लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎನ್ ಎಸ್ ಡಿ ರಸಪ್ರಶ್ನೆ ಸ್ಪರ್ಧೆ. ರಾಜ್ಯ ಮಟ್ಟದಲ್ಲಿ ಎರಡು,ಜಿಲ್ಲಾ ಹಂತದಲ್ಲಿ ನಾಲ್ಕು ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನ*.

1 min read

*ಎನ್ ಎಸ್ ಡಿ ರಸಪ್ರಶ್ನೆ ಸ್ಪರ್ಧೆ. ರಾಜ್ಯ ಮಟ್ಟದಲ್ಲಿ ಎರಡು,ಜಿಲ್ಲಾ ಹಂತದಲ್ಲಿ ನಾಲ್ಕು ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನ*.

*ಚಿಕ್ಕಮಗಳೂರು19*: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕವು, ಸರ್.ಸಿ.ವಿ. ರಾಮನ್ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಆಚರಿಸುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯದಾದ್ಯಂತ ಏಕಕಾಲಕ್ಕೆ ಆನ್ಲೈನ್ ಮೂಲಕ ಜಿಲ್ಲಾ ಮತ್ತು ರಾಜ್ಯ ಮಟ್ಟದ ಎರಡು ಹಂತದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಂಡಿತು.ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದರೆ ನಾಲ್ಕು ವಿದ್ಯಾರ್ಥಿಗಳು ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಅಜ್ಜಂಪುರ ತಾಲ್ಲೂಕು ಸೊಲ್ಲಾಪುರ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಸ್.ಎಂ ಭವ್ಯ ಮೂರನೇ ಬಹುಮಾನ ಮತ್ತು ಚಿಕ್ಕಮಗಳೂರು ನಗರದ ಜ್ಞಾನರಶ್ಮಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರುತಿಕಾ ಬಿ.ಕೆ ಸಮಾಧಾನಕರ ಬಹುಮಾನವನ್ನು ಗಳಿಸಿದ್ದಾರೆ.

ಜಿಲ್ಲಾ ಮಟ್ಟದ ವಿಜೇತರಾಗಿ ಚಿಕ್ಕಮಗಳೂರು ತಾಲ್ಲೂಕು, ಆಲ್ದೂರು ಪೂರ್ಣಪ್ರಜ್ಞ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಪುಲಸ್ತ್ಯ ಶೆಟ್ಟಿ. ಪ್ರದ್ಯುಮ್ನ ಶೆಟ್ಟಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಇದೇ ಪೂರ್ಣ ಪ್ರಜ್ಞಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪರೀಕ್ಷಿತ್ ಮಹಾರಾಜ್ ಬಿ. ಎನ್ ಮತ್ತು ಮೂಡಿಗೆರೆ ತಾಲೂಕು ಅಂಗಡಿ ಸರ್ಕಾರಿ ಪ್ರೌಢಶಾಲೆಯ ಹರಿಪ್ರಿಯಾ ಎ. ಎಂ.ಈ ಇಬ್ಬರು ಮೂರನೇ ಬಹುಮಾನವನ್ನು ಸಮವಾಗಿ ಹಂಚಿಕೊಂಡಿದ್ದಾರೆ.

ರಾಜದಾದ್ಯಂತ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಜಿಲ್ಲೆಯಿಂದ ಐನೂರುಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ನಗದು ಹಣದೊಂದಿಗೆ, ಪ್ರಶಸ್ತಿ ಪತ್ರ,ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಗುವುದು. ಜೊತೆಗೆ ರಸಪ್ರಶ್ನೆ ಸ್ಪರ್ಧೆಗೆ ಸಹಕರಿಸಿದ ಜಿಲ್ಲಾ ತಾಲೂಕು ಮತ್ತು ಶಾಲಾ ಹಂತದ ಸಂಯೋಜಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.

ಈ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜನೆ ಮಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಖ್ಯಾತ ಮನೋವೈದ್ಯರಾದ ಡಾ.ಸಿ ಆರ್ ಚಂದ್ರಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಈ ಬಸವರಾಜ್ ಹಾಗೂ ಜಿಲ್ಲಾ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದ ತಮ್ಮನ್ನ ಮುನ್ನಾವರ್ ಮತ್ತು ಜಿಲ್ಲೆಯ ವಿವಿಧ ತಾಲೂಕು ಮತ್ತು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳನ್ನು ನೋಂದಾವಣೆ ಮಾಡಿಕೊಟ್ಟ ರಸಪ್ರಶ್ನೆ ಸ್ಪರ್ಧೆಯ ಸಂಯೋಜಕರಾದ ತರೀಕೆರೆ ತಾಲ್ಲೂಕು ಎಂಸಿ ಹಳ್ಳಿ ಪ್ರೌಢಶಾಲೆಯ ಕುಮಾರಸ್ವಾಮಿ.ಮೂಡಿಗೆರೆ ತಾಲೂಕು ಅಂಗಡಿ ಪ್ರೌಢಶಾಲೆಯ ಮಂಜಪ್ಪ ದೊಡ್ಮನಿ. ಬ್ರೆಥಿನಿ ಆಂಗ್ಲ ಪ್ರೌಢಶಾಲೆಯ ಕಮಲ. ಗೋಣಿಬೀಡು ಹೊಯ್ಸಳ ಪ್ರೌಢಶಾಲೆ ಮುಖ್ಯ ಶಿಕ್ಷಕಿ ವೇಣಿ. ಕಡೂರು ತಾಲೂಕು ಚೌಳಹಿರಿಯೂರಿನ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಅಶೋಕ ಬಿ.ಜೆ . ಕಲ್ಮರಡಪ್ಪ ಎಸ್ ಜಿ.. ಜಯವರ್ಧನ್ ಆರ್ ಧೋತ್ರೆ . ಚಿಕ್ಕಮಗಳೂರು ಎಂಇಎಸ್ ಪ್ರೌಢಶಾಲೆಯ ರೂಪ ನಾಯ್ಕ್, ನಿಷ್ಮಿತಾ ಜಾವಳಿ. ಆಲ್ದೂರು ಪೂರ್ಣಪ್ರಜ್ಞ ಪ್ರೌಢಶಾಲೆಯ ಪ್ರಶಾಂತ್ ಮತ್ತು ಆರಾಧ್ಯ. ಕುವೆಂಪು ವಿದ್ಯಾನಿಕೇತನದ ಅನೀಶ್.ಜ್ಞಾನರಶ್ಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪಾಲಾಕ್ಷಿ. ಸೆಂಟ್ ಜೋಸೆಫ್ ಪ್ರೌಢಶಾಲೆಯ ಶಿಕ್ಷಕಿ ವರ್ಷಾ ಮತ್ತು ಸಚ್ಚಿನ್. ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ದಿವ್ಯಶ್ರೀ. ರುಕ್ಸಾನ ಬಾನು . ಗುರುಮೂರ್ತಿ. ಅಜ್ಜಂಪುರ ತಾಲ್ಲೂಕು ಸೊಲ್ಲಾಪುರ ಪ್ರೌಢಶಾಲೆಯ ಹೇಮಂತ್. ಕೊಪ್ಪ ತಾಲೂಕಿನ ಮಂಜುಳಾ ಮತ್ತು ಮಹೇಶ್ ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಉತ್ತೇಜನ ನೀಡಿದ ಶಾಲಾ ಮುಖ್ಯಸ್ಥರಿಗೆ. ಸಹಕರಿಸಿದ ಪೋಷಕರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿಯು ಈ ವಿಜೇತ ವಿದ್ಯಾರ್ಥಿಗಳ ಆಯ್ಕೆಯನ್ನು ಪ್ರಕಟಿಸಿ ಈ ಮೂಲಕ ಎಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ.
•••••••••••••••••••••••••••••

About Author

Leave a Reply

Your email address will not be published. Required fields are marked *