ಮೂರನೆ ಬಾರಿ ಅಧ್ಯಕ್ಷರಾಗಿ ಅಯ್ಕೆ….
1 min read
ಮೂರನೆ ಬಾರಿ ಅಧ್ಯಕ್ಷರಾಗಿ ಅಯ್ಕೆ….
ಮೂಡಿಗೆರೆ ಪಟ್ಟಣ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ವೆಂಕಟೇಶ. ಕೆ.ಆಯ್ಕೆಯಾಗಿದ್ದಾರೆ.ಸತತವಾಗಿ ಮೂರನೆ ಬಾರಿ ಅಯ್ಕೆಯಾಗಿ ಹ್ಯಾಟ್ರಿಕ್ ಸಾದಿಸಿದ್ದಾರೆ.ಸತತವಾಗಿ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಪಾರ ಅನುಭವ ಹೊಂದಿರುತ್ತಾರೆ.ಯುವಕರ ಮನಸಿನಲ್ಲಿ ಜನಾನುರಾಗಿಯಾಗಿರುವ ವೆಂಕಟೇಶ್ ಉದ್ಯಮಿಯು ಕೂಡ ಹೌದು.ತಂದೆಯ ಕಾಲದಿಂದಲೂ ರಾಜಕೀಯ ಅನುಭವ ಪಡೆದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೆ ನಾಯಕತ್ವದ ಗುಣ ಬೆಳೆಸಿಕೊಂಡಿದ್ದರು.
ತಂದೆಯ ಕಾಲದಲ್ಲಿ ಕೃಷಿಕರಾಗಿದ್ದರು.ನಂತರ ಕೃಷಿಗೆ ವಿದಾಯ ಹೇಳಿ ಉದ್ಯಮಿಯಾದರು.ಬೆಂಗಳೂರಿನಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾಗಿದ್ದರು.ಅದರೂ ಹುಟ್ಟೂರಿನ ವ್ಯಾಮೊಹಕ್ಕೆ ಬಲಿಯಾಗಿ ಮೂಡಿಗೆರೆಯಲ್ಲಿ ಬಂದು ನೆಲಸಿದರು.ಎಷ್ಟೆ ರಾಜಕೀಯ ಎಳು ಬೀಳು ಕಂಡರೂ ದೃತಿಗೆಡದೆ ಮುಂದುವರಿದರು.
ಎಲ್ಲಾ ರಾಜಕೀಯ ರಾಜ್ಯ ಮುಖಂಡರ ಉತ್ತಮ ಸಂಬಂಧ ಹೊಂದಿದ್ದಾರೆ.
ಮೂಡಿಗೆರೆ ಶಾಸಕಿಯ ದೃಡ ನಿರ್ದಾರ ಮತ್ತೆ ಮೂಡಿಗೆರೆ ಪಟ್ಟಣ ಪಂಚಾಯಿತಿಯು ಕಾಂಗ್ರೆಸ್ ಪಾಲಾಯಿತು.
ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ 7.ಓಟುಗಳಿದ್ದರೂ ಬಿಜೆಪಿಯ ಪ್ರಭಲ ಪಟ್ಟಣ ಪಂಚಾಯಿತಿಯ ಸದಸ್ಯರ ಗೈರು ಹಾಜರಿಯಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವಂತಾಯಿತು.
ಒಟ್ಟಾರೆಯಾಗಿ ಗೊಂದಲವಿಲ್ಲದೆ ಚುನಾವಣೆ ನಡೆದದ್ದು ಪಟ್ಟಣದ ಜನತೆ ನಿಟ್ಟುಸಿರು ಬಿಡುವಂತಾಯಿತು.