AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಪಿ.ಟಿ.ಸಿ.ಎಲ್ ಮತ್ತು ಮೆ.ಸ್ಕಾಂ’ನಲ್ಲಿ ‘ಅನುಭವಿ ನೌಕರ’ರಿಗೆ ‘ಉದ್ಯೋಗ ಕಲ್ಪಿ’ಸಿಕೊಡುವಂತೆ ಒಕ್ಕೂಟ ಆಗ್ರಹ…

1 min read

ಕೆ.ಪಿ.ಟಿ.ಸಿ.ಎಲ್ ಮತ್ತು ಮೆ.ಸ್ಕಾಂ’ನಲ್ಲಿ ‘ಅನುಭವಿ ನೌಕರ’ರಿಗೆ ‘ಉದ್ಯೋಗ ಕಲ್ಪಿ’ಸಿಕೊಡುವಂತೆ ಒಕ್ಕೂಟ ಆಗ್ರಹ…

ಚಿಕ್ಕಮಗಳೂರು-ಸ್ಥಳೀಯರು ಹಾಗೂ ಹೊರಗುತ್ತಿಗೆ ನೌಕರರಿಂದ ಹೊರ ಉಳಿದಿರುವ ಅನುಭವಿ ನೌಕರರಿಗೆ ಮೊದಲ ಪ್ರಾಮುಖ್ಯತೆ ನೀಡಿ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ರಾಜ್ಯ ಕೆ.ಪಿ.ಟಿ.ಸಿ.ಎಲ್. ಹೊರಗುತ್ತಿಗೆ ನೌಕರರ ಒಕ್ಕೂಟ ಮೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಎಸ್.ಲೋಕೇಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಮೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿ ಸಲುವಾಗಿ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಿದ್ದು ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಳೆದ 20 ವರ್ಷಗಳಿಂದ ಕೆ.ಪಿ.ಟಿ.ಸಿ.ಎಲ್ ಮತ್ತು ಮೆಸ್ಕಾಂ ಇಲಾಖೆಗಳಲ್ಲಿ ಎಲ್ಲಾ ರೀತಿಯ ನೌಕರರಿದ್ದಾರೆ ಎಂದರು.

ಈ ಪೈಕಿ ಹಲವು ಗುತ್ತಿಗೆದಾರರು ವಿವಿಧ ಕಾರಣಗಳನ್ನು ನೀಡಿ ಗುತ್ತಿಗೆ ಅವಧಿ ಮುಗಿದಿರುವುದ ರಿಂದ ಕೆಲಸ ನಿರ್ವಹಿಸದಂತೆ ನೌಕರರನ್ನು ಕೈಬಿಡಲಾಗಿದೆ.ಇದರಿಂದ ನೌಕರರುಗಳು ಒಂದೆಡೆ ಇಲಾಖೆಯ ಕೆಲಸವಿಲ್ಲದೇ,ಇನ್ನೊಂದೆಡೆ ಬೇರೆ ಕೆಲಸವೂ ದೊರೆಯದೇ ದಿಕ್ಕು ತೋಚದಂತೆ ಸ್ಥಿತಿಗೆ ತಲುಪಿದ್ದಾರೆ ಎಂದರು.

ರಾಜ್ಯದಲ್ಲಿ ಸರಿಸುಮಾರು 20 ಸಾವಿರಕ್ಕೂ ಹೆಚ್ಚು ನೌಕರರಿಗೆ ಕೆಲಸವಿಲ್ಲ. ಈ ನಡುವೆ ಸರ್ಕಾರ ಹೊಸದಾಗಿ ಉದ್ಯೋಗ ಸೃಷ್ಟಿಸಿ ಈ ರೀತಿ ಶಿಬಿರಗಳನ್ನು ಏರ್ಪಡಿಸಿ ತರಬೇತಿ ನೀಡಿ ಅವರುಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಬದಲು ಈಗಾಗಲೇ ಅನುಭವಿಗಳು ಹಾಗೂ ಉದ್ಯೋಗವಿಲ್ಲದೇ ಇರುವಂಥಹ ಈ ನೌಕರರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂಬoಧ ಸ್ಥಳೀಯ ಅಧಿಕಾರಿಗಳು ಸರ್ಕಾರ, ಸಚಿವರು ಹಾಗೂ ಉನ್ನತಮಟ್ಟದ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿ ಸಾಧಕ-ಬಾಧಕಗಳನ್ನು ವಿವರಿಸಬೇಕು. ಜೊತೆಗೆ ತರಬೇತಿಯ ನಂತರ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದ ಅವರು ಉತ್ತರಕನ್ನಡ ಅಥವಾ ಇತರೆ ಜಿಲ್ಲೆಗಳಿಂದ ಅಭ್ಯರ್ಥಿಗಳಿಗೆ ನೇಮಿಸಿಕೊಂಡಲ್ಲಿ ತರಬೇತಿ ಬಳಿಕ ಸ್ವಂತ ಜಿಲ್ಲೆಗೆ ವರ್ಗಾವಣೆಗೊಳ್ಳುತ್ತಾರೆ ಎಂದರು.

ಹೀಗಾಗಿ ಕೆ.ಪಿ.ಟಿ.ಸಿ.ಎಲ್ ಮತ್ತು ಮೆ.ಸ್ಕಾಂ ಮಲೆನಾಡು ಮತ್ತು ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೌಕರರ ಸಮಸ್ಯೆಯನ್ನು ಎದುರಿಸುತ್ತಿದೆ. ಆದ ಕಾರಣ ಜಿಲ್ಲೆಯ ಸ್ಥಳೀಯರಿಗೆ ಮೊದಲು ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಚಟುವಟಿಕೆ ಮುಂದುವರೆದಿರುವ ಕಾರಣ ಇಂದಿಗೂ ವಿದ್ಯುತ್ ಕಂಬ ಹತ್ತಿ, ಇಳಿಯುವ ಶಿಬಿರಗಳು ಹಮ್ಮಿಕೊಂಡು ಕಾಲಹರಣ ಮಾಡಿ ದುಂದುವೆಚ್ಚ ಮಾಡುತ್ತಿರುವುದು ಸಮಂಜಸವಲ್ಲ. ಹಾಗಾಗಿ ಅವೈಜ್ಞಾನಿಕ ತರಬೇತಿ ಶಿಬಿರಗಳನ್ನು ಕೈಬಿಟ್ಟು ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮೂಡಿಗೆರೆ ಉಪಾಧ್ಯಕ್ಷ ಎಂ.ಆರ್.ಕೃಷ್ಣ, ಸಲಹೆಗಾರ ರಂಜಿತ್, ಮುಖಂಡ ಅಪ್ಸರ್ ಅಹ್ಮದ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *