕಾರ್ಯಕ್ರಮವನ್ನು ನೀರೂಪಿಸಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.