ಅನಿರ್ದಿಷ್ಟಾವಾದಿ ಧರಣಿ….
1 min read
ಅನಿರ್ದಿಷ್ಟಾವಾದಿ ಧರಣಿ….
ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2017 ರಿಂದ ಆರಂಭವಾದ ನಿವೇಶನ ರಹಿತರ ಹೋರಾಟದ ಪಲವಾಗಿ 4ಎಕರೆ 30 ಗುಂಟೆ ಜಿಲ್ಲಾಧಿಕಾರಿ ಸತ್ಯವತಿಯವರು ಮಂಜೂರು ಮಾಡಿದ್ದರೂ ಹಳೇಮೂ ಡಿಗೆರೆ ಗ್ರಾಮ ಪಂಚಾಯಿತಿ ಯವರಿಗೆ ಇಲ್ಲಿಯವರೆಗೂ ಗ್ರಾಮ ಸಭೆ ಕರೆದು ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಮಾಡಲು ಹಾಗೂ ರಸ್ತೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡುವ ಸಲುವಾಗಿ ಕೈ ಗೊಳ್ಳಬೇಕಾದ ಕ್ರಮಗಳಲ್ಲಿ ಅಧಿಕಾರಿಗಳು ವಿಫಲರಾಗಿದ್ದರೆ ಎಂದು ರುದ್ರಯ್ಯ ನವರು ದೂರಿದ್ದಾರೆ.
ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಗಳಲ್ಲಿ ನಿವೇಶನ ಗಳ ಬೇಡಿಕೆಯಿದ್ದು ಕೆಲವು ಸೋಮಾರಿ, ಭ್ರಷ್ಟ ಅಧಿಕಾರಿಗಳು ಜಾಗ ಗುರುತು ಮಾಡಿ ಕೊಡುವುದಕ್ಕೆ ಆಗುತ್ತಿಲ್ಲ. ಹಾಗಿರುವಾಗ ನಮ್ಮ ಹೋರಾಟದ ಪಲವಾಗಿ ಗುರುತಿಸಲ್ಪಟ್ಟ ಜಾಗ ದಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ನಿವೇಶನ ಹಂಚಲು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಸೀಲ್ದಾರ್ ರವರ ಗಮನಕ್ಕೆ ತಂದರೂ ಏನೇನು ಪ್ರಯೋಜನ ವಾಗಿಲ್ಲ.. ಈ ವಿಚಾರವಾಗಿ ಮಾನ್ಯ ಶಾಸಕರು ಪ್ರಸ್ತುತ ಜಾಗದಲ್ಲಿದ್ದ ಮರ ಗಳನ್ನು ತೆರವುಗೊಳಿಸಿ ಅನುಕೂಲ ಮಾಡಿದ್ದು ಬಿಟ್ಟರೆ ಈ ವರೆಗೆ ಬೇರೆ ಯಾವುದೇ ಕ್ರಮ ಕೈ ಗೊಂಡಿಲ್ಲ,
ಕೂಡಲೇ ಮಾನ್ಯ ಶಾಸಕರು ಉಳ್ಳವರ ಒತ್ತುವರಿ ಕಾಫಿ ತೋಟದ ಲೀಸ್ ಪ್ರಕ್ರಿಯೆಗಾಗಿ ವಿಧಾನ ಸೌಧ ದಲ್ಲಿ ಹೋರಾಡುವಂತೆಯೇ ಬಡವರ ನಿವೇಶನ ಕ್ಕಾಗಿ ಹೋರಾಡುವಂತೆ ಕೋರುತ್ತೇನೆ…ಪಂಚಾಯಿತಿ ಯಿಂದ ಪಾರ್ಲಿಮೆಂಟ್ ವರೆಗೆ ಆಳ್ವಿಕೆ ಮಾಡಿರುವ ಮೂಡಿಗೆರೆಯಲ್ಲಿ ಸರ್ಕಾರ ವೇ ಮಂಜೂರು ಮಾಡಿರುವ ಅಶ್ರಯ ನಿವೇಶನ ಜಾಗದಲ್ಲಿ ಒಂದು ಮೂಲಭೂತ ಸೌಕರ್ಯ ಗಳನ್ನು ಕೊಡುವಲ್ಲಿ ಅಧಿಕಾರಿಗಳ ನಿರ್ಲಕ್ಷತನ ವವನ್ನು ವಿರೋಧಿಸಿ ಇದೆ ಬರುವ ಗುರುವಾರ 13.3.2025 ರಂದು ಬೆಳಗ್ಗೆ 10.30 ರಿಂದ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ಮುಂದೆ ‘ಅನಿರ್ದಿಷ್ಟಾವಾದಿ ಧರಣಿ ಕೂರುವುದಾಗಿ ವಸತಿಗಾಗಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರುದ್ರಯ್ಯ ನವರು ಹೇಳಿದರು. ಈ ಸಂಧರ್ಭ ದಲ್ಲಿ ರಾಮು, ಶಿವಪ್ಪ ಹಾಗೂ ಆಯಿಷಾ ಭಾನು ಇದ್ದರು.
ವರದಿ…
ಚಂದುಸಾಲಿಯಾನ್.