AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇದೇನು ಗೊತ್ತ

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನಲ್ಲಿರುವ, ಬೆಟ್ಟದಮನೆ ಯಲ್ಲಿನ ಕೇಂದ್ರ ಸರ್ಕಾರದ ಸಂಬಾರು ಮಂಡಳಿಯ ನರ್ಸರಿ ಯ ಕಚೇರಿ ಮತ್ತು ಸಿಬ್ಬಂದಿ ಗಳ ಮನೆ

ಈ ನರ್ಸರಿ,ಚಿಕ್ಕಮಗಳೂರು ಹಾಸನ ಮತ್ತು ದೂರದ ಜಿಲ್ಲೆಯ ಸಾವಿರಾರು ರೈತರಿಗೆ ಲಕ್ಷಾಂತರ ಕಾಳು ಮೆಣಸು ಬುಟ್ಟಿ ಗಿಡ ಹಾಗು ಲಕ್ಷಾಂತರ ಏಲಕ್ಕಿ ಬುಟ್ಟಿ ಗಿಡ ಮತ್ತು ಕಂದು ಗಳನ್ನು ಬೆಳಸಿ ಕೊಟ್ಟ ಕೇಂದ್ರ ಸರ್ಕಾರದ ಸಂಬಾರು ಮಂಡಳಿ ಯ ನರ್ಸರಿ ಯ ಚಿತ್ರಣ

ನರ್ಸರಿ ಮ್ಯಾನೇಜರ್ ಅವರ ಆಡಳಿತ ಕಚೇರಿ,ಮತ್ತು ಸಿಬ್ಬಂದಿ ವಸತಿ ಗೃಹ ದ ಛಾವಣಿ ಸೋರುವುದನ್ನು ತಪ್ಪಿಸಲು ಸಂಪೂರ್ಣ polythin ಟಾರ್ಪಲ್ ಇಂದ ಮುಚ್ಚಲಾಗಿದೆ, ಇಡಿ ಕಟ್ಟಡ ಶಿತಿಲ ವಾಗಿದೆ, ಕಚೇರಿ ಯಲ್ಲಿ ಹಲವಾರು ಕಡತಗಳು, ಕಂಪ್ಯೂಟರ್ ಇದೆ, ಶೀತಕ್ಕೆ ಇವುಗಳ ಕತೆ ಏನಾಗುವುದು
ಸಂಬಾರ ಗಿಡಗಳನ್ನು ರೈತರಿಗೆ ಬೆಳೆದು ಕೊಟ್ಟು ಅವರ ಬಾಳು ಬೆಳಗಿದ ನರ್ಸರಿ ಕಟ್ಟಡ, ಈಗ ದುಸ್ಥಿತಿ ಯಲ್ಲಿದೆ, ಇನ್ನಾದರೂ ಆ ಭಾಗದ ಚುನಾಯಿತ ಪ್ರತಿನಿದಿಗಳು, ವಿಶೇಷ ವಾಗಿ ರಾಜ್ಯದ ಸರಳ ಸಜ್ಜನಿಕೆಯ ಮಾಜಿ ಸಚಿವ, ಈಗ ಚಿಕ್ಕಮಗಳೂರು ಉಡುಪಿ ಯ ಹಾಲಿ ಲೋಕಸಭಾ ಸದಸ್ಯರಾದ ಶ್ರೀಯುತ ಕೋಟ ಶ್ರೀನಿವಾಸ ಪೂಜಾರಿ ಅವರು ಇದರ ಬಗ್ಗೆ ಗಮನಹರಿಸಿ,ಸ್ಥಳಕ್ಕೆ ಖುದ್ದು ಭೇಟಿ ಕೊಟ್ಟು ಒಂದೊಳ್ಳೆ ಸುಸಜ್ಜಿತ ಕಚೇರಿ ಮತ್ತು ಸಿಬ್ಬಂದಿ ವಸತಿ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈ ಗೊಳ್ಳಲಿ,
ಸ್ಥಳೀಯ ನಾಯಕರು ಈ ಬಗ್ಗೆ ಅವರ ಗಮನಕ್ಕೆ ತನ್ನಿ

ಬರಹ.
✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *