ಅಧ್ಯಕ್ಷ ಗಾದಿಗೆ ಎಚ್.ಒ.ಕಾವ್ಯ ಪ್ರಭಲ ಆಕಾಂಕ್ಷಿ.*
1 min read
*ಅಧ್ಯಕ್ಷ ಗಾದಿಗೆ ಎಚ್.ಒ.ಕಾವ್ಯ ಪ್ರಭಲ ಆಕಾಂಕ್ಷಿ.*
ಸರಕಾರಿ ನೌಕರರ ಸಂಘದ ಮೂಡಿಗೆರೆ ಘಟಕದ ಅಧ್ಯಕ್ಷ ಗಾದಿಗಾಗಿ ಪ್ರಥಮವಾಗಿ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಉತ್ತಮ ಕೆಲಸಗಾರ್ತಿ ಎಂದು ಹೆಸರು ಪಡೆದಿರುವ ಮಹಿಳಾ ಆಭ್ಯರ್ಥಿ ಎಚ್.ಒ.ಕಾವ್ಯ ಅವರು ಪ್ರಬಲ ಪೈಪೋಟಿ ನಡೆಸಲು ಸಜ್ಜಾಗಿದ್ದಾರೆ.
ಸರಕಾರಿ ನೌಕರರ ಮೂಡಿಗೆರೆ ಸಂಘ ಹಿಂದೆ ಕೂಡು ಕುಟುಂಬದಂತಿತ್ತು. ಆದರೆ ಈ ಹಿಂದಿನ ಅಧ್ಯಕ್ಷರು ಈಗಿನ ಚುನಾವಣೆಗಾಗಿ ಅನೇಕ ಇಲಾಖೆಗಳನ್ನು ಒಟ್ಟಿಗೆ ಸೇರ್ಪಡೆಗೊಳಿಸಿ ಕೂಡು ಕುಟುಂಬವನ್ನು ಒಡೆದು ಛಿದ್ರ ಮಾಡಿದ್ದಾರೆ. ಈ ಸಂಘವನ್ನು ಸ್ವಚ್ಛಗೊಳಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಎಲ್ಲಾ ಇಲಾಖೆಗೆ ಪ್ರಾತಿನಿಧ್ಯ ಸಿಗುವಂತೆ ಮಾಡಬೇಕಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಇಲಾಖೆಗೂ ಒಂದು ನಿರ್ದೇಶಕ ಸ್ಥಾನ ದೊರಕುವಂತಾಗಬೇಕೆಂಬ ಮಹದಾಸೆ ಹೊಂದಿರುವ ಜತೆಗೆ NPS ಹೋರಾಟ ಸೇರಿದಂತೆ ಇದೂವರೆಗೂ ಇತ್ಯರ್ಥವಾಗದಿರುವ ಸರಕಾರಿ ನೌಕರರ ಅನೇಕ ಸಮಸ್ಯೆ ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸಲು ಸಜ್ಜಾಗಿ ನಿಂತಿದ್ದಾರೆ.