ಮೂಡಿಗೆರೆ :ಅಕ್ಷರ ಕಲಿಸಿದ ಗುರು ಪ್ರಾತಃ ಸ್ಮರಣೀಯರು: ಹಳೇಕೋಟೆ ರಮೇಶ್.
1 min read
ಮೂಡಿಗೆರೆ :ಅಕ್ಷರ
ಕಲಿಸಿದ ಗುರು ಪ್ರಾತಃ ಸ್ಮರಣೀಯರು: ಹಳೇಕೋಟೆ ರಮೇಶ್.
ಮೂಡಿಗೆರೆ :ಸಾಧಾರಣ ವ್ಯಕ್ತಿ ಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜ ದಲ್ಲಿ ಉನ್ನತ ಸ್ಥಾನ ಕ್ಕೇರಲು ಶಿಕ್ಷಕರ ಪಾತ್ರ ಬಹಳ ಮುಖ್ಯ.ಅಕ್ಷರ ಕಲಿಸಿದ ಗುರುಗಳು ಎಂದೆಂದಿಗೂ, ಪ್ರಾತಾ
ಸ್ಮರಣೀಯರು ಎಂದು ಸಾಹಿತ ಹಳೇಕೋಟೆ ರಮೇಶ್ ಹೇಳಿದರು.
ಅವರು ಇಂದು ಸಿರಿ ಗನ್ನಡ ವೇದಿಕೆ (ರಿ )ಮೂಡಿಗೆರೆ ತಾಲ್ಲೂಕು ಘಟಕ ವತಿಯಿಂದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಯಲ್ಲಿ *”ಸಾಧಕರಿಗೆ* *ಅಭಿನಂದನೆ.* ಹಾಗೂ *ಕ್ರೀಡಾ* *ಸಾಮಗ್ರಿ ವಿತರಣೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಶಿಸ್ತು ಸಂಯಮ ವಿವೇಕ ವನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ ಯಿಂದ ವಿದ್ಯಾರ್ಥಿಗಳ ಮಾನಸಿಕ ಅರೋಗ್ಯ ದ ಮೇಲೆ ವಿಪರೀತ ದುಷ್ಪರಿಣಾಮ ಗಳು ಬಿರುತ್ತಿರುವುದು ನೋವಿನ ಸಂಗತಿ ಎಂದರು.
ಸಿರಿಗನ್ನಡವೇದಿಕೆ ಪ್ರಧಾನ ಕಾರ್ಯದರ್ಶಿ *ಡಾ. ಮೋಹನ್* *ರಾಜಣ್ಣ* ಪ್ರಸ್ತಾವಿಕ ವಾಗಿ ಮಾತನಾಡುತ್ತಾ ಮನುಷ್ಯನಿಗೆ ಮೌಲ್ಯಧಾರಿತ ಜೀವನ ಕಲಿಸುವುದೇ ನಿಜವಾದ ಶಿಕ್ಷಣ. ಶಿಕ್ಷಕರು ಸಮಾಜದಲ್ಲಿ ಉತ್ತಮ ವ್ಯಕ್ತಿ ಗಳನ್ನು ರೂಪಿಸುವ ಶಿಲ್ಪ ಗಳಾಗಿದ್ದಾರೆ ಆದ್ದರಿಂದ ಶಿಕ್ಷಕರು ಮಕ್ಕಳ ನಾಡಿ ಮಿಡಿತ ಅರಿತು ವಿದ್ಯೆ ಕಲಿಸಬೇಕು ಎಂದರು.
ಸಿರಿ ಗನ್ನಡ ವೇದಿಕೆ ಅಧ್ಯಕ್ಷ ರಾದ *ಎಂ* . *ಆರ್. ಪೂರ್ಣೇಶ್ ಮೂರ್ತಿ*
ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಜೀವನ ಬಹಳ ಅಮೂಲ್ಯ ವಾದದ್ದು ವ್ಯಾಸಂಗದ ಜೊತೆಗೆ ಮುಂದಿನ ಜವಾಬ್ದಾರಿ ಅರಿವು ಕೂಡ ನಿಮಗಿರಬೇಕು ಸಮಾಜದಲ್ಲಿ ಉತ್ತಮ ವ್ಯಕ್ತಿ ಗಳನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿ ಸಮಾಜದಲ್ಲಿ ಪರಿವರ್ತನೆಯ ಬೆಳಕು ತರುವ ಕೆಲಸ ವನ್ನು ಶಿಕ್ಷಕರು ಪ್ರಾಮಾಣಿಕ ವಾಗಿ ಮಾಡಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೂಡಿಗೆರೆ ತಾಲ್ಲೂಕು *ಅಧ್ಯಕ್ಷ ಬಿ. ಎಸ್.* *ಒಂಕಾರ್* . ಖಜಾಂಚಿ. ಹಮೀದ್ ಸಬ್ಬೆನಹಳ್ಳಿ.
. ಮೈದಿನ್ ಇಸ್ಮಾಯಿಲ್. ದಾನಿ ಗಳಾದ ಚಂದ್ರಮತಿ.
ಶಾಲಾಭಿರುದ್ಧಿ ಸಮಿತಿ ಅಧ್ಯಕ್ಷಣಿ. ಸಮೀನಾ ಬಾನು. ಗಂಗಾಧರಪ್ಪ ಮಾತನಾಡಿದರು.
ಪಟ್ಟಣಪಂಚಾಯಿತಿ ಸದಸ್ಯಶ್ರೀಮತಿ ಕಮಲಮ್ಮ. ಮುಖಂಡರಾದ ಕುಮಾರ್ ರಾಜ್.. ಆನಂದ್ ರಾಜ್. ಹಿಬಾದ್..
ಶಿಕ್ಷಕರಾದ ತೋಟಪ್ಪ. ಶಿಕ್ಷಕಿ ಭಾರತಿ. ಮತ್ತು ಪೋಷಕರು. ವಿದ್ಯಾರ್ಥಿಗಳು. ಉಪಸ್ಥಿತರಿದ್ದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಪ್ರಶಸ್ತಿ ವಿಜೇತ ಯಾಸ್ಮಿ ನ್ ಸುಲ್ತಾನ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಾನಿಗಳಾದ ಚಂದ್ರಮತಿ ಚಂದ್ರಶೇಖರಯ್ಯ. ಶಾಲೆಗೆ ಕ್ರೀಡಾ ಸಾಮಗ್ರಿ ನೀಡಿಮಾತನಾಡಿದರು .
ಯಾಸ್ಮಿನ್ ಸುಲ್ತಾನ್ ಮತ್ತು
ಎಂ. ಆರ್.ಪೂರ್ಣೇಶ್ ಮೂರ್ತಿ
ಮತ್ತು ಚಂದ್ರಮತಿ ರವರಿಗೆ ಸನ್ಮಾನಿಸಲಾಯಿತು.
ನಿರೂಪಣೆ ಶಕುಂತಲಾ ಪಾಟೀಲ್…
ಸ್ವಾಗತ -ವಂದನಾರ್ಪಣೆ. ಶಿಕ್ಷಕ ಜಿ .
ಎಲ್.ಗಂಗಾಧರಪ್ಪ ನೆರವೇರಿಸಿದರು.
ಎಲ್ಲರಿಗೂ ಸಿಹಿ ವಿತರಿ ಸಲಾಯಿತು